‘ಶಾಲುಗಳು ಕಬೋರ್ಡ್ ತುಂಬಿಹೋಗಿವೆ, ಹೊಸ ಶಾಲುಗಳಿಗೆ ಜಾಗವಿಲ್ಲ’.
‘ಶಾಲಿನ ಬದಲು ಚಿನ್ನದ ಉಂಗುರ, ಸರ ಕೊಡಿ ಅಂತ ಕೇಳಲಾಗುತ್ತಾ?’
‘ಏನನ್ನೂ ಕೇಳಬೇಡಿ, ಮನೇಲಿ ಇರುವ ಶಾಲುಗಳ ಸ್ಟಾಕ್ ಕ್ಲಿಯರ್ ಮಾಡಿ, ಸೀರೆ ಇಡಲು ಜಾಗ ಮಾಡಿಕೊಡಿ’ ಎಂದರು.
ಅಷ್ಟೊತ್ತಿಗೆ ಕನ್ನಡ ಸಂಘದವರು ಬಂದು, ‘ಕೊರೊನಾ ಕಾರಣದಿಂದ ರಾಜ್ಯೋತ್ಸವ ಆಚರಣೆ ಬದಲು, ಮನೆಗೇ ಹೋಗಿ ಸಾಹಿತಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಮಾಡ್ತಿದ್ದೀವಿ’ ಎಂದು ಗಿರಿಯವರಿಗೆ ಶಾಲು ಹೊದಿಸಿದರು.
‘ಪತಿಯ ಸಾಹಿತ್ಯಕ್ಕೆ ಪ್ರೇರಣೆಯಾಗಿರುವ ನಿಮಗೂ ಗೌರವಾರ್ಪಣೆ’ ಎಂದು ಅನು ಅವರಿಗೂ ಶಾಲು ಹೊದಿಸಿ ಹೋದರು.
‘ಛೇ, ಇನ್ನೆರಡು ಶಾಲು ಸೇರ್ಪಡೆ... ಶಾಲುಗಳಿಂದ ನಿಮಗೆ ಷರ್ಟ್ ಅಥವಾ ನನಗೆ ಬ್ಲೌಸ್ ಹೊಲಿಸಲಾಗಲ್ಲ, ವೇಸ್ಟ್ ಕಣ್ರೀ...’ ಮೂಗು ಮುರಿದರು ಅನು.