<p>ಚಟ್ನಿಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದರು. ಜನರ ಮನವೊಲಿಸಲು ಅಧಿಕಾರಿ ಊರಿಗೆ ಬಂದರು.</p>.<p>‘ಪ್ರಜಾಪ್ರಭುತ್ವ ಗೌರವಿಸಿ ಚುನಾವಣೆಯಲ್ಲಿ ಭಾಗವಹಿಸಿ’ ಸಾಹೇಬ್ರು ವಿನಂತಿಸಿಕೊಂಡರು.</p>.<p>‘ನಮ್ಮೂರಿಗೆ ಮೂಲ ಸೌಕರ್ಯ ಒದಗಿಸಿಕೊಡಿ’ ಎಂದ ತಿಮ್ಮಜ್ಜ.</p>.<p>‘ಊರಿನ ರಸ್ತೆಗೆ ಟಾರು, ಕುಡಿಯಲು ನೀರು, ಚರಂಡಿ, ಬೀದಿ ದೀಪದ ವ್ಯವಸ್ಥೆ ಮಾಡ್ತೀವಿ’ ಎಂದರು ಸಾಹೇಬ್ರು.</p>.<p>‘ಕೆರೆಕಟ್ಟೆ ಒಣಗಿವೆ, ಅಂತರ್ಜಲ ಕುಸಿದಿದೆ. ಸರ್ಕಾರದಿಂದ ನಮ್ಮೂರಿಗೊಂದು ನದಿ ಸ್ಯಾಂಕ್ಷನ್ ಮಾಡಿಸಿ’ ಪರಮೇಶಿ ಒತ್ತಾಯಿಸಿದ.</p>.<p>‘ನದಿ ಕೊಡೋಕೆ ಸರ್ಕಾರ ಭಗೀರಥನಲ್ಲ, ಬೇಕಾದ್ರೆ ಬೋರ್ ಕೊರೆಸಿ ನೀರಿನ ವ್ಯವಸ್ಥೆ ಮಾಡ್ತೀವಿ...’ ಸಾಹೇಬ್ರು ಸಿಟ್ಟಾದರು.</p>.<p>‘ನಮ್ಮೂರಲ್ಲಿ ಮುತ್ತಾತನ ಕಾಲದಲ್ಲಿ ನದಿ ಹರಿಯುತ್ತಿತ್ತಂತೆ. ಆ ನದಿ ಪಾತ್ರದ ಮರಳನ್ನು ಲೂಟಿ ಮಾಡಲಾಗಿದೆ, ನದಿ ನಾಶವಾಗಿದೆ’.</p>.<p>‘ಆಯ್ತು, ಮರಳು ದಂಧೆಗೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ತೀವಿ’.</p>.<p>‘ಬೆಟ್ಟದ ದೇವರ ಶಾಪದಿಂದ ಊರಿಗೆ ಬರ ಬಂದಿದೆ...’ ತಿಮ್ಮಜ್ಜ ನಿಟ್ಟುಸಿರುಬಿಟ್ಟ.</p>.<p>‘ದೇವರ ಪೂಜೆ, ಉತ್ಸವ ಮಾಡಿ ಶಾಪ ವಿಮೋಚನೆ ಮಾಡಿಕೊಳ್ಳಿ’ ಸಾಹೇಬ್ರು ಸಲಹೆ ಕೊಟ್ಟರು.</p>.<p>‘ದೇವರೂ ಇಲ್ಲ, ಬೆಟ್ಟವೂ ಇಲ್ಲ. ಕಲ್ಲು ಗಣಿಗಾರಿಕೆಯವರು ಬೆಟ್ಟದ ಮೇಲಿದ್ದ ದೇವಸ್ಥಾನ ಕೆಡವಿ, ಬೆಟ್ಟವನ್ನು ಒಡೆದು ಗುರುತಿಲ್ಲದಂತೆ ಮಾಡಿದ್ದಾರೆ’ ಸೀನ ಸಂಕಟಪಟ್ಟ.</p>.<p>‘ಸರ್ಕಾರ ನಮ್ಮೂರಲ್ಲಿ ಒಂದು ಬೆಟ್ಟ ನಿರ್ಮಾಣ ಮಾಡಬೇಕು’ ಗೋವಿಂದ ಆಗ್ರಹಿಸಿದ.</p>.<p>‘ತಮಾಷೆ ಮಾಡ್ತಿದ್ದೀರಾ? ಬೆಟ್ಟವನ್ನು ಕಟ್ಟಿಕೊಡಲಾಗುತ್ತೇನ್ರೀ?’ ಸಾಹೇಬ್ರು ನಕ್ಕರು.</p>.<p>‘ನಗಬೇಡಿ ಸಾಹೇಬ್ರೇ, ನಾವೇನು ವಿಧಾನಸೌಧ ಕಟ್ಟಿ ಅಂತ ಕೇಳಲಿಲ್ಲ, ಊರಲ್ಲಿ ಇದ್ದ ಬೆಟ್ಟವನ್ನು ನಾಶ ಮಾಡಲಾಗಿದೆ, ಅದನ್ನು ಪುನರ್ನಿರ್ಮಾಣ ಮಾಡಿ’ ಸಿದ್ಧನಂಜ ರೇಗಿದ.</p>.<p>ಸಾಹೇಬ್ರಿಗೆ ಉತ್ತರ ಹೊರಡಲಿಲ್ಲ, ‘ಸರಿ, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರ್ತೀನಿ...’ ಎಂದು ಹೇಳಿ ಕಾರು ಹತ್ತಿ ಹೊರಟರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಚಟ್ನಿಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದರು. ಜನರ ಮನವೊಲಿಸಲು ಅಧಿಕಾರಿ ಊರಿಗೆ ಬಂದರು.</p>.<p>‘ಪ್ರಜಾಪ್ರಭುತ್ವ ಗೌರವಿಸಿ ಚುನಾವಣೆಯಲ್ಲಿ ಭಾಗವಹಿಸಿ’ ಸಾಹೇಬ್ರು ವಿನಂತಿಸಿಕೊಂಡರು.</p>.<p>‘ನಮ್ಮೂರಿಗೆ ಮೂಲ ಸೌಕರ್ಯ ಒದಗಿಸಿಕೊಡಿ’ ಎಂದ ತಿಮ್ಮಜ್ಜ.</p>.<p>‘ಊರಿನ ರಸ್ತೆಗೆ ಟಾರು, ಕುಡಿಯಲು ನೀರು, ಚರಂಡಿ, ಬೀದಿ ದೀಪದ ವ್ಯವಸ್ಥೆ ಮಾಡ್ತೀವಿ’ ಎಂದರು ಸಾಹೇಬ್ರು.</p>.<p>‘ಕೆರೆಕಟ್ಟೆ ಒಣಗಿವೆ, ಅಂತರ್ಜಲ ಕುಸಿದಿದೆ. ಸರ್ಕಾರದಿಂದ ನಮ್ಮೂರಿಗೊಂದು ನದಿ ಸ್ಯಾಂಕ್ಷನ್ ಮಾಡಿಸಿ’ ಪರಮೇಶಿ ಒತ್ತಾಯಿಸಿದ.</p>.<p>‘ನದಿ ಕೊಡೋಕೆ ಸರ್ಕಾರ ಭಗೀರಥನಲ್ಲ, ಬೇಕಾದ್ರೆ ಬೋರ್ ಕೊರೆಸಿ ನೀರಿನ ವ್ಯವಸ್ಥೆ ಮಾಡ್ತೀವಿ...’ ಸಾಹೇಬ್ರು ಸಿಟ್ಟಾದರು.</p>.<p>‘ನಮ್ಮೂರಲ್ಲಿ ಮುತ್ತಾತನ ಕಾಲದಲ್ಲಿ ನದಿ ಹರಿಯುತ್ತಿತ್ತಂತೆ. ಆ ನದಿ ಪಾತ್ರದ ಮರಳನ್ನು ಲೂಟಿ ಮಾಡಲಾಗಿದೆ, ನದಿ ನಾಶವಾಗಿದೆ’.</p>.<p>‘ಆಯ್ತು, ಮರಳು ದಂಧೆಗೆ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ತೀವಿ’.</p>.<p>‘ಬೆಟ್ಟದ ದೇವರ ಶಾಪದಿಂದ ಊರಿಗೆ ಬರ ಬಂದಿದೆ...’ ತಿಮ್ಮಜ್ಜ ನಿಟ್ಟುಸಿರುಬಿಟ್ಟ.</p>.<p>‘ದೇವರ ಪೂಜೆ, ಉತ್ಸವ ಮಾಡಿ ಶಾಪ ವಿಮೋಚನೆ ಮಾಡಿಕೊಳ್ಳಿ’ ಸಾಹೇಬ್ರು ಸಲಹೆ ಕೊಟ್ಟರು.</p>.<p>‘ದೇವರೂ ಇಲ್ಲ, ಬೆಟ್ಟವೂ ಇಲ್ಲ. ಕಲ್ಲು ಗಣಿಗಾರಿಕೆಯವರು ಬೆಟ್ಟದ ಮೇಲಿದ್ದ ದೇವಸ್ಥಾನ ಕೆಡವಿ, ಬೆಟ್ಟವನ್ನು ಒಡೆದು ಗುರುತಿಲ್ಲದಂತೆ ಮಾಡಿದ್ದಾರೆ’ ಸೀನ ಸಂಕಟಪಟ್ಟ.</p>.<p>‘ಸರ್ಕಾರ ನಮ್ಮೂರಲ್ಲಿ ಒಂದು ಬೆಟ್ಟ ನಿರ್ಮಾಣ ಮಾಡಬೇಕು’ ಗೋವಿಂದ ಆಗ್ರಹಿಸಿದ.</p>.<p>‘ತಮಾಷೆ ಮಾಡ್ತಿದ್ದೀರಾ? ಬೆಟ್ಟವನ್ನು ಕಟ್ಟಿಕೊಡಲಾಗುತ್ತೇನ್ರೀ?’ ಸಾಹೇಬ್ರು ನಕ್ಕರು.</p>.<p>‘ನಗಬೇಡಿ ಸಾಹೇಬ್ರೇ, ನಾವೇನು ವಿಧಾನಸೌಧ ಕಟ್ಟಿ ಅಂತ ಕೇಳಲಿಲ್ಲ, ಊರಲ್ಲಿ ಇದ್ದ ಬೆಟ್ಟವನ್ನು ನಾಶ ಮಾಡಲಾಗಿದೆ, ಅದನ್ನು ಪುನರ್ನಿರ್ಮಾಣ ಮಾಡಿ’ ಸಿದ್ಧನಂಜ ರೇಗಿದ.</p>.<p>ಸಾಹೇಬ್ರಿಗೆ ಉತ್ತರ ಹೊರಡಲಿಲ್ಲ, ‘ಸರಿ, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರ್ತೀನಿ...’ ಎಂದು ಹೇಳಿ ಕಾರು ಹತ್ತಿ ಹೊರಟರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>