<p>‘ಬೆಳೆದಿದೆ ನೋಡ ಬೆಂಗಳೂರು ನಗರ…’ ದಶಕಗಳ ಹಿಂದಿನ ಹಳೆಯ ಸಿನಿಮಾ ಹಾಡು ಗುನುಗುತ್ತ ಬಂದರು ಜಿಬಿಎ ಅಧಿಕಾರಿ ವಿಜಿ. </p><p>‘ತುಂಬಾ ದಿನಗಳಾಯ್ತು ಸಾರ್, ಆಫೀಸ್ ಹತ್ತಿರ ಕಾಣಲೇ ಇಲ್ಲ ನೀವು’ ಎಂದ ಟೀ ಅಂಗಡಿ ಮಾಲೀಕ ಮುದ್ದಣ್ಣ. </p><p>‘ಕೆಲಸ ಮುದ್ದಣ್ಣ ಕೆಲಸ, ಬಿಡುವೇ ಇಲ್ಲ’.</p><p>‘ತುಂಬಾ ಕೆಲಸ ಅಂತೀರಿ, ಆದರೆ, ಆಫೀಸಲ್ಲೇ ಇರಲ್ಲ ನೀವು. ಜನ ಮಾತ್ರ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿ ನಿಮಗೆ ಮತ್ತು ಸರ್ಕಾರಕ್ಕೆ ಶಾಪ ಹಾಕಿ ಹೋಗ್ತಿದ್ದಾರೆ’ ಹೆದರುತ್ತಲೇ ಹೇಳಿದ ಮುದ್ದಣ್ಣ. </p><p>‘ನಾವೇನ್ ಮಾಡ್ತಿದೀವಿ ನಮಗೇ ಗೊತ್ತಾಗ್ತಿಲ್ಲ, ಇನ್ನು ನಿನಗೇನ್ ಗೊತ್ತಾಗುತ್ತೆ ಹೇಳು’.</p><p>‘ಬಿ ಖಾತಾದಲ್ಲಿ ಮನೆ ಕಟ್ಟೋರಿಗೆ ವಿದ್ಯುತ್, ನೀರು ಕೊಡ್ತಿಲ್ವಂತಲ್ಲ ಸರ್ ನೀವು. ‘ಒಸಿ’ ಬೇಡ ಅಂತ<br>ಪೇಪರ್ನಲ್ಲಿ ಬರುತ್ತೆ, ಆದರೆ ನಕ್ಷೆ ಬೇಕು ಅಂತ ನಿಮ್ಮ ಸಿಬ್ಬಂದಿ ಕೇಳ್ತಾರೆ, ಜನ ಏನ್ ಮಾಡಬೇಕು’.</p><p>‘ನೋಡು, ಪೇಪರ್ನಲ್ಲಿ ಬರಲಿ ಅಂತ ಮಿನಿಸ್ಟರ್ ಸಾಹೇಬ್ರು ಏನೋ ಹೇಳಿರ್ತಾರೆ, ಒಳಗಡೆ ಬೇರೆಯೇ ಇರುತ್ತೆ, ಕೆಲಸ ಆಗ್ತಿದೆ ಅಂತ ಅನಿಸಬೇಕು, ಆದರೆ ಕೆಲಸ ಆಗಬಾರದು ಅಷ್ಟೇ’ ಮಾರ್ಮಿಕವಾಗಿ ಹೇಳಿದರು ಆಫೀಸರ್. </p><p>‘ಈಗ ಜಿಬಿಎ ಕೆಲಸಗಳಾದರೂ ಆಗ್ತಿವೆಯಾ ಸರ್’.</p><p>‘ಇಲ್ಲ. ನಮ್ಮ ಸಿಬ್ಬಂದಿ ಎಲ್ಲ ಈಗ ಜಾತಿ ಸಮೀಕ್ಷೆಯಲ್ಲಿ ಬ್ಯುಸಿ ಇದ್ದಾರೆ’.</p><p>‘ಸಮೀಕ್ಷೆನಾದರೂ ಸರಿಯಾಗಿ ಆಗ್ತಿದೆಯಾ ಸರ್’.</p><p>‘ನೀನೇನಯ್ಯಾ ಒಳ್ಳೆ ಇ.ಡಿ. ಆಫೀಸರ್ ಥರ ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತೀಯ, ಒಂದ್ ಟೀ ಕೊಡು, ನಾನು ಹೊರಡಬೇಕು’.</p><p>‘ಎಲ್ಲಿಗೆ ಸರ್?’ </p><p>‘ಲಾಲ್ಬಾಗ್ಗೆ ಹೋಗಬೇಕು ಕಣಯ್ಯ. ಅಲ್ಲಿ ಸುರಂಗ ಕೊರೆದು ದಶಪಥ ರಸ್ತೆ ಮಾಡೋದಕ್ಕೆ ಎಷ್ಟು ಸಾವಿರ ಕೋಟಿ ಬೇಕಾಗುತ್ತೆ ಅಂತ ರಿಪೋರ್ಟ್ ಕೊಡೋದಕ್ಕೆ ಹೇಳಿದ್ದಾರೆ ಮಿನಿಸ್ಟರ್ ಸಾಹೇಬ್ರು’ ಎಂದು ಟೀ ಹೀರಿ ಹೊರಟರು ಆಫೀಸರ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಬೆಳೆದಿದೆ ನೋಡ ಬೆಂಗಳೂರು ನಗರ…’ ದಶಕಗಳ ಹಿಂದಿನ ಹಳೆಯ ಸಿನಿಮಾ ಹಾಡು ಗುನುಗುತ್ತ ಬಂದರು ಜಿಬಿಎ ಅಧಿಕಾರಿ ವಿಜಿ. </p><p>‘ತುಂಬಾ ದಿನಗಳಾಯ್ತು ಸಾರ್, ಆಫೀಸ್ ಹತ್ತಿರ ಕಾಣಲೇ ಇಲ್ಲ ನೀವು’ ಎಂದ ಟೀ ಅಂಗಡಿ ಮಾಲೀಕ ಮುದ್ದಣ್ಣ. </p><p>‘ಕೆಲಸ ಮುದ್ದಣ್ಣ ಕೆಲಸ, ಬಿಡುವೇ ಇಲ್ಲ’.</p><p>‘ತುಂಬಾ ಕೆಲಸ ಅಂತೀರಿ, ಆದರೆ, ಆಫೀಸಲ್ಲೇ ಇರಲ್ಲ ನೀವು. ಜನ ಮಾತ್ರ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿ ನಿಮಗೆ ಮತ್ತು ಸರ್ಕಾರಕ್ಕೆ ಶಾಪ ಹಾಕಿ ಹೋಗ್ತಿದ್ದಾರೆ’ ಹೆದರುತ್ತಲೇ ಹೇಳಿದ ಮುದ್ದಣ್ಣ. </p><p>‘ನಾವೇನ್ ಮಾಡ್ತಿದೀವಿ ನಮಗೇ ಗೊತ್ತಾಗ್ತಿಲ್ಲ, ಇನ್ನು ನಿನಗೇನ್ ಗೊತ್ತಾಗುತ್ತೆ ಹೇಳು’.</p><p>‘ಬಿ ಖಾತಾದಲ್ಲಿ ಮನೆ ಕಟ್ಟೋರಿಗೆ ವಿದ್ಯುತ್, ನೀರು ಕೊಡ್ತಿಲ್ವಂತಲ್ಲ ಸರ್ ನೀವು. ‘ಒಸಿ’ ಬೇಡ ಅಂತ<br>ಪೇಪರ್ನಲ್ಲಿ ಬರುತ್ತೆ, ಆದರೆ ನಕ್ಷೆ ಬೇಕು ಅಂತ ನಿಮ್ಮ ಸಿಬ್ಬಂದಿ ಕೇಳ್ತಾರೆ, ಜನ ಏನ್ ಮಾಡಬೇಕು’.</p><p>‘ನೋಡು, ಪೇಪರ್ನಲ್ಲಿ ಬರಲಿ ಅಂತ ಮಿನಿಸ್ಟರ್ ಸಾಹೇಬ್ರು ಏನೋ ಹೇಳಿರ್ತಾರೆ, ಒಳಗಡೆ ಬೇರೆಯೇ ಇರುತ್ತೆ, ಕೆಲಸ ಆಗ್ತಿದೆ ಅಂತ ಅನಿಸಬೇಕು, ಆದರೆ ಕೆಲಸ ಆಗಬಾರದು ಅಷ್ಟೇ’ ಮಾರ್ಮಿಕವಾಗಿ ಹೇಳಿದರು ಆಫೀಸರ್. </p><p>‘ಈಗ ಜಿಬಿಎ ಕೆಲಸಗಳಾದರೂ ಆಗ್ತಿವೆಯಾ ಸರ್’.</p><p>‘ಇಲ್ಲ. ನಮ್ಮ ಸಿಬ್ಬಂದಿ ಎಲ್ಲ ಈಗ ಜಾತಿ ಸಮೀಕ್ಷೆಯಲ್ಲಿ ಬ್ಯುಸಿ ಇದ್ದಾರೆ’.</p><p>‘ಸಮೀಕ್ಷೆನಾದರೂ ಸರಿಯಾಗಿ ಆಗ್ತಿದೆಯಾ ಸರ್’.</p><p>‘ನೀನೇನಯ್ಯಾ ಒಳ್ಳೆ ಇ.ಡಿ. ಆಫೀಸರ್ ಥರ ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತೀಯ, ಒಂದ್ ಟೀ ಕೊಡು, ನಾನು ಹೊರಡಬೇಕು’.</p><p>‘ಎಲ್ಲಿಗೆ ಸರ್?’ </p><p>‘ಲಾಲ್ಬಾಗ್ಗೆ ಹೋಗಬೇಕು ಕಣಯ್ಯ. ಅಲ್ಲಿ ಸುರಂಗ ಕೊರೆದು ದಶಪಥ ರಸ್ತೆ ಮಾಡೋದಕ್ಕೆ ಎಷ್ಟು ಸಾವಿರ ಕೋಟಿ ಬೇಕಾಗುತ್ತೆ ಅಂತ ರಿಪೋರ್ಟ್ ಕೊಡೋದಕ್ಕೆ ಹೇಳಿದ್ದಾರೆ ಮಿನಿಸ್ಟರ್ ಸಾಹೇಬ್ರು’ ಎಂದು ಟೀ ಹೀರಿ ಹೊರಟರು ಆಫೀಸರ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>