<p>ಬೆಕ್ಕಣ್ಣ ಶನಿವಾರ ಬೆಳಗಿನಿಂದಲೇ ಟಿ.ವಿಯ ಮುಂದೆ ಪವಡಿಸಿತ್ತು.</p>.<p>‘ಹೋದ ವಾರ ವಿತ್ತ ಸಚಿವಾಲಯದಲ್ಲಿ ಹಲ್ವಾ ಕಾರ್ಯಕ್ರಮ ನಡೆದಾಗಲೇ ಅಂದ್ಕಂಡಿದ್ದೆ, ಈ ಸಲ ನಿರ್ಮಲಕ್ಕ ಖರೇಖರೇ ಸಿಹಿ ಸುದ್ದಿ ಕೊಡ್ತಾಳ ಅಂತ’ ಎಂದು ಅಗದಿ ಹೆಮ್ಮೆಯಿಂದ ಉಲಿಯಿತು.</p>.<p>‘ಹಲ್ವಾ ಕಾರ್ಯಕ್ರಮ ಪ್ರತಿವರ್ಷ ಮಾಡ್ತಾರಲೇ. ಪ್ರತಿವರ್ಷನೂ ಹಲ್ವಾ ಸಿಹಿ ಇರತೈತಿ. ಹಂಗಂತೇಳಿ ಬಜೆಟ್ ಸಿಹಿ ಇರತೈತೇನು?’ ನನ್ನ ಪ್ರಶ್ನೆ.</p>.<p>‘ಆದ್ರೆ ಈ ವರ್ಷ ಹಲ್ವಾನೂ ಸಿಹಿ, ಬಜೆಟ್ಟೂ ಸಿಹಿ’ ಬೆಕ್ಕಣ್ಣ ಹಲ್ವಾ ತಿಂದಂತೆ ಬಾಯಿ ಚಪ್ಪರಿಸಿತು.</p>.<p>‘ಯಾರಿಗೆ ಸಿಹಿ? ಬಜೆಟ್ಟಿನಲ್ಲಿ ಬಿ ಫಾರ್ ಬಿಹಾರ್ ಅನ್ನೋ ಹಂಗೆ ಬಿಹಾರಕ್ಕೆ ಸಿಂಹಪಾಲು ಕೊಟ್ಟಾರೆ. ಕರ್ನಾಟಕಕ್ಕೆ ಭಯಂಕರ ಕಡಿಮೆ’ ನಾನು ದೂರಿದೆ.</p>.<p>‘ಬಿಹಾರ ಅಂದ್ರೆ ನಮ್ಮ ಬ್ರದರ್! ಹಿಂದುಳಿದ ರಾಜ್ಯಕ್ಕೆ ಸ್ವಲ್ಪ ವಿಶೇಷ ಗಮನ ಕೊಟ್ಟರೇನು ತಪ್ಪು?’ ಬೆಕ್ಕಣ್ಣ ಸಮರ್ಥಿಸಿತು.</p>.<p>‘ಚುನಾವಣೆ ಮುಂದೈತಿ, ಅದಕ್ಕೇ ಈ ಎಲ್ಲಾ ಗಿಮಿಕ್. ಒಟ್ಟಾರೆ ನೋಡಿದರೆ ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ ಇಂಥವಕ್ಕೆ ಹಂಚಿಕೆ ಕಡಿಮೆಯಾಗೈತಿ’ ಎಂದೆ.</p>.<p>‘ಅದೆಲ್ಲ ಬಿಡು... ನಿರ್ಮಲಕ್ಕ ಮಧ್ಯಮ ವರ್ಗಕ್ಕೆ ಬಂಪರ್ ಬಹುಮಾನ ಕೊಟ್ಟಾಳೆ! 12 ಲಕ್ಷದವರೆಗೆ ಆದಾಯವಿದ್ದೋರಿಗೆ ತೆರಿಗೇನೆ ಇಲ್ಲ. ಮಧ್ಯಮ ವರ್ಗದವರ ಕೈಯಲ್ಲಿ ಝಣಝಣ ಕಾಂಚಾಣ. ಮೋದಿಮಾಮಾನ ಹೃದಯದೊಳಗೆ ಮಧ್ಯಮ ವರ್ಗದವರೇ ಇದ್ದಾರಂತ ಶಾ ಅಂಕಲ್ಲು ಹೇಳ್ಯಾರೆ’ ಬೆಕ್ಕಣ್ಣ ಉದ್ಗರಿಸಿತು.</p>.<p>‘ಹೌದೌದು. ಹೃದಯದೊಳು ಮಧ್ಯಮ ವರ್ಗ, ತಲೆಯೊಳಗೆ ಸಿರಿವಂತ ಉದ್ಯಮಿಗಳು, ಕಾರ್ಪೊರೇಟ್ ವಲಯ’ ಎಂದು ನಾನು ವಾದಿಸಿದೆ.</p>.<p>‘ಡಿವಿಜಿಯವರು ಹೇಳಿದಂಗೆ, ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು. ತೆರಿಗೆ ಸ್ಲ್ಯಾಬ್ ಕೂಡ ಕಡಿಮೆ ಮಾಡ್ಯಾರೆ. ಇನ್ನಾ ಏನು ಬೇಕು ಮಧ್ಯಮ ವರ್ಗದವರಿಗೆ? ಆದರೆ ನೀ ತೆರಿಗೇಲಿ ಉಳಿಸಿದ ರೊಕ್ಕ ನನಗೇ ಕೊಡಬೇಕು ನೋಡಾ’ ಎಂದು ಬೆಕ್ಕಣ್ಣ ಕರಾರು ಹಾಕಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಕ್ಕಣ್ಣ ಶನಿವಾರ ಬೆಳಗಿನಿಂದಲೇ ಟಿ.ವಿಯ ಮುಂದೆ ಪವಡಿಸಿತ್ತು.</p>.<p>‘ಹೋದ ವಾರ ವಿತ್ತ ಸಚಿವಾಲಯದಲ್ಲಿ ಹಲ್ವಾ ಕಾರ್ಯಕ್ರಮ ನಡೆದಾಗಲೇ ಅಂದ್ಕಂಡಿದ್ದೆ, ಈ ಸಲ ನಿರ್ಮಲಕ್ಕ ಖರೇಖರೇ ಸಿಹಿ ಸುದ್ದಿ ಕೊಡ್ತಾಳ ಅಂತ’ ಎಂದು ಅಗದಿ ಹೆಮ್ಮೆಯಿಂದ ಉಲಿಯಿತು.</p>.<p>‘ಹಲ್ವಾ ಕಾರ್ಯಕ್ರಮ ಪ್ರತಿವರ್ಷ ಮಾಡ್ತಾರಲೇ. ಪ್ರತಿವರ್ಷನೂ ಹಲ್ವಾ ಸಿಹಿ ಇರತೈತಿ. ಹಂಗಂತೇಳಿ ಬಜೆಟ್ ಸಿಹಿ ಇರತೈತೇನು?’ ನನ್ನ ಪ್ರಶ್ನೆ.</p>.<p>‘ಆದ್ರೆ ಈ ವರ್ಷ ಹಲ್ವಾನೂ ಸಿಹಿ, ಬಜೆಟ್ಟೂ ಸಿಹಿ’ ಬೆಕ್ಕಣ್ಣ ಹಲ್ವಾ ತಿಂದಂತೆ ಬಾಯಿ ಚಪ್ಪರಿಸಿತು.</p>.<p>‘ಯಾರಿಗೆ ಸಿಹಿ? ಬಜೆಟ್ಟಿನಲ್ಲಿ ಬಿ ಫಾರ್ ಬಿಹಾರ್ ಅನ್ನೋ ಹಂಗೆ ಬಿಹಾರಕ್ಕೆ ಸಿಂಹಪಾಲು ಕೊಟ್ಟಾರೆ. ಕರ್ನಾಟಕಕ್ಕೆ ಭಯಂಕರ ಕಡಿಮೆ’ ನಾನು ದೂರಿದೆ.</p>.<p>‘ಬಿಹಾರ ಅಂದ್ರೆ ನಮ್ಮ ಬ್ರದರ್! ಹಿಂದುಳಿದ ರಾಜ್ಯಕ್ಕೆ ಸ್ವಲ್ಪ ವಿಶೇಷ ಗಮನ ಕೊಟ್ಟರೇನು ತಪ್ಪು?’ ಬೆಕ್ಕಣ್ಣ ಸಮರ್ಥಿಸಿತು.</p>.<p>‘ಚುನಾವಣೆ ಮುಂದೈತಿ, ಅದಕ್ಕೇ ಈ ಎಲ್ಲಾ ಗಿಮಿಕ್. ಒಟ್ಟಾರೆ ನೋಡಿದರೆ ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ ಇಂಥವಕ್ಕೆ ಹಂಚಿಕೆ ಕಡಿಮೆಯಾಗೈತಿ’ ಎಂದೆ.</p>.<p>‘ಅದೆಲ್ಲ ಬಿಡು... ನಿರ್ಮಲಕ್ಕ ಮಧ್ಯಮ ವರ್ಗಕ್ಕೆ ಬಂಪರ್ ಬಹುಮಾನ ಕೊಟ್ಟಾಳೆ! 12 ಲಕ್ಷದವರೆಗೆ ಆದಾಯವಿದ್ದೋರಿಗೆ ತೆರಿಗೇನೆ ಇಲ್ಲ. ಮಧ್ಯಮ ವರ್ಗದವರ ಕೈಯಲ್ಲಿ ಝಣಝಣ ಕಾಂಚಾಣ. ಮೋದಿಮಾಮಾನ ಹೃದಯದೊಳಗೆ ಮಧ್ಯಮ ವರ್ಗದವರೇ ಇದ್ದಾರಂತ ಶಾ ಅಂಕಲ್ಲು ಹೇಳ್ಯಾರೆ’ ಬೆಕ್ಕಣ್ಣ ಉದ್ಗರಿಸಿತು.</p>.<p>‘ಹೌದೌದು. ಹೃದಯದೊಳು ಮಧ್ಯಮ ವರ್ಗ, ತಲೆಯೊಳಗೆ ಸಿರಿವಂತ ಉದ್ಯಮಿಗಳು, ಕಾರ್ಪೊರೇಟ್ ವಲಯ’ ಎಂದು ನಾನು ವಾದಿಸಿದೆ.</p>.<p>‘ಡಿವಿಜಿಯವರು ಹೇಳಿದಂಗೆ, ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು. ತೆರಿಗೆ ಸ್ಲ್ಯಾಬ್ ಕೂಡ ಕಡಿಮೆ ಮಾಡ್ಯಾರೆ. ಇನ್ನಾ ಏನು ಬೇಕು ಮಧ್ಯಮ ವರ್ಗದವರಿಗೆ? ಆದರೆ ನೀ ತೆರಿಗೇಲಿ ಉಳಿಸಿದ ರೊಕ್ಕ ನನಗೇ ಕೊಡಬೇಕು ನೋಡಾ’ ಎಂದು ಬೆಕ್ಕಣ್ಣ ಕರಾರು ಹಾಕಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>