<p>‘ಸಾರ್ ತಮಗೆ ಅಭಿನಂದನೆಗಳು. ‘ತುರಿಕೆ’ ಪತ್ರಿಕೆಯ ಸಂದರ್ಶನಕ್ಕೆ ಸ್ವಾಗತ. ರಾಜ್ಯದ ಪರಿಸ್ಥಿತಿ ಉತ್ತಮಗೊಳಿಸೋಕೆ ತಮ್ಮ ಮುಂದಿನ ಯೋಜನೆಗಳೇನು?’</p>.<p>‘ನಾನು ವರಿಷ್ಠರ ಜೊತೆಗೆ ಸಮಾಲೋಚನೆ ಮಾಡಿ ನಿಮಗೆ ತಿಳಿಸ್ತೀನಿ!’</p>.<p>‘ಇನ್ನೂ ಸಂಪುಟ ರಚನೆ ಆಗಿಲ್ಲ. ಏನು ಕಾರಣ ಸಾರ್?’</p>.<p>‘ಮಂತ್ರಿ ಪದವಿಗೆ ಒಳ್ಳೆ ವೇಟ್ ಇರೋರು ಬೇಕು ಅಂತ ವರಿಷ್ಠರು ಹೇಳಿರೋದ್ರಿಂದ ಎಲ್ಲಾರೂ ಡೆಲ್ಲೀಲಿ ವೇಟ್ ಚೆಕ್ ಮಾಡಿಸ್ತಿದ್ದಾರೆ. ಜಾಸ್ತಿ ವೇಟ್ ಇರೋರು ಅಪಾಯಿಂಟ್ ಆಗಿ ಬರ್ತರೆ ತಡೀರಿ!’</p>.<p>‘ಸದಾನಂದ, ಶೆಟ್ಟರಾದ ಮೇಲೆ ನೀವೇ ಮೂರನೇ ಅಲೆಯಂತೆ?’</p>.<p>‘ಒಬ್ಬರು ರೆಸ್ಟಲ್ಲವರೆ, ಇನ್ನೊಬ್ರು ಸಂಪುಟಕ್ಕೆ ಬರಲ್ಲ ಅಂದವ್ರೆ! ಅವರೂ ನಮ್ಮ ಕಳ್ಳು-ಬಳ್ಳಿ ಇದ್ದಂಗೆ. ಮೂರನೇ ಅಲೆ ಭಾಳ ಪವರ್ಫುಲ್ ಕಣ್ರೀ’</p>.<p>‘ಮೊನ್ನೆ ಇಬ್ಬರು ಮಾಜಿ ಮಂತ್ರಿಗಳು ತಾರಾಮಾರ ಬೈದಾಡಿಕೊಂಡಿದಾರಂತೆ!’</p>.<p>‘ಅವರಿಬ್ಬರ ಹೆಸರಲ್ಲೂ ಸೋ, ಶೋ ಇದೆ. ಸೋ ಅಧಿಕಾರಕ್ಕಾಗಿ ಶೋ ಮಸ್ಟ್ ಗೋ ಆನ್! ಸುಮ್ನೆ ಮಜಾ ನೋಡಿ’.</p>.<p>‘ದೇವೇಗೌಡರನ್ನ ಭೇಟಿ ಮಾಡಿದ್ರಂತೆ?’</p>.<p>‘ಅವರು ನಮ್ಮ ಪಿತಾಮಹರು. ಅದು ನಮ್ಮ ತವರುಮನೆ ಇದ್ದಂಗೆ! ಪವರ್ ಉಳಿಸಿಕಳಕ್ಕೆ ಅವಸರಕ್ಕೊಬ್ಬಣ್ಣ ಬೇಕಾಯ್ತನೆ’.</p>.<p>‘ಗಣಿ ದೂಳು ಎಲ್ಲಾ ಕಡೆ ತುಂಬಿಕೊಂಡದಲ್ಲಾ ಸಾರ್. ನಿಮ್ಮ ಯೋಜನೆ ಏನು?’</p>.<p>‘ಗಣಿ ಕೊರೆಯೋ ಕಳ್ಳ ಅಪ್ಪಿಲಿ, ಅವ್ವಿಲಿ, ಸಣ್ಣಿಲಿ, ದೊಡ್ಡಿಲಿಗಳಿಗೆ ಸಮಯ ಸಂದರ್ಭ ನೋಡಿಕಂಡು ಇಲಿ ಪಾಷಾಣ ಹಾಕ್ತೀವಿ! ಒಳ್ಳೆ ಇಲಿಗಳೆಲ್ಲಾ ಕಿಂದರಿಜೋಗಿ ಹಿಂದೆ ಬಂದಂಗೆ ನನ್ನಿಂದೆ ಬರ್ತವೆ’.</p>.<p>‘ಕರ್ನಾಟಕದ ರಾಜಕೀಯದಲ್ಲಿ ಶುರುವಾಗಿರೋ ಕಾವಿ ಬ್ರಿಗೇಡ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?’</p>.<p>‘ಇದು ಕರ್ನಾಟಕದಲ್ಲಿ ಉತ್ತರಪ್ರದೇಶದ ಥರವೇ ಆರಂಭ ಆಗಿರೋ ಮಾರ್ಮಿಕ ಕಾವಿ ಕ್ರಾಂತಿ. ನನ್ನನ್ನ ಅವರು ಒಪ್ಪಿಕೊಂಡು ಭಾಳ ಪ್ರಬುದ್ಧತೆ, ಬುದ್ಧಿವಂತಿಕೆ ತೋರಿಸವ್ರೆ! ಅವರ ಮಾತೇ ಶಾಸನ!’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಸಾರ್ ತಮಗೆ ಅಭಿನಂದನೆಗಳು. ‘ತುರಿಕೆ’ ಪತ್ರಿಕೆಯ ಸಂದರ್ಶನಕ್ಕೆ ಸ್ವಾಗತ. ರಾಜ್ಯದ ಪರಿಸ್ಥಿತಿ ಉತ್ತಮಗೊಳಿಸೋಕೆ ತಮ್ಮ ಮುಂದಿನ ಯೋಜನೆಗಳೇನು?’</p>.<p>‘ನಾನು ವರಿಷ್ಠರ ಜೊತೆಗೆ ಸಮಾಲೋಚನೆ ಮಾಡಿ ನಿಮಗೆ ತಿಳಿಸ್ತೀನಿ!’</p>.<p>‘ಇನ್ನೂ ಸಂಪುಟ ರಚನೆ ಆಗಿಲ್ಲ. ಏನು ಕಾರಣ ಸಾರ್?’</p>.<p>‘ಮಂತ್ರಿ ಪದವಿಗೆ ಒಳ್ಳೆ ವೇಟ್ ಇರೋರು ಬೇಕು ಅಂತ ವರಿಷ್ಠರು ಹೇಳಿರೋದ್ರಿಂದ ಎಲ್ಲಾರೂ ಡೆಲ್ಲೀಲಿ ವೇಟ್ ಚೆಕ್ ಮಾಡಿಸ್ತಿದ್ದಾರೆ. ಜಾಸ್ತಿ ವೇಟ್ ಇರೋರು ಅಪಾಯಿಂಟ್ ಆಗಿ ಬರ್ತರೆ ತಡೀರಿ!’</p>.<p>‘ಸದಾನಂದ, ಶೆಟ್ಟರಾದ ಮೇಲೆ ನೀವೇ ಮೂರನೇ ಅಲೆಯಂತೆ?’</p>.<p>‘ಒಬ್ಬರು ರೆಸ್ಟಲ್ಲವರೆ, ಇನ್ನೊಬ್ರು ಸಂಪುಟಕ್ಕೆ ಬರಲ್ಲ ಅಂದವ್ರೆ! ಅವರೂ ನಮ್ಮ ಕಳ್ಳು-ಬಳ್ಳಿ ಇದ್ದಂಗೆ. ಮೂರನೇ ಅಲೆ ಭಾಳ ಪವರ್ಫುಲ್ ಕಣ್ರೀ’</p>.<p>‘ಮೊನ್ನೆ ಇಬ್ಬರು ಮಾಜಿ ಮಂತ್ರಿಗಳು ತಾರಾಮಾರ ಬೈದಾಡಿಕೊಂಡಿದಾರಂತೆ!’</p>.<p>‘ಅವರಿಬ್ಬರ ಹೆಸರಲ್ಲೂ ಸೋ, ಶೋ ಇದೆ. ಸೋ ಅಧಿಕಾರಕ್ಕಾಗಿ ಶೋ ಮಸ್ಟ್ ಗೋ ಆನ್! ಸುಮ್ನೆ ಮಜಾ ನೋಡಿ’.</p>.<p>‘ದೇವೇಗೌಡರನ್ನ ಭೇಟಿ ಮಾಡಿದ್ರಂತೆ?’</p>.<p>‘ಅವರು ನಮ್ಮ ಪಿತಾಮಹರು. ಅದು ನಮ್ಮ ತವರುಮನೆ ಇದ್ದಂಗೆ! ಪವರ್ ಉಳಿಸಿಕಳಕ್ಕೆ ಅವಸರಕ್ಕೊಬ್ಬಣ್ಣ ಬೇಕಾಯ್ತನೆ’.</p>.<p>‘ಗಣಿ ದೂಳು ಎಲ್ಲಾ ಕಡೆ ತುಂಬಿಕೊಂಡದಲ್ಲಾ ಸಾರ್. ನಿಮ್ಮ ಯೋಜನೆ ಏನು?’</p>.<p>‘ಗಣಿ ಕೊರೆಯೋ ಕಳ್ಳ ಅಪ್ಪಿಲಿ, ಅವ್ವಿಲಿ, ಸಣ್ಣಿಲಿ, ದೊಡ್ಡಿಲಿಗಳಿಗೆ ಸಮಯ ಸಂದರ್ಭ ನೋಡಿಕಂಡು ಇಲಿ ಪಾಷಾಣ ಹಾಕ್ತೀವಿ! ಒಳ್ಳೆ ಇಲಿಗಳೆಲ್ಲಾ ಕಿಂದರಿಜೋಗಿ ಹಿಂದೆ ಬಂದಂಗೆ ನನ್ನಿಂದೆ ಬರ್ತವೆ’.</p>.<p>‘ಕರ್ನಾಟಕದ ರಾಜಕೀಯದಲ್ಲಿ ಶುರುವಾಗಿರೋ ಕಾವಿ ಬ್ರಿಗೇಡ್ ಬಗ್ಗೆ ನಿಮ್ಮ ಅಭಿಪ್ರಾಯ ಏನು?’</p>.<p>‘ಇದು ಕರ್ನಾಟಕದಲ್ಲಿ ಉತ್ತರಪ್ರದೇಶದ ಥರವೇ ಆರಂಭ ಆಗಿರೋ ಮಾರ್ಮಿಕ ಕಾವಿ ಕ್ರಾಂತಿ. ನನ್ನನ್ನ ಅವರು ಒಪ್ಪಿಕೊಂಡು ಭಾಳ ಪ್ರಬುದ್ಧತೆ, ಬುದ್ಧಿವಂತಿಕೆ ತೋರಿಸವ್ರೆ! ಅವರ ಮಾತೇ ಶಾಸನ!’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>