<p>ಪ್ರಭುಗಳು ಚಿಂತಾಕ್ರಾಂತರಾಗಿ ಕುಳಿತಿದ್ದರು. ರಾಜ್ಯಭಾರ ವಿಪರೀತ ಭಾರವಾಗಿತ್ತು. ಮುಡಿಯಲ್ಲಿ ಹೈಕಮಾಂಡ್ ಹೇರಿಕೆ, ಜೊತೆಗೆ ಹೈ-ಡಿಮ್ಯಾಂಡ್ ತುರಿಕೆ ಹೆಚ್ಚಾಗಿ ಮೈ ಪರಚಿಕೊಳ್ಳುವಂತಾಗಿತ್ತು. ಆಗ ಸಹಾಯಕ ಬಂದು, ‘ಪ್ರಭು, ಸಹೋದ್ಯೋಗಿ ಸ್ನೇಹಿತರು ತಮ್ಮ ಭೇಟಿಗೆ ಬಂದಿದ್ದಾರೆ’ ಎಂದ.</p>.<p>ದೀರ್ಘ ನಿಟ್ಟುಸಿರೆಳೆದ ಪ್ರಭುಗಳು, ಬರಲು ಹೇಳಿದರು. ‘ಸ್ವಾಮಿ ದೇವನೆ, ಪಕ್ಷಪಾಲನೆ... ಪ್ರೇಮದಿಂದಲಿ ಸಲಹು ನಮ್ಮನು...’ ಎಂದು ಹಾಡಿ-ಹೊಗಳುತ್ತಾ ಬಂದರು.</p>.<p>‘ಪ್ರಭು, ಕೊಟ್ಟ ಮಾತು ಉಳಿಸಿಕೊಳ್ಳುವ ಪುಣ್ಯಕೋಟಿ ತಾವು. ಸ್ಥಾನ-ಮಾನ ನೀಡುವುದಾಗಿ ನಮಗೆ ಕೊಟ್ಟ ಮಾತು ಉಳಿಸಿಕೊಂಡರೆ ತಮಗೆ ಕೋಟಿ ಪುಣ್ಯ ಬರುತ್ತದೆ...’ ಎಂದರು.</p>.<p>‘ನನ್ನ ಆಸ್ಥಾನ, ಸಂಸ್ಥಾನವೇ ಅಲ್ಲಾಡುತ್ತಿದೆ...’ ಎಂದು ಸಿಟ್ಟುಗೊಂಡರೂ ಸಮಾಧಾನ ತಂದುಕೊಂಡ ಪ್ರಭುಗಳು, ‘ನಿಮ್ಮ ಕೈಬಿಡುವುದಿಲ್ಲ, ಸತ್ಯ ವಾಕ್ಯವ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು...’ ಎಂದರು.</p>.<p>‘ಆದರೆ ಪ್ರಭು, ದೆಹಲಿ ದೊರೆಗಳು ತಮ್ಮ ಕುರ್ಚಿಗೆ ಮುಳ್ಳು ಇಡುತ್ತಿದ್ದಾರಲ್ಲ. ಆ ಮುಳ್ಳನ್ನು ಮುಳ್ಳಿನಿಂದ ತೆಗೆಯುವಿರೇ?’</p>.<p>‘ಮುಳ್ಳು ಬಹಳ ಬಾಧೆ ಕೊಡುತ್ತಿದೆ...’ ಪ್ರಭು ಸಂಕಟಪಟ್ಟರು.</p>.<p>‘ತಮ್ಮ ಸರ್ವೀಸಿನಲ್ಲಿ ಇಂಥಾ ಎಷ್ಟೋ ಮುಳ್ಳುಗಳನ್ನು ಕಿತ್ತು ಬಿಸಾಡಿದ್ದೀರಿ ಪ್ರಭು...’ ಹೊಗಳಿದರು.</p>.<p>‘ಆದರೂ ಮುಳ್ಳು ಕೀಳುವ ಹೊಸ ಅಸ್ತ್ರ, ಆಯುಧ ಬೇಕಲ್ಲ ಮಿತ್ರರೇ’.</p>.<p>‘ಪ್ರಭು, ತಾವು ಜಾತಿಗೊಂದು ನಿಗಮ ನೀಡಿ, ಆ ಜಾತಿಗಳ ಅಭಿವೃದ್ಧಿ ಸುಗಮ ಮಾಡುತ್ತಿದ್ದೀರಿ...’</p>.<p>‘ಹೌದು, ಅಭಿವೃದ್ಧಿಯ ವಿಕೇಂದ್ರೀಕರಣ, ಅವರವರ ಅಭಿವೃದ್ಧಿಯನ್ನು ಅವರೇ ಮಾಡಿಕೊಳ್ಳಲೆಂದು’.</p>.<p>‘ತೃಪ್ತಗೊಂಡಿರುವ ಜಾತಿ, ವರ್ಗಗಳು ನಿಮ್ಮ ಬೆನ್ನಿಗಿವೆ, ಸಾಲದ್ದಕ್ಕೆ ಗುರುವರ್ಯರ ಕೃಪಾಶೀರ್ವಾದವಿದೆ. ಗುರುಗಳು ಗುಡುಗಿದರೆ ದೆಹಲಿ ದೊರೆಗಳು ಉಳಿದಾರೆಯೇ, ನಡುಗಿ ಹೋಗುವರು, ಇನ್ನೇಕೆ ಭಯ...ಹಹ್ಹಹ್ಹಹ’.</p>.<p>ಪ್ರಭುಗಳ ಮುಖದಲ್ಲಿ ಮಂದಹಾಸ ಮಿನುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಭುಗಳು ಚಿಂತಾಕ್ರಾಂತರಾಗಿ ಕುಳಿತಿದ್ದರು. ರಾಜ್ಯಭಾರ ವಿಪರೀತ ಭಾರವಾಗಿತ್ತು. ಮುಡಿಯಲ್ಲಿ ಹೈಕಮಾಂಡ್ ಹೇರಿಕೆ, ಜೊತೆಗೆ ಹೈ-ಡಿಮ್ಯಾಂಡ್ ತುರಿಕೆ ಹೆಚ್ಚಾಗಿ ಮೈ ಪರಚಿಕೊಳ್ಳುವಂತಾಗಿತ್ತು. ಆಗ ಸಹಾಯಕ ಬಂದು, ‘ಪ್ರಭು, ಸಹೋದ್ಯೋಗಿ ಸ್ನೇಹಿತರು ತಮ್ಮ ಭೇಟಿಗೆ ಬಂದಿದ್ದಾರೆ’ ಎಂದ.</p>.<p>ದೀರ್ಘ ನಿಟ್ಟುಸಿರೆಳೆದ ಪ್ರಭುಗಳು, ಬರಲು ಹೇಳಿದರು. ‘ಸ್ವಾಮಿ ದೇವನೆ, ಪಕ್ಷಪಾಲನೆ... ಪ್ರೇಮದಿಂದಲಿ ಸಲಹು ನಮ್ಮನು...’ ಎಂದು ಹಾಡಿ-ಹೊಗಳುತ್ತಾ ಬಂದರು.</p>.<p>‘ಪ್ರಭು, ಕೊಟ್ಟ ಮಾತು ಉಳಿಸಿಕೊಳ್ಳುವ ಪುಣ್ಯಕೋಟಿ ತಾವು. ಸ್ಥಾನ-ಮಾನ ನೀಡುವುದಾಗಿ ನಮಗೆ ಕೊಟ್ಟ ಮಾತು ಉಳಿಸಿಕೊಂಡರೆ ತಮಗೆ ಕೋಟಿ ಪುಣ್ಯ ಬರುತ್ತದೆ...’ ಎಂದರು.</p>.<p>‘ನನ್ನ ಆಸ್ಥಾನ, ಸಂಸ್ಥಾನವೇ ಅಲ್ಲಾಡುತ್ತಿದೆ...’ ಎಂದು ಸಿಟ್ಟುಗೊಂಡರೂ ಸಮಾಧಾನ ತಂದುಕೊಂಡ ಪ್ರಭುಗಳು, ‘ನಿಮ್ಮ ಕೈಬಿಡುವುದಿಲ್ಲ, ಸತ್ಯ ವಾಕ್ಯವ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು...’ ಎಂದರು.</p>.<p>‘ಆದರೆ ಪ್ರಭು, ದೆಹಲಿ ದೊರೆಗಳು ತಮ್ಮ ಕುರ್ಚಿಗೆ ಮುಳ್ಳು ಇಡುತ್ತಿದ್ದಾರಲ್ಲ. ಆ ಮುಳ್ಳನ್ನು ಮುಳ್ಳಿನಿಂದ ತೆಗೆಯುವಿರೇ?’</p>.<p>‘ಮುಳ್ಳು ಬಹಳ ಬಾಧೆ ಕೊಡುತ್ತಿದೆ...’ ಪ್ರಭು ಸಂಕಟಪಟ್ಟರು.</p>.<p>‘ತಮ್ಮ ಸರ್ವೀಸಿನಲ್ಲಿ ಇಂಥಾ ಎಷ್ಟೋ ಮುಳ್ಳುಗಳನ್ನು ಕಿತ್ತು ಬಿಸಾಡಿದ್ದೀರಿ ಪ್ರಭು...’ ಹೊಗಳಿದರು.</p>.<p>‘ಆದರೂ ಮುಳ್ಳು ಕೀಳುವ ಹೊಸ ಅಸ್ತ್ರ, ಆಯುಧ ಬೇಕಲ್ಲ ಮಿತ್ರರೇ’.</p>.<p>‘ಪ್ರಭು, ತಾವು ಜಾತಿಗೊಂದು ನಿಗಮ ನೀಡಿ, ಆ ಜಾತಿಗಳ ಅಭಿವೃದ್ಧಿ ಸುಗಮ ಮಾಡುತ್ತಿದ್ದೀರಿ...’</p>.<p>‘ಹೌದು, ಅಭಿವೃದ್ಧಿಯ ವಿಕೇಂದ್ರೀಕರಣ, ಅವರವರ ಅಭಿವೃದ್ಧಿಯನ್ನು ಅವರೇ ಮಾಡಿಕೊಳ್ಳಲೆಂದು’.</p>.<p>‘ತೃಪ್ತಗೊಂಡಿರುವ ಜಾತಿ, ವರ್ಗಗಳು ನಿಮ್ಮ ಬೆನ್ನಿಗಿವೆ, ಸಾಲದ್ದಕ್ಕೆ ಗುರುವರ್ಯರ ಕೃಪಾಶೀರ್ವಾದವಿದೆ. ಗುರುಗಳು ಗುಡುಗಿದರೆ ದೆಹಲಿ ದೊರೆಗಳು ಉಳಿದಾರೆಯೇ, ನಡುಗಿ ಹೋಗುವರು, ಇನ್ನೇಕೆ ಭಯ...ಹಹ್ಹಹ್ಹಹ’.</p>.<p>ಪ್ರಭುಗಳ ಮುಖದಲ್ಲಿ ಮಂದಹಾಸ ಮಿನುಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>