<p>‘ಸರ್ಕಾರದ ಬಜೆಟ್ ಮಂಡನೆ ಮುಗಿದು ಇಷ್ಟು ದಿನಾದರೂ ನಾಯಕರು ಅದರ ಭಜನೆ ನಿಲ್ಲಿಸಿಲ್ಲ... ಬಜೆಟ್ ಬಗ್ಗೆ ಆಳುವ ಪಕ್ಷದ ಕೇಕೆ, ಕೇಳುವ ಪಕ್ಷಗಳ ಟೀಕೆ ಚುನಾವಣೆವರೆಗೂ ಮುಂದುವರಿಯಬಹುದಾ?’ ಸುಮಿ ಕೇಳಿದಳು.</p>.<p>‘ಇದು ಚುನಾವಣೆ ಬಜೆಟ್ ಅಂತ ನಾಯಕರೇ ನಾಮಕರಣ ಮಾಡಿರುವುದರಿಂದ ಈ ಬಜೆಟ್ ವೋಟ್ ಮ್ಯಾಟರ್ ಆಗಬಹುದು’ ಅಂದ ಶಂಕ್ರಿ.</p>.<p>‘ಈ ಬಜೆಟ್ ಯುಗಾದಿಯ ಒಬ್ಬಟ್ಟು ಅಂತ ಆಡಳಿತ ಪಕ್ಷದ ನಾಯಕರು ಚಪ್ಪರಿಸುತ್ತಿದ್ದಾರೆ.<br />ಹೂರಣ ಇಲ್ಲದ ಸಪ್ಪೆ ಹೋಳಿಗೆ ಅಂತ ಸಿದ್ದರಾಮಣ್ಣ ತೆಗಳಿದ್ದಾರೆ. ಉಪ್ಪು, ಹುಳಿ, ಖಾರ ಇಲ್ಲದ ಸತ್ವಹೀನ ಬಜೆಟ್ ಅಂತ ಕುಮಾರಣ್ಣ ಕೀಟಲೆ ಮಾಡಿದ್ದಾರೆ’.</p>.<p>‘ಅವರವರ ಪಕ್ಷನಿಷ್ಠಾನುಸಾರ ಬಜೆಟ್ ವಿಶ್ಲೇಷಣೆ ಮಾಡ್ತಾರೆ. ಉದ್ಯೋಗ ಸೃಷ್ಟಿ, ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗುವ ಕಾರ್ಯಕ್ರಮಗಳಿಲ್ಲ ಅಂತನೂ ಟೀಕಿಸಿದ್ದಾರೆ’.</p>.<p>‘ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿ ಬದುಕು ದುಬಾರಿಯಾಗಿದೆ. ಈ ಬಜೆಟ್ನಿಂದ ನಮ್ಮಂಥವರಿಗೆ ಏನೇನು ಪ್ರಯೋಜನ ಆಗಬಹುದು?’</p>.<p>‘ಕಾಶಿ ಯಾತ್ರೆಗೆ ಹೋಗಲು ಧನಸಹಾಯ, ತೀರ್ಥಯಾತ್ರೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರೋದು ನಮ್ಮಂಥವರಿಗಾಗಿ, ಜೊತೆಗೆ ಜಾತಿಗೊಂದು ನಿಗಮ ಮಾಡಿ ಕೋಟ್ಯಂತರ ರೂಪಾಯಿ ಕೊಟ್ಟಿದೆ, ಅದರ ಸೌಲಭ್ಯ ಪಡೆದು ಸರ್ವಜನರೂ ಸುಖವಾಗಿರಬಹುದಂತೆ’.</p>.<p>ಹಾಗಲ್ಲಾರೀ, ನಾವೂ ತೆರಿಗೆ ಕಟ್ಟುತ್ತೇವೆ, ಸರ್ಕಾರ ನಮ್ಮಂಥವರಿಗೆ ಮನೆ ಸಾಲ, ಒಡವೆ ಸಾಲ, ವಾಹನ ಸಾಲ ಕೊಟ್ಟು ಆಮೇಲೆ ಮನ್ನಾ ಮಾಡಬೇಕು ಅಲ್ವಾ?’</p>.<p>‘ನಮ್ಮ ಜುಜುಬಿ ತೆರಿಗೆ ಹಣದಿಂದ ಇಷ್ಟು ದೊಡ್ಡ ಬಜೆಟ್ ರೂಪಿಸಲು ಸಾಧ್ಯವಿಲ್ಲ. ಎಲ್ಲಾ ಸರ್ಕಾರಗಳು ಸಾಲ ನಂಬಿಕೊಂಡೇ ಬಜೆಟ್ ಸಿದ್ಧ ಮಾಡುತ್ತವೆ. ಬಜೆಟ್ ಸೌಲಭ್ಯ ಸಿಗದಿದ್ದರೂ ಸಾಲದ ಪಾಲು ಮಾತ್ರ ನಮಗೆ ಸಿಗುತ್ತೆಬಿಡು...’ ಎಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸರ್ಕಾರದ ಬಜೆಟ್ ಮಂಡನೆ ಮುಗಿದು ಇಷ್ಟು ದಿನಾದರೂ ನಾಯಕರು ಅದರ ಭಜನೆ ನಿಲ್ಲಿಸಿಲ್ಲ... ಬಜೆಟ್ ಬಗ್ಗೆ ಆಳುವ ಪಕ್ಷದ ಕೇಕೆ, ಕೇಳುವ ಪಕ್ಷಗಳ ಟೀಕೆ ಚುನಾವಣೆವರೆಗೂ ಮುಂದುವರಿಯಬಹುದಾ?’ ಸುಮಿ ಕೇಳಿದಳು.</p>.<p>‘ಇದು ಚುನಾವಣೆ ಬಜೆಟ್ ಅಂತ ನಾಯಕರೇ ನಾಮಕರಣ ಮಾಡಿರುವುದರಿಂದ ಈ ಬಜೆಟ್ ವೋಟ್ ಮ್ಯಾಟರ್ ಆಗಬಹುದು’ ಅಂದ ಶಂಕ್ರಿ.</p>.<p>‘ಈ ಬಜೆಟ್ ಯುಗಾದಿಯ ಒಬ್ಬಟ್ಟು ಅಂತ ಆಡಳಿತ ಪಕ್ಷದ ನಾಯಕರು ಚಪ್ಪರಿಸುತ್ತಿದ್ದಾರೆ.<br />ಹೂರಣ ಇಲ್ಲದ ಸಪ್ಪೆ ಹೋಳಿಗೆ ಅಂತ ಸಿದ್ದರಾಮಣ್ಣ ತೆಗಳಿದ್ದಾರೆ. ಉಪ್ಪು, ಹುಳಿ, ಖಾರ ಇಲ್ಲದ ಸತ್ವಹೀನ ಬಜೆಟ್ ಅಂತ ಕುಮಾರಣ್ಣ ಕೀಟಲೆ ಮಾಡಿದ್ದಾರೆ’.</p>.<p>‘ಅವರವರ ಪಕ್ಷನಿಷ್ಠಾನುಸಾರ ಬಜೆಟ್ ವಿಶ್ಲೇಷಣೆ ಮಾಡ್ತಾರೆ. ಉದ್ಯೋಗ ಸೃಷ್ಟಿ, ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗುವ ಕಾರ್ಯಕ್ರಮಗಳಿಲ್ಲ ಅಂತನೂ ಟೀಕಿಸಿದ್ದಾರೆ’.</p>.<p>‘ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿ ಬದುಕು ದುಬಾರಿಯಾಗಿದೆ. ಈ ಬಜೆಟ್ನಿಂದ ನಮ್ಮಂಥವರಿಗೆ ಏನೇನು ಪ್ರಯೋಜನ ಆಗಬಹುದು?’</p>.<p>‘ಕಾಶಿ ಯಾತ್ರೆಗೆ ಹೋಗಲು ಧನಸಹಾಯ, ತೀರ್ಥಯಾತ್ರೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರೋದು ನಮ್ಮಂಥವರಿಗಾಗಿ, ಜೊತೆಗೆ ಜಾತಿಗೊಂದು ನಿಗಮ ಮಾಡಿ ಕೋಟ್ಯಂತರ ರೂಪಾಯಿ ಕೊಟ್ಟಿದೆ, ಅದರ ಸೌಲಭ್ಯ ಪಡೆದು ಸರ್ವಜನರೂ ಸುಖವಾಗಿರಬಹುದಂತೆ’.</p>.<p>ಹಾಗಲ್ಲಾರೀ, ನಾವೂ ತೆರಿಗೆ ಕಟ್ಟುತ್ತೇವೆ, ಸರ್ಕಾರ ನಮ್ಮಂಥವರಿಗೆ ಮನೆ ಸಾಲ, ಒಡವೆ ಸಾಲ, ವಾಹನ ಸಾಲ ಕೊಟ್ಟು ಆಮೇಲೆ ಮನ್ನಾ ಮಾಡಬೇಕು ಅಲ್ವಾ?’</p>.<p>‘ನಮ್ಮ ಜುಜುಬಿ ತೆರಿಗೆ ಹಣದಿಂದ ಇಷ್ಟು ದೊಡ್ಡ ಬಜೆಟ್ ರೂಪಿಸಲು ಸಾಧ್ಯವಿಲ್ಲ. ಎಲ್ಲಾ ಸರ್ಕಾರಗಳು ಸಾಲ ನಂಬಿಕೊಂಡೇ ಬಜೆಟ್ ಸಿದ್ಧ ಮಾಡುತ್ತವೆ. ಬಜೆಟ್ ಸೌಲಭ್ಯ ಸಿಗದಿದ್ದರೂ ಸಾಲದ ಪಾಲು ಮಾತ್ರ ನಮಗೆ ಸಿಗುತ್ತೆಬಿಡು...’ ಎಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>