<p>ವಿಶಲ್ ಊದಿ ‘ಹೋಲ್ಡಾನ್...’ ಅಂದ್ರು ಸಿ.ಎಂ.</p>.<p>ಬ್ರೇಕ್ ಹಾಕಿ ಬಸ್ ನಿಲ್ಲಿಸಿದ ಸಾರಿಗೆ ಮಂತ್ರಿ, ‘ಯಾಕೆ ಸಾರ್ ಹೋಲ್ಡಾನ್ ಹೇಳಿದ್ರಿ?’ ಅಂತ ಕೇಳಿದ್ರು.</p>.<p>‘ಸೌಲಭ್ಯ ಸಾಲದು ಅಂತ ಸಾರಿಗೆ ಪ್ರಯಾಣಿಕರು ಬಸ್ ಇಳಿದಿದ್ದಾರೆ, ಮತ್ತೆ<br />ಹತ್ತುವುದಿಲ್ಲವಂತೆ...’ ಅಂದ್ರು ಸಿ.ಎಂ.</p>.<p>‘ಸ್ಟೇರಿಂಗ್, ಹಾರ್ನ್, ಕ್ಲಚ್ಚು, ಬ್ರೇಕು ಸರಿಯಾಗೇ ಇದೆಯಲ್ಲಾ ಸಾರ್’.</p>.<p>‘ಬಸ್ ಭದ್ರವಾಗಿದ್ದರೂ ಪ್ರಯಾಣಿಕರಿಗೆ ಸುಭದ್ರತೆ ಇಲ್ವಂತೆ, ಬಸ್ಸಿನಲ್ಲಿ ಉಸಿರುಕಟ್ಟುವ ವಾತಾವರಣ ಇದೆಯಂತೆ’.</p>.<p>‘ಕಿಟಕಿ ಗ್ಲಾಸ್ ಓಪನ್ ಮಾಡಿದ್ರೆ ಗಾಳಿ, ಬೆಳಕು ಬರುತ್ತದೆ. ಪ್ರಪಂಚದ ಪರಿಸ್ಥಿತಿ ಕಾಣುತ್ತೆ ಅಂತ ಹೇಳಿ ಸಾರ್’.</p>.<p>‘ಹೇಳಿದೆ, ಕೊರೊನಾ ಕಷ್ಟಕಾಲದಲ್ಲಿ ಇದಕ್ಕಿಂಥ ಹೆಚ್ಚಿನ ಸೌಕರ್ಯ ಕೊಡಲಾಗದು, ದಯವಿಟ್ಟು ಸಹಕರಿಸಿ ಅಂತ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಬಸ್ ಹತ್ತಲು ಹಟ ಮಾಡಿದ್ರೆ ಹೋದ ವರ್ಷ ಮಾಡಿದಂತೆ ಕೊರೊನಾ ನೆಪದಲ್ಲಿ ಬಸ್ ಸೇವೆಯನ್ನೇ ಬಂದ್ ಮಾಡ್ತೀವಿ ಅಂತನೂ ಹೆದರಿಸಿದೆ’.</p>.<p>‘ಹೆದರಿಕೊಂಡ್ರಾ ಸಾರ್?’</p>.<p>‘ಇಲ್ಲ, ಸರ್ಕಾರವನ್ನೇ ಪಂಚರ್ ಮಾಡ್ತೀವಿ ಅಂತ ನನ್ನನ್ನೇ ಹೆದರಿಸಿದ್ರು’.</p>.<p>‘ದಯವಿಟ್ಟು ಬಂದು ಬಸ್ ಹತ್ತಿ, ಬಸ್ ಚಕ್ರ ಉರುಳಿದರಷ್ಟೇ ನಮ್ಮ ಸರ್ಕಾರ, ನಿಮ್ಮ ಸಂಸಾರ ಮುಂದಕ್ಕೆ ಸಾಗೋದು’ ಮುಷ್ಕರನಿರತ ಸಾರಿಗೆ ಪ್ರಯಾಣಿಕರಿಗೆ ಸಿ.ಎಂ. ಮನವಿ ಮಾಡಿದರು.</p>.<p>‘ನಾವೇನು ರಾಜಹಂಸ, ಐರಾವತ, ಸುಖಾಸೀನ ಸೇವೆ ಕೇಳ್ತಿಲ್ಲ, ಸಾಧಾರಣ ಬಸ್ಸಿನ ಸುಖಕರ ಪ್ರಯಾಣ ಒದಗಿಸಿ’ ಪ್ರಯಾಣಿಕರು ಪಟ್ಟು ಹಿಡಿದರು.</p>.<p>ಸಿ.ಎಂ, ಸಾರಿಗೆ ಮಂತ್ರಿ ತಲೆ ಕೆಡಿಸಿಕೊಂಡರು.</p>.<p>‘ನಿಮ್ಮ ಸೇವಾ ಸೌಕರ್ಯಗಳನ್ನು ಟಿಕೆಟ್ ಹಿಂದೆ ಬರೆದುಕೊಡ್ತೀವಿ. ಕೊರೊನಾ ಕಾಟ ಮುಗಿದ ಮೇಲೆ ಟಿಕೆಟ್ ತೋರಿಸಿ ಈಸ್ಕೊಳ್ರಿ...’ ಎಂದು ಎಲ್ಲರಿಗೂ ಟಿಕೆಟ್ ಹಂಚಿ, ಬಸ್ ಹತ್ತಿ ‘ರೈಟ್...’ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಶಲ್ ಊದಿ ‘ಹೋಲ್ಡಾನ್...’ ಅಂದ್ರು ಸಿ.ಎಂ.</p>.<p>ಬ್ರೇಕ್ ಹಾಕಿ ಬಸ್ ನಿಲ್ಲಿಸಿದ ಸಾರಿಗೆ ಮಂತ್ರಿ, ‘ಯಾಕೆ ಸಾರ್ ಹೋಲ್ಡಾನ್ ಹೇಳಿದ್ರಿ?’ ಅಂತ ಕೇಳಿದ್ರು.</p>.<p>‘ಸೌಲಭ್ಯ ಸಾಲದು ಅಂತ ಸಾರಿಗೆ ಪ್ರಯಾಣಿಕರು ಬಸ್ ಇಳಿದಿದ್ದಾರೆ, ಮತ್ತೆ<br />ಹತ್ತುವುದಿಲ್ಲವಂತೆ...’ ಅಂದ್ರು ಸಿ.ಎಂ.</p>.<p>‘ಸ್ಟೇರಿಂಗ್, ಹಾರ್ನ್, ಕ್ಲಚ್ಚು, ಬ್ರೇಕು ಸರಿಯಾಗೇ ಇದೆಯಲ್ಲಾ ಸಾರ್’.</p>.<p>‘ಬಸ್ ಭದ್ರವಾಗಿದ್ದರೂ ಪ್ರಯಾಣಿಕರಿಗೆ ಸುಭದ್ರತೆ ಇಲ್ವಂತೆ, ಬಸ್ಸಿನಲ್ಲಿ ಉಸಿರುಕಟ್ಟುವ ವಾತಾವರಣ ಇದೆಯಂತೆ’.</p>.<p>‘ಕಿಟಕಿ ಗ್ಲಾಸ್ ಓಪನ್ ಮಾಡಿದ್ರೆ ಗಾಳಿ, ಬೆಳಕು ಬರುತ್ತದೆ. ಪ್ರಪಂಚದ ಪರಿಸ್ಥಿತಿ ಕಾಣುತ್ತೆ ಅಂತ ಹೇಳಿ ಸಾರ್’.</p>.<p>‘ಹೇಳಿದೆ, ಕೊರೊನಾ ಕಷ್ಟಕಾಲದಲ್ಲಿ ಇದಕ್ಕಿಂಥ ಹೆಚ್ಚಿನ ಸೌಕರ್ಯ ಕೊಡಲಾಗದು, ದಯವಿಟ್ಟು ಸಹಕರಿಸಿ ಅಂತ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಬಸ್ ಹತ್ತಲು ಹಟ ಮಾಡಿದ್ರೆ ಹೋದ ವರ್ಷ ಮಾಡಿದಂತೆ ಕೊರೊನಾ ನೆಪದಲ್ಲಿ ಬಸ್ ಸೇವೆಯನ್ನೇ ಬಂದ್ ಮಾಡ್ತೀವಿ ಅಂತನೂ ಹೆದರಿಸಿದೆ’.</p>.<p>‘ಹೆದರಿಕೊಂಡ್ರಾ ಸಾರ್?’</p>.<p>‘ಇಲ್ಲ, ಸರ್ಕಾರವನ್ನೇ ಪಂಚರ್ ಮಾಡ್ತೀವಿ ಅಂತ ನನ್ನನ್ನೇ ಹೆದರಿಸಿದ್ರು’.</p>.<p>‘ದಯವಿಟ್ಟು ಬಂದು ಬಸ್ ಹತ್ತಿ, ಬಸ್ ಚಕ್ರ ಉರುಳಿದರಷ್ಟೇ ನಮ್ಮ ಸರ್ಕಾರ, ನಿಮ್ಮ ಸಂಸಾರ ಮುಂದಕ್ಕೆ ಸಾಗೋದು’ ಮುಷ್ಕರನಿರತ ಸಾರಿಗೆ ಪ್ರಯಾಣಿಕರಿಗೆ ಸಿ.ಎಂ. ಮನವಿ ಮಾಡಿದರು.</p>.<p>‘ನಾವೇನು ರಾಜಹಂಸ, ಐರಾವತ, ಸುಖಾಸೀನ ಸೇವೆ ಕೇಳ್ತಿಲ್ಲ, ಸಾಧಾರಣ ಬಸ್ಸಿನ ಸುಖಕರ ಪ್ರಯಾಣ ಒದಗಿಸಿ’ ಪ್ರಯಾಣಿಕರು ಪಟ್ಟು ಹಿಡಿದರು.</p>.<p>ಸಿ.ಎಂ, ಸಾರಿಗೆ ಮಂತ್ರಿ ತಲೆ ಕೆಡಿಸಿಕೊಂಡರು.</p>.<p>‘ನಿಮ್ಮ ಸೇವಾ ಸೌಕರ್ಯಗಳನ್ನು ಟಿಕೆಟ್ ಹಿಂದೆ ಬರೆದುಕೊಡ್ತೀವಿ. ಕೊರೊನಾ ಕಾಟ ಮುಗಿದ ಮೇಲೆ ಟಿಕೆಟ್ ತೋರಿಸಿ ಈಸ್ಕೊಳ್ರಿ...’ ಎಂದು ಎಲ್ಲರಿಗೂ ಟಿಕೆಟ್ ಹಂಚಿ, ಬಸ್ ಹತ್ತಿ ‘ರೈಟ್...’ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>