<p>‘ಗುರೂಜಿ, ಸಿ.ಎಂ ಗ್ರಹಗತಿ ಈಗ ಹೇಗಿದೆ...?’ ಶಾಸಕರು ಕೇಳಿದರು.</p>.<p>ಸಿ.ಎಂ ಜಾತಕ ಪರಿಶೀಲಿಸಿದ ಗುರೂಜಿ, ಗ್ರಹಗತಿ, ಅಧೋಗತಿ, ಏರುಗತಿಗಳನ್ನು ಲೆಕ್ಕ ಹಾಕಿ, ‘ಸಿ.ಎಂಗೆ ಈಗ ಶತ್ರು ಬಾಧೆ, ಶಾಂತಿ ಭಂಗ ಇದೆ. ಆದರೆ, ಕುರ್ಚಿ ಭದ್ರವಾಗಿದೆ’ ಎಂದರು.</p>.<p>‘ಯುಗಾದಿಗೆ ಹಳೆ ಸಿ.ಎಂ ಹೋಗಿ, ಹೊಸ ಸಿ.ಎಂ ಬರ್ತಾರಾ ಗುರೂಜಿ?’</p>.<p>‘ಹಬ್ಬಕ್ಕೆ ಅಳಿಯ ಬರಬಹುದು, ಹೊಸ ಸಿ.ಎಂ ಬರುವ ಸಾಧ್ಯತೆ ಕಾಣ್ತಿಲ್ಲಾರೀ...’</p>.<p>‘ಯುಗಾದಿಗೆ ಸಿ.ಎಂ ಬದಲಾಗ್ತಾರೆ ಅಂತ ನಮ್ಮ ಆಸ್ಥಾನ ಪಂಡಿತರು ಭವಿಷ್ಯ ನುಡಿದಿದ್ದಾರೆ ಗುರೂಜಿ’.</p>.<p>‘ಹಬ್ಬ, ಹುಣ್ಣಿಮೆಗೆ ಬದಲಾಗಲು ಸಿ.ಎಂ ಕ್ಯಾಲೆಂಡರೇನ್ರೀ? ನಿಮ್ಮ ಪಂಡಿತರಿಗೆ ಕುರ್ಚಿ ದೋಷ ಇದೆ, ಪರಿಹಾರ ಮಾಡಿಕೊಳ್ಳಲು ಹೇಳಿ’ ಗುರೂಜಿಗೆ ಸಿಟ್ಟು ಬಂತು.</p>.<p>‘ಹಬ್ಬಹಬ್ಬಕ್ಕೂ ಒಬ್ಬಟ್ಟು ಅಲ್ಲ, ಯುಗಾದಿಗೆ ಹೋಳಿಗೆ, ಗಣೇಶ ಚತುರ್ಥಿಗೆ ಕಡುಬು, ಸಂಕ್ರಾಂತಿಗೆ ಪೊಂಗಲ್ ಇರುವಂತೆ ಹಬ್ಬ<br />ಹಬ್ಬಕ್ಕೂ ಸಿ.ಎಂ ಬದಲಾಗುವ ಪದ್ಧತಿ ಬರಬೇಕು...’ ಶಾಸಕರು ಆಸೆಪಟ್ಟರು.</p>.<p>‘ಮಂತ್ರಿ ಸ್ಥಾನ ಕೊಡಲಿಲ್ಲ ಅಂತ ನೀವು ಸಿ.ಎಂ ಮೇಲೆ ಮುನಿಸಿಕೊಂಡಿದ್ದೀರಿ ಅಲ್ವಾ?’</p>.<p>‘ಹೌದು ಗುರೂಜಿ, ಹಳೆಯ ಮಂತ್ರಿಗಳನ್ನು ಪಕ್ಷ ಸಂಘಟನೆಗೆ ನಿಯೋಜಿಸಿ, ನಮ್ಮಂಥವರನ್ನು ಮಂತ್ರಿ ಮಾಡಬೇಕು ಅನ್ನೋದು ನಮ್ಮ ಒತ್ತಾಯ’.</p>.<p>‘ನೀವು ಮಂತ್ರಿ ಸ್ಥಾನದ ಆಸೆ ಬಿಟ್ಟುಬಿಡಿ...’</p>.<p>‘ಯಾಕೆ ಗುರೂಜಿ, ನನಗೆ ಮಂತ್ರಿಯಾಗುವ ಶಕ್ತಿ, ಸಾಮರ್ಥ್ಯ ಇಲ್ಲವೇ?’</p>.<p>‘ಹಾಗಲ್ಲ, ನಿಮಗೆ ಮುಖ್ಯಮಂತ್ರಿಯಾಗುವ ಯೋಗ ಇದೆ. ಹತ್ತಾರು ಶಾಸಕರನ್ನು ಮಂತ್ರಿ ಮಾಡುವ ಯೋಗ್ಯತೆ ಇದೆ ನಿಮಗೆ’ ಎಂದರು ಗುರೂಜಿ.</p>.<p>ಶಾಸಕರು ರೋಮಾಂಚನಗೊಂಡರು. ‘ಹೌದೇ ಗುರೂಜಿ...?! ಇವತ್ತಿನಿಂದಲೇ ಸಿ.ಎಂ ಆಗಲು ಪ್ರಯತ್ನ ಮಾಡ್ತೀನಿ, ನನಗೆ ಆಶೀರ್ವಾದ ಮಾಡಿ...’ ಎಂದು ಶಾಸಕರು ಕಾಣಿಕೆ ಕೊಟ್ಟು, ಅಡ್ಡ ಬಿದ್ದು ಹೊರಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಗುರೂಜಿ, ಸಿ.ಎಂ ಗ್ರಹಗತಿ ಈಗ ಹೇಗಿದೆ...?’ ಶಾಸಕರು ಕೇಳಿದರು.</p>.<p>ಸಿ.ಎಂ ಜಾತಕ ಪರಿಶೀಲಿಸಿದ ಗುರೂಜಿ, ಗ್ರಹಗತಿ, ಅಧೋಗತಿ, ಏರುಗತಿಗಳನ್ನು ಲೆಕ್ಕ ಹಾಕಿ, ‘ಸಿ.ಎಂಗೆ ಈಗ ಶತ್ರು ಬಾಧೆ, ಶಾಂತಿ ಭಂಗ ಇದೆ. ಆದರೆ, ಕುರ್ಚಿ ಭದ್ರವಾಗಿದೆ’ ಎಂದರು.</p>.<p>‘ಯುಗಾದಿಗೆ ಹಳೆ ಸಿ.ಎಂ ಹೋಗಿ, ಹೊಸ ಸಿ.ಎಂ ಬರ್ತಾರಾ ಗುರೂಜಿ?’</p>.<p>‘ಹಬ್ಬಕ್ಕೆ ಅಳಿಯ ಬರಬಹುದು, ಹೊಸ ಸಿ.ಎಂ ಬರುವ ಸಾಧ್ಯತೆ ಕಾಣ್ತಿಲ್ಲಾರೀ...’</p>.<p>‘ಯುಗಾದಿಗೆ ಸಿ.ಎಂ ಬದಲಾಗ್ತಾರೆ ಅಂತ ನಮ್ಮ ಆಸ್ಥಾನ ಪಂಡಿತರು ಭವಿಷ್ಯ ನುಡಿದಿದ್ದಾರೆ ಗುರೂಜಿ’.</p>.<p>‘ಹಬ್ಬ, ಹುಣ್ಣಿಮೆಗೆ ಬದಲಾಗಲು ಸಿ.ಎಂ ಕ್ಯಾಲೆಂಡರೇನ್ರೀ? ನಿಮ್ಮ ಪಂಡಿತರಿಗೆ ಕುರ್ಚಿ ದೋಷ ಇದೆ, ಪರಿಹಾರ ಮಾಡಿಕೊಳ್ಳಲು ಹೇಳಿ’ ಗುರೂಜಿಗೆ ಸಿಟ್ಟು ಬಂತು.</p>.<p>‘ಹಬ್ಬಹಬ್ಬಕ್ಕೂ ಒಬ್ಬಟ್ಟು ಅಲ್ಲ, ಯುಗಾದಿಗೆ ಹೋಳಿಗೆ, ಗಣೇಶ ಚತುರ್ಥಿಗೆ ಕಡುಬು, ಸಂಕ್ರಾಂತಿಗೆ ಪೊಂಗಲ್ ಇರುವಂತೆ ಹಬ್ಬ<br />ಹಬ್ಬಕ್ಕೂ ಸಿ.ಎಂ ಬದಲಾಗುವ ಪದ್ಧತಿ ಬರಬೇಕು...’ ಶಾಸಕರು ಆಸೆಪಟ್ಟರು.</p>.<p>‘ಮಂತ್ರಿ ಸ್ಥಾನ ಕೊಡಲಿಲ್ಲ ಅಂತ ನೀವು ಸಿ.ಎಂ ಮೇಲೆ ಮುನಿಸಿಕೊಂಡಿದ್ದೀರಿ ಅಲ್ವಾ?’</p>.<p>‘ಹೌದು ಗುರೂಜಿ, ಹಳೆಯ ಮಂತ್ರಿಗಳನ್ನು ಪಕ್ಷ ಸಂಘಟನೆಗೆ ನಿಯೋಜಿಸಿ, ನಮ್ಮಂಥವರನ್ನು ಮಂತ್ರಿ ಮಾಡಬೇಕು ಅನ್ನೋದು ನಮ್ಮ ಒತ್ತಾಯ’.</p>.<p>‘ನೀವು ಮಂತ್ರಿ ಸ್ಥಾನದ ಆಸೆ ಬಿಟ್ಟುಬಿಡಿ...’</p>.<p>‘ಯಾಕೆ ಗುರೂಜಿ, ನನಗೆ ಮಂತ್ರಿಯಾಗುವ ಶಕ್ತಿ, ಸಾಮರ್ಥ್ಯ ಇಲ್ಲವೇ?’</p>.<p>‘ಹಾಗಲ್ಲ, ನಿಮಗೆ ಮುಖ್ಯಮಂತ್ರಿಯಾಗುವ ಯೋಗ ಇದೆ. ಹತ್ತಾರು ಶಾಸಕರನ್ನು ಮಂತ್ರಿ ಮಾಡುವ ಯೋಗ್ಯತೆ ಇದೆ ನಿಮಗೆ’ ಎಂದರು ಗುರೂಜಿ.</p>.<p>ಶಾಸಕರು ರೋಮಾಂಚನಗೊಂಡರು. ‘ಹೌದೇ ಗುರೂಜಿ...?! ಇವತ್ತಿನಿಂದಲೇ ಸಿ.ಎಂ ಆಗಲು ಪ್ರಯತ್ನ ಮಾಡ್ತೀನಿ, ನನಗೆ ಆಶೀರ್ವಾದ ಮಾಡಿ...’ ಎಂದು ಶಾಸಕರು ಕಾಣಿಕೆ ಕೊಟ್ಟು, ಅಡ್ಡ ಬಿದ್ದು ಹೊರಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>