‘ರಾತ್ರಿಕೆ ಕದ್ದು ಎಣ್ಣೆಸ್ನಾನ ಮಾಡಂಗಿಲ್ಲ! ನಿದ್ರೇಲಿ ಹೋರ್ಡಿಂಗ್ ಜಾಹೀರಾಥೂ, ಕಾಮಗಾರಿ, ಕಸದ ಅಕ್ರಮ, ಕೋವಿಡ್ ಕಂಟೈನ್ಮೆಂಟ್ ಶ್ರಮದಾನ, ನಕಲಿ ಬಿಲ್ಲುಗಳು ಭೂತವಾಗಿ ಬಂದು ಮೆಟರೆ ಹಿಸುಕಿದರೆ ಜಮೀರಾಯನಮಃ ಅಂತ ಸರ್ಕಾರಕ್ಕೆ ಆಸ್ತಿ ಬರೆದುಕೊಟ್ಟು ವಮನ ಕ್ರಿಯೆ ಮಾಡಿ ಯೋಗನಿದ್ರೆಗೆ ಹೋಗಬೇಕಾಯ್ತದೆ. ಯಾವುದೇ ಸ್ಕೀಮೋಲ್ಲಂಘನವಾದ್ರೆ ಸಸ್ಪೆಂಡ್ ಮಾಡಿ ಲೋಪಾಮುದ್ರೆ ಹಾಕಿ ಮನಿಗೆ ಕಳಿಸ್ತೀವಿ’ ಅಂದರು ಗುರುಗಳು.