‘ನಮ್ಮಂತೋರಿಗೂ ಒಂದು ಪ್ಯಾಕೇಜು ಕೊಡಿ’ ಅಂದ್ರು ಗುರುಗಳು. ರಾಜಾವುಲಿ ‘ಸ್ವಾಮಿ, ರಾಜ್ಯದೇಲಿ ಏನು ಮಾಡಿದ್ರೂ ಕೊರೊನಾ ಹೋಯ್ತಿಲ್ಲ! ತಮ್ಮ ಖರಾಬು ಕೀರ್ತಿ ಕೇಳಿದೀನಿ. ತಾವು ಎಲ್ಲೆಲ್ಲಿ ಕೊರೊನಾ ಜಾಸ್ತಿ ಅದೋ ಅಲ್ಲಿ ತಮ್ಮ ಐರನ್ಲೆಗ್ಗು ಮಡಗಬೇಕ್ರಾ! ಕೊರೊನಾ ತಮ್ಮಿಂದ ಹೊಂಟೋದ್ರೆ ಒಂದು ಐರನ್ಲೆಗ್ ಅಧ್ಯಯನ ಪೀಠ ಮಾಡ್ತೀನಿ. ಅದಕ್ಕೆ ನೀವೇ ಪರ್ಮನೆಂಟ್ ಅಧ್ಯಕ್ಸರು! ಕೋಟಿ ಅನುದಾನ ಕೊಡ್ತೀವಿ’ ಅಂದ್ರು.