<p>‘ಭಕ್ತ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ, ನಿನಗೆ ಏನು ವರ ಬೇಕು ಕೇಳು’.</p>.<p>‘ಭಗವಂತ, ದೇವರುಗಳೆಲ್ಲಾ ನೆಲ ಬಿಟ್ಟು ಬೆಟ್ಟದ ಮೇಲೆ ವಾಸ್ತವ್ಯ ಹೂಡಬೇಕು ಎಂಬುದು ನನ್ನ ಕೋರಿಕೆ’.</p>.<p>‘ಹಹ್ಹಹ್ಹ... ಮನುಷ್ಯರು ಗಗನಚುಂಬಿ ಅಪಾರ್ಟ್ಮೆಂಟ್ಗಳಲ್ಲಿದ್ದಾರೆ, ನಾವು ಅವರಿಗಿಂತ ಎತ್ತರದಲ್ಲಿ ಬೆಟ್ಟದ ಮೇಲಿರಬೇಕು ಎಂಬುದು ನಿನ್ನ ಅಭಿಲಾಷೆಯೇ?’</p>.<p>‘ಹಾಗೇನಿಲ್ಲ ಪ್ರಭು, ಬೆಟ್ಟಗಳು ಈಗ ಸಂಕಷ್ಟ ದಲ್ಲಿವೆ, ನೀವು ಅವುಗಳ ಕಷ್ಟ ನಿವಾರಿಸಬೇಕು’.</p>.<p>‘ರಾಮನಗರದ ಕಪಾಲ ಬೆಟ್ಟಕ್ಕೆ ಬಂದಿರುವ ಕಷ್ಟವೇ? ಅಲ್ಲಿ ಯೇಸು ಪ್ರತಿಮೆ ಸ್ಥಾಪನೆಗೆ ನಿನ್ನ ವಿರೋಧವೇ?’</p>.<p>‘ಪರ-ವಿರೋಧ ಅಂತೇನಿಲ್ಲ ದೇವಾ. ಶಿವ, ಯೇಸು, ಅಲ್ಲಾ... ಎಲ್ಲ ದೇವರೂ ತಿರುಪತಿ ತಿಮ್ಮಪ್ಪನಂತೆ ಇನ್ನು ಮುಂದೆ ಬೆಟ್ಟಗಳ ಮೇಲೆಯೇ ನೆಲೆಸಿ, ಬೆಟ್ಟಗಳು ಕಳವಾಗದಂತೆ ಕಾವಲು ಕಾಯಲಿ ಅಂತ’.</p>.<p>‘ಬೆಟ್ಟಗಳ ಕಳವೇ?! ಅಸಂಭವ. ಆಂಜನೇಯನು ಸಂಜೀವಿನಿ ಪರ್ವತವನ್ನು, ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಹೊತ್ತ ರೀತಿ, ಮನುಷ್ಯ ಬೆಟ್ಟ ಎತ್ತುವುದು, ಹೊತ್ತು ಹೋಗುವುದು ಸಾಧ್ಯವೇ ಭಕ್ತ?’</p>.<p>‘ಪ್ರಭು, ನೀವಿನ್ನೂ ಅಪ್ಡೇಟ್ ಆಗಿಲ್ಲ. ಕಲ್ಲು ಗಣಿಗಾರರ ಕಣ್ಣಿಗೆ ಬೀಳುವ ಬೆಟ್ಟಗಳು ಮಂಜುಗಡ್ಡೆಯಂತೆ ಕುಳಿತಲ್ಲೇ ಕರಗಿ ಹೋಗುತ್ತವೆ, ಕರಗದಂತೆ ದೇವರುಗಳು ಕಾವಲಿದ್ದು ಮುಂದಿನ ಪೀಳಿಗೆಗೆ ಬೆಟ್ಟಗಳನ್ನು ಉಳಿಸಿ. ಇಲ್ಲವೇ ಹೊಸ ಬೆಟ್ಟಗಳನ್ನು ಸೃಷ್ಟಿಸಿ’.</p>.<p>‘ನಾನು ಸೃಷ್ಟಿಕರ್ತ ನಿಜ. ಆದರೆ, ಬೆಟ್ಟಗಳನ್ನು ಸೃಷ್ಟಿಸಲಾರೆ’.</p>.<p>‘ನೀವು ಬೆಟ್ಟದಲ್ಲಿ ಪ್ರತಿಷ್ಠಾಪನೆಗೊಂಡರೆ ಆಗ ಬೆಟ್ಟವನ್ನು ಒಡೆದು, ಪುಡಿ ಮಾಡಲು ಗಣಿಗಾರರು ಹಿಂಜರಿಯುತ್ತಾರೆ. ಪಾಪಪ್ರಜ್ಞೆಯ ಕಾರಣಕ್ಕಾದರೂ ಬೆಟ್ಟಗಳು ಉಳಿಯುತ್ತವೆ’.</p>.<p>‘ಸುಮ್ಮನಿರು ಭಕ್ತ, ಗಣಿಧಣಿಗಳು ನಮಗೆ ಬಂಗಾರದ ಕಿರೀಟ ತೊಡಿಸಿ, ಹುಂಡಿ ತುಂಬಿಸಿ ತಮ್ಮ ಪಾಪ ನಿವಾರಣೆ ಮಾಡಿಕೊಳ್ಳುತ್ತಾರೆ. ಬೆಟ್ಟಗಳ ಉಸಾಬರಿಯೇ ಬೇಡ...’ ಎನ್ನುತ್ತಾ ದೇವರು ಅದೃಶ್ಯನಾದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಭಕ್ತ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ, ನಿನಗೆ ಏನು ವರ ಬೇಕು ಕೇಳು’.</p>.<p>‘ಭಗವಂತ, ದೇವರುಗಳೆಲ್ಲಾ ನೆಲ ಬಿಟ್ಟು ಬೆಟ್ಟದ ಮೇಲೆ ವಾಸ್ತವ್ಯ ಹೂಡಬೇಕು ಎಂಬುದು ನನ್ನ ಕೋರಿಕೆ’.</p>.<p>‘ಹಹ್ಹಹ್ಹ... ಮನುಷ್ಯರು ಗಗನಚುಂಬಿ ಅಪಾರ್ಟ್ಮೆಂಟ್ಗಳಲ್ಲಿದ್ದಾರೆ, ನಾವು ಅವರಿಗಿಂತ ಎತ್ತರದಲ್ಲಿ ಬೆಟ್ಟದ ಮೇಲಿರಬೇಕು ಎಂಬುದು ನಿನ್ನ ಅಭಿಲಾಷೆಯೇ?’</p>.<p>‘ಹಾಗೇನಿಲ್ಲ ಪ್ರಭು, ಬೆಟ್ಟಗಳು ಈಗ ಸಂಕಷ್ಟ ದಲ್ಲಿವೆ, ನೀವು ಅವುಗಳ ಕಷ್ಟ ನಿವಾರಿಸಬೇಕು’.</p>.<p>‘ರಾಮನಗರದ ಕಪಾಲ ಬೆಟ್ಟಕ್ಕೆ ಬಂದಿರುವ ಕಷ್ಟವೇ? ಅಲ್ಲಿ ಯೇಸು ಪ್ರತಿಮೆ ಸ್ಥಾಪನೆಗೆ ನಿನ್ನ ವಿರೋಧವೇ?’</p>.<p>‘ಪರ-ವಿರೋಧ ಅಂತೇನಿಲ್ಲ ದೇವಾ. ಶಿವ, ಯೇಸು, ಅಲ್ಲಾ... ಎಲ್ಲ ದೇವರೂ ತಿರುಪತಿ ತಿಮ್ಮಪ್ಪನಂತೆ ಇನ್ನು ಮುಂದೆ ಬೆಟ್ಟಗಳ ಮೇಲೆಯೇ ನೆಲೆಸಿ, ಬೆಟ್ಟಗಳು ಕಳವಾಗದಂತೆ ಕಾವಲು ಕಾಯಲಿ ಅಂತ’.</p>.<p>‘ಬೆಟ್ಟಗಳ ಕಳವೇ?! ಅಸಂಭವ. ಆಂಜನೇಯನು ಸಂಜೀವಿನಿ ಪರ್ವತವನ್ನು, ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಹೊತ್ತ ರೀತಿ, ಮನುಷ್ಯ ಬೆಟ್ಟ ಎತ್ತುವುದು, ಹೊತ್ತು ಹೋಗುವುದು ಸಾಧ್ಯವೇ ಭಕ್ತ?’</p>.<p>‘ಪ್ರಭು, ನೀವಿನ್ನೂ ಅಪ್ಡೇಟ್ ಆಗಿಲ್ಲ. ಕಲ್ಲು ಗಣಿಗಾರರ ಕಣ್ಣಿಗೆ ಬೀಳುವ ಬೆಟ್ಟಗಳು ಮಂಜುಗಡ್ಡೆಯಂತೆ ಕುಳಿತಲ್ಲೇ ಕರಗಿ ಹೋಗುತ್ತವೆ, ಕರಗದಂತೆ ದೇವರುಗಳು ಕಾವಲಿದ್ದು ಮುಂದಿನ ಪೀಳಿಗೆಗೆ ಬೆಟ್ಟಗಳನ್ನು ಉಳಿಸಿ. ಇಲ್ಲವೇ ಹೊಸ ಬೆಟ್ಟಗಳನ್ನು ಸೃಷ್ಟಿಸಿ’.</p>.<p>‘ನಾನು ಸೃಷ್ಟಿಕರ್ತ ನಿಜ. ಆದರೆ, ಬೆಟ್ಟಗಳನ್ನು ಸೃಷ್ಟಿಸಲಾರೆ’.</p>.<p>‘ನೀವು ಬೆಟ್ಟದಲ್ಲಿ ಪ್ರತಿಷ್ಠಾಪನೆಗೊಂಡರೆ ಆಗ ಬೆಟ್ಟವನ್ನು ಒಡೆದು, ಪುಡಿ ಮಾಡಲು ಗಣಿಗಾರರು ಹಿಂಜರಿಯುತ್ತಾರೆ. ಪಾಪಪ್ರಜ್ಞೆಯ ಕಾರಣಕ್ಕಾದರೂ ಬೆಟ್ಟಗಳು ಉಳಿಯುತ್ತವೆ’.</p>.<p>‘ಸುಮ್ಮನಿರು ಭಕ್ತ, ಗಣಿಧಣಿಗಳು ನಮಗೆ ಬಂಗಾರದ ಕಿರೀಟ ತೊಡಿಸಿ, ಹುಂಡಿ ತುಂಬಿಸಿ ತಮ್ಮ ಪಾಪ ನಿವಾರಣೆ ಮಾಡಿಕೊಳ್ಳುತ್ತಾರೆ. ಬೆಟ್ಟಗಳ ಉಸಾಬರಿಯೇ ಬೇಡ...’ ಎನ್ನುತ್ತಾ ದೇವರು ಅದೃಶ್ಯನಾದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>