ಕೊರೊನಣ್ಣನಿಗೆ ಖರೇ ಖರೇ ವಿಪರೀತ ಚಿಂತೆಗಿಟ್ಟುಕೊಂಡಿತು. ಯಾವ ಟಿ.ವಿಯವರೂ ಕ್ಯಾರೇ ಎನ್ನುತ್ತಿಲ್ಲ. ರುದ್ರಭಯಾನಕ ಹೆಡ್ಲೈನುಗಳನ್ನು ಕೊಟ್ಟು, ಕೊರೊನಾ ಸುದ್ದಿ ವದರುತ್ತಿದ್ದವರು, ಈಗ ಮಿಂಚಿ ಮಾಯವಾಗುವ ಸ್ಕ್ರಾಲ್
ಗಳಲ್ಲಿಯೂ ಇಷ್ಟು ಜನ ಸೋಂಕಿತರು, ಇಷ್ಟು ಜನ ಸತ್ತರು ಎಂದು ಇರುವೆಯೊಂದು ಕಡಿಯಿತು ಎಂಬಷ್ಟು ಸಹಜವಾಗಿ, ಅಗದಿ ಸೌಮ್ಯವಾಗಿ ಹೇಳುತ್ತಿದ್ದಾರೆ.