<p>‘ನಮ್ಮ ಸಂಸದರು ಕನ್ನಡದಲ್ಲಿ ಪ್ರಮಾಣ ಮಾಡಿ ಪಾರ್ಲಿಮೆಂಟಿನಲ್ಲಿ ಕನ್ನಡ ಕಹಳೆ ಊದಿ ಪುಳಕಿತರಾದರು ಕಣ್ರೀ...’ ಸುಮಿಯೂ ರೋಮಾಂಚನಗೊಂಡಳು.</p>.<p>‘ಆಗಲೇಬೇಕು. ಅದರ್ ಟಂಗ್ ಪರಿಸರದಲ್ಲಿ ಮದರ್ ಟಂಗ್ ಯಾವತ್ತೂ ಮುದ ನೀಡುತ್ತದೆ’ ಎಂದ ಶಂಕ್ರಿ.</p>.<p>‘ದೆಹಲಿಯಲ್ಲಿ ಕನ್ನಡ ಊದಿದರೆ ಸಾಲದು, ಕನ್ನಡ ನಾಡಿನಲ್ಲಿ ನಿತ್ಯ ಕನ್ನಡದ ಕಹಳೆ ಮೊಳಗಬೇಕು. ಅನ್ಯಭಾಷಿಕರು ಕಡ್ಡಾಯವಾಗಿ ಕನ್ನಡ ಕಲಿಯಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ’.</p>.<p>‘ಕಲಿಯಬೇಕು ಎಂದರೆ ಸಾಕೆ? ಕಲಿಸುವವರೂ ಬೇಕಲ್ವೆ? ವಯಸ್ಕರ ಶಿಕ್ಷಣದಂತೆ ಸರ್ಕಾರ ಕನ್ನಡೇತರರಿಗೆ ಅ ಆ ಇ ಈ ಕಲಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು’.</p>.<p>‘ಇರುವ ಶಾಲಾಕಾಲೇಜಿನ ಮಕ್ಕಳಿಗೆ ಪಾಠ ಕಲಿಸಿ, ಪರೀಕ್ಷೆ ನಡೆಸಲೇ ಸರ್ಕಾರಕ್ಕೆ ಸಾಕಾಗುತ್ತದೆ. ಎಲ್ಲದಕ್ಕೂ ಸರ್ಕಾರವನ್ನೇ ನಂಬಿ ಕೂರಬಾರದು. ಅನ್ಯಭಾಷಿಕರಿಗೆ ನಾವೇ ಕನ್ನಡ ಕಲಿಸಬೇಕು. ಮರ ಬೆಳೆಸಿದರೆ, ಕನ್ನಡ ಕಲಿಸಿದರೆ ನಮ್ಮ ಸುತ್ತಲಿನ ಪರಿಸರ ಉತ್ತಮವಾಗುತ್ತದೆ’.</p>.<p>‘ಹೌದು, ಹಾಗಾಗಿಯೇ ಸಕ್ಕರೆ, ಕಾಫಿಪುಡಿ ನೆಪದಲ್ಲಿ ನಾನು ಆಗಾಗ ನೆರೆಹೊರೆಯ ಅನ್ಯಭಾಷಿಕರ ಮನೆಗೆ ಹೋಗಿ ಅವರಿಗೆ ಒಂದು ಬಟ್ಟಲು ಕನ್ನಡ ಕೊಟ್ಟು ಸವಿಯಲು ಹೇಳುತ್ತಿದ್ದೇನೆ’.</p>.<p>‘ಹಾಗೇ ಮಾಡು, ಕನ್ನಡೇತರರ ಕಿವಿ ಮೇಲೆ ಪದೇಪದೇ ಕನ್ನಡ ಬೀಳುತ್ತಿದ್ದರೆ ಅದು ಬಾಯಿಂದ ಹೊರಬರುತ್ತದೆ. ಈ ಪ್ರಕ್ರಿಯೆಯಲ್ಲಿ ಅವರು ಕನ್ನಡದತ್ತ ಹೊರಳುತ್ತಾರೆ’.</p>.<p>‘ನಮ್ಮ ಮಕ್ಕಳನ್ನು ಅವರ ಮಕ್ಕಳ ಜೊತೆ ಆಟವಾಡಲು ಕಳಿಸಿ, ಕನ್ನಡ ಹೇಳಿಕೊಡಲು ಹೇಳಿದ್ದೇನೆ. ಪಕ್ಕದ ಮನೆಯ ಪರಭಾಷಿ ಗಂಡ-ಹೆಂಡತಿ ಕನ್ನಡದಲ್ಲೇ ಜಗಳವಾಡುವಷ್ಟು ಸುಧಾರಿಸಿದ್ದಾರೆ ಕಣ್ರೀ...’ ಸುಮಿಗೆ ಆನಂದ.</p>.<p>‘ವರಮಹಾಲಕ್ಷ್ಮಿ, ಸಂಕ್ರಾಂತಿ ಹಬ್ಬಕ್ಕೆ ನೆರೆ ಭಾಷಿಕರನ್ನು ಕುಂಕುಮಕ್ಕೆ ಕರೆದು ಕನ್ನಡದ ತಾಂಬೂಲ ಕೊಡು. ಕನ್ನಡದತ್ತ ಹೊರಳಿಕೊಂಡು ಅವರು ಕನ್ನಡಕ್ಕಾಗಿ ಕೈ ಎತ್ತಲಿ, ನಾವು ತಲೆ ಎತ್ತೋಣ...’ ಅಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಮ್ಮ ಸಂಸದರು ಕನ್ನಡದಲ್ಲಿ ಪ್ರಮಾಣ ಮಾಡಿ ಪಾರ್ಲಿಮೆಂಟಿನಲ್ಲಿ ಕನ್ನಡ ಕಹಳೆ ಊದಿ ಪುಳಕಿತರಾದರು ಕಣ್ರೀ...’ ಸುಮಿಯೂ ರೋಮಾಂಚನಗೊಂಡಳು.</p>.<p>‘ಆಗಲೇಬೇಕು. ಅದರ್ ಟಂಗ್ ಪರಿಸರದಲ್ಲಿ ಮದರ್ ಟಂಗ್ ಯಾವತ್ತೂ ಮುದ ನೀಡುತ್ತದೆ’ ಎಂದ ಶಂಕ್ರಿ.</p>.<p>‘ದೆಹಲಿಯಲ್ಲಿ ಕನ್ನಡ ಊದಿದರೆ ಸಾಲದು, ಕನ್ನಡ ನಾಡಿನಲ್ಲಿ ನಿತ್ಯ ಕನ್ನಡದ ಕಹಳೆ ಮೊಳಗಬೇಕು. ಅನ್ಯಭಾಷಿಕರು ಕಡ್ಡಾಯವಾಗಿ ಕನ್ನಡ ಕಲಿಯಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ’.</p>.<p>‘ಕಲಿಯಬೇಕು ಎಂದರೆ ಸಾಕೆ? ಕಲಿಸುವವರೂ ಬೇಕಲ್ವೆ? ವಯಸ್ಕರ ಶಿಕ್ಷಣದಂತೆ ಸರ್ಕಾರ ಕನ್ನಡೇತರರಿಗೆ ಅ ಆ ಇ ಈ ಕಲಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು’.</p>.<p>‘ಇರುವ ಶಾಲಾಕಾಲೇಜಿನ ಮಕ್ಕಳಿಗೆ ಪಾಠ ಕಲಿಸಿ, ಪರೀಕ್ಷೆ ನಡೆಸಲೇ ಸರ್ಕಾರಕ್ಕೆ ಸಾಕಾಗುತ್ತದೆ. ಎಲ್ಲದಕ್ಕೂ ಸರ್ಕಾರವನ್ನೇ ನಂಬಿ ಕೂರಬಾರದು. ಅನ್ಯಭಾಷಿಕರಿಗೆ ನಾವೇ ಕನ್ನಡ ಕಲಿಸಬೇಕು. ಮರ ಬೆಳೆಸಿದರೆ, ಕನ್ನಡ ಕಲಿಸಿದರೆ ನಮ್ಮ ಸುತ್ತಲಿನ ಪರಿಸರ ಉತ್ತಮವಾಗುತ್ತದೆ’.</p>.<p>‘ಹೌದು, ಹಾಗಾಗಿಯೇ ಸಕ್ಕರೆ, ಕಾಫಿಪುಡಿ ನೆಪದಲ್ಲಿ ನಾನು ಆಗಾಗ ನೆರೆಹೊರೆಯ ಅನ್ಯಭಾಷಿಕರ ಮನೆಗೆ ಹೋಗಿ ಅವರಿಗೆ ಒಂದು ಬಟ್ಟಲು ಕನ್ನಡ ಕೊಟ್ಟು ಸವಿಯಲು ಹೇಳುತ್ತಿದ್ದೇನೆ’.</p>.<p>‘ಹಾಗೇ ಮಾಡು, ಕನ್ನಡೇತರರ ಕಿವಿ ಮೇಲೆ ಪದೇಪದೇ ಕನ್ನಡ ಬೀಳುತ್ತಿದ್ದರೆ ಅದು ಬಾಯಿಂದ ಹೊರಬರುತ್ತದೆ. ಈ ಪ್ರಕ್ರಿಯೆಯಲ್ಲಿ ಅವರು ಕನ್ನಡದತ್ತ ಹೊರಳುತ್ತಾರೆ’.</p>.<p>‘ನಮ್ಮ ಮಕ್ಕಳನ್ನು ಅವರ ಮಕ್ಕಳ ಜೊತೆ ಆಟವಾಡಲು ಕಳಿಸಿ, ಕನ್ನಡ ಹೇಳಿಕೊಡಲು ಹೇಳಿದ್ದೇನೆ. ಪಕ್ಕದ ಮನೆಯ ಪರಭಾಷಿ ಗಂಡ-ಹೆಂಡತಿ ಕನ್ನಡದಲ್ಲೇ ಜಗಳವಾಡುವಷ್ಟು ಸುಧಾರಿಸಿದ್ದಾರೆ ಕಣ್ರೀ...’ ಸುಮಿಗೆ ಆನಂದ.</p>.<p>‘ವರಮಹಾಲಕ್ಷ್ಮಿ, ಸಂಕ್ರಾಂತಿ ಹಬ್ಬಕ್ಕೆ ನೆರೆ ಭಾಷಿಕರನ್ನು ಕುಂಕುಮಕ್ಕೆ ಕರೆದು ಕನ್ನಡದ ತಾಂಬೂಲ ಕೊಡು. ಕನ್ನಡದತ್ತ ಹೊರಳಿಕೊಂಡು ಅವರು ಕನ್ನಡಕ್ಕಾಗಿ ಕೈ ಎತ್ತಲಿ, ನಾವು ತಲೆ ಎತ್ತೋಣ...’ ಅಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>