<p>‘ಮೀನಿನ ಹೆಜ್ಜೆ ಗುರುತಿಸಬಹುದು, ಆದರೆ ನೀರಿನ ಹೆಜ್ಜೆ ಅಂದಾಜಿಸಲಾಗದು. ನಾನು ಈ ಮಾತನ್ನು ಬೈಟು ಕಾಫಿ ಮುಂದೆ ನಿಂತು ಹೇಳುತ್ತಿದ್ದೇನೆ’ ಎಂದು ಥೇಟ್ ಜಮೀರ್ ಶೈಲಿಯಲ್ಲಿ ಘೋಷಿಸಿದ ಬದ್ರಿ.</p>.<p>‘ಮೂರನೇ ಮಹಾಯುದ್ಧ ಅಂತ ಆದ್ರೆ ಅದು ನೀರಿಗಾಗಿಯೇ ಅಂತಾರೆ...’ ಎಂದು ಕೊಟ್ರಿ ತನ್ನ ಮಾತನ್ನು ಸೇರಿಸಿದ.</p>.<p>‘ಅದೇನೋ ಗೊತ್ತಿಲ್ಲ, ವಿಧಾನಸೌಧದ ಬ್ಯಾಂಕ್ವೆಟ್ ‘ಹಾಲಿನಲ್ಲಿ ನೀರಿನ ಹೆಜ್ಜೆ’ ಮೂಡಿರುವುದಂತೂ ನಿಜ’.</p>.<p>‘ಅಂದ್ರೆ ಹಾಲುಮತ ನೀರುಮತ ಬೆರೆತಂತೆ, ಭಿನ್ನಮತ ತಣ್ಣಗಾದಂತೆ, ರಾಜಣ್ಣ ಕ್ರಾಂತಿ ಮರೆತಂತೆ...’</p>.<p>‘ಅದೇನೇ ಇರಲಿ, ನೀರಿನ ಹೆಜ್ಜೆ ಪುಸ್ತಕದ ಕಿಕ್ಕರ್ ಸಾಲಿನ ಸೀಕ್ವೆನ್ಸ್ ತಪ್ಪೇ ತಪ್ಪು. ‘ವಿವಾದ ಒಪ್ಪಂದ ತೀರ್ಪು’ ಹೇಗಾಗುತ್ತದೆ? ಮೊದಲು ಅಂತಃಪುರದಲ್ಲಾದ ಹಸ್ತಾಂತರ ಒಪ್ಪಂದ, ನಂತರ ಬೆಂಬಲಿಗರ ಬಹಿರಂಗ ವಿವಾದ, ಕೊನೆಗೆ ಕಾಯ್ದಿರಿಸಿರುವ ಹೈಕಮಾಂಡ್ ತೀರ್ಪು ಬರಬೇಕು’ ತಿಂಗಳೇಶನ ವಿವರಣೆ.</p>.<p>‘ಅಬ್ಬಬ್ಬಾ... ಅಧಿಕಾರಕ್ಕೆ ಎಷ್ಟೊಂದು ಮಾರ್ಗಗಳು! ಸುರಂಗ ಮಾರ್ಗದ ನಂತರ ಈಗ ಜಲಮಾರ್ಗ ಹಿಡಿದಿರುವ ನಮ್ಮ ಬಂಡೆ ಸಾಹೇಬರು ಬಲ ಮಾರ್ಗವನ್ನೂ ಕಾಯ್ದಿರಿಸಿದ್ದಾರಂತೆ’.</p>.<p>‘ರಾಜಕಾರಣಿಗಳಿಗೆ ಅಧಿಕಾರ ತಲುಪಲು ಅಗಣಿತ ಮಾರ್ಗಗಳೇನೋ ಸರಿ, ಜನರಿಗೆ ಸ್ವರ್ಗ ತಲುಪಲು ಮಾತ್ರ ಏಕೈಕ ಮಾರ್ಗ. ಅದರ ನಿರ್ಮಾತೃ ಕೂಡ ಅಧಿಕಾರಸ್ಥರೇ...’</p>.<p>‘ವೀರಮಾರ್ಗ ಧೀರಮಾರ್ಗ ಗೊತ್ತಿತ್ತು, ಇದೀಗ ನೀರಮಾರ್ಗ ಕ್ಷೀರಮಾರ್ಗ ಗೊತ್ತಾಯ್ತು. ಇನ್ಯಾವುದಪ್ಪಾ ಸ್ವರ್ಗದ ಮಾರ್ಗ?’</p>.<p>‘ಅದೇ… ಗುಂಡಿಗಳು ತುಂಬಿದ ನರಕ ರಸ್ತೆ ಮೂಲಕ ಸ್ವರ್ಗ ತಲಪುವ ಸುಲಭ ಮಾರ್ಗ’.</p>.<p>‘ಹಾಗಾದರೆ ‘ನೀರಿನ ಹೆಜ್ಜೆ’ ಕೃತಿಕಾರರಿಂದ ಆಧುನಿಕ ‘ಕವಿರಾಜಮಾರ್ಗ’ ರಚನೆಯೂ ಆಗಲಿ’ ತಿಂಗಳೇಶ ಆಶಾವಾದದ ಹೆಜ್ಜೆ ಇರಿಸಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮೀನಿನ ಹೆಜ್ಜೆ ಗುರುತಿಸಬಹುದು, ಆದರೆ ನೀರಿನ ಹೆಜ್ಜೆ ಅಂದಾಜಿಸಲಾಗದು. ನಾನು ಈ ಮಾತನ್ನು ಬೈಟು ಕಾಫಿ ಮುಂದೆ ನಿಂತು ಹೇಳುತ್ತಿದ್ದೇನೆ’ ಎಂದು ಥೇಟ್ ಜಮೀರ್ ಶೈಲಿಯಲ್ಲಿ ಘೋಷಿಸಿದ ಬದ್ರಿ.</p>.<p>‘ಮೂರನೇ ಮಹಾಯುದ್ಧ ಅಂತ ಆದ್ರೆ ಅದು ನೀರಿಗಾಗಿಯೇ ಅಂತಾರೆ...’ ಎಂದು ಕೊಟ್ರಿ ತನ್ನ ಮಾತನ್ನು ಸೇರಿಸಿದ.</p>.<p>‘ಅದೇನೋ ಗೊತ್ತಿಲ್ಲ, ವಿಧಾನಸೌಧದ ಬ್ಯಾಂಕ್ವೆಟ್ ‘ಹಾಲಿನಲ್ಲಿ ನೀರಿನ ಹೆಜ್ಜೆ’ ಮೂಡಿರುವುದಂತೂ ನಿಜ’.</p>.<p>‘ಅಂದ್ರೆ ಹಾಲುಮತ ನೀರುಮತ ಬೆರೆತಂತೆ, ಭಿನ್ನಮತ ತಣ್ಣಗಾದಂತೆ, ರಾಜಣ್ಣ ಕ್ರಾಂತಿ ಮರೆತಂತೆ...’</p>.<p>‘ಅದೇನೇ ಇರಲಿ, ನೀರಿನ ಹೆಜ್ಜೆ ಪುಸ್ತಕದ ಕಿಕ್ಕರ್ ಸಾಲಿನ ಸೀಕ್ವೆನ್ಸ್ ತಪ್ಪೇ ತಪ್ಪು. ‘ವಿವಾದ ಒಪ್ಪಂದ ತೀರ್ಪು’ ಹೇಗಾಗುತ್ತದೆ? ಮೊದಲು ಅಂತಃಪುರದಲ್ಲಾದ ಹಸ್ತಾಂತರ ಒಪ್ಪಂದ, ನಂತರ ಬೆಂಬಲಿಗರ ಬಹಿರಂಗ ವಿವಾದ, ಕೊನೆಗೆ ಕಾಯ್ದಿರಿಸಿರುವ ಹೈಕಮಾಂಡ್ ತೀರ್ಪು ಬರಬೇಕು’ ತಿಂಗಳೇಶನ ವಿವರಣೆ.</p>.<p>‘ಅಬ್ಬಬ್ಬಾ... ಅಧಿಕಾರಕ್ಕೆ ಎಷ್ಟೊಂದು ಮಾರ್ಗಗಳು! ಸುರಂಗ ಮಾರ್ಗದ ನಂತರ ಈಗ ಜಲಮಾರ್ಗ ಹಿಡಿದಿರುವ ನಮ್ಮ ಬಂಡೆ ಸಾಹೇಬರು ಬಲ ಮಾರ್ಗವನ್ನೂ ಕಾಯ್ದಿರಿಸಿದ್ದಾರಂತೆ’.</p>.<p>‘ರಾಜಕಾರಣಿಗಳಿಗೆ ಅಧಿಕಾರ ತಲುಪಲು ಅಗಣಿತ ಮಾರ್ಗಗಳೇನೋ ಸರಿ, ಜನರಿಗೆ ಸ್ವರ್ಗ ತಲುಪಲು ಮಾತ್ರ ಏಕೈಕ ಮಾರ್ಗ. ಅದರ ನಿರ್ಮಾತೃ ಕೂಡ ಅಧಿಕಾರಸ್ಥರೇ...’</p>.<p>‘ವೀರಮಾರ್ಗ ಧೀರಮಾರ್ಗ ಗೊತ್ತಿತ್ತು, ಇದೀಗ ನೀರಮಾರ್ಗ ಕ್ಷೀರಮಾರ್ಗ ಗೊತ್ತಾಯ್ತು. ಇನ್ಯಾವುದಪ್ಪಾ ಸ್ವರ್ಗದ ಮಾರ್ಗ?’</p>.<p>‘ಅದೇ… ಗುಂಡಿಗಳು ತುಂಬಿದ ನರಕ ರಸ್ತೆ ಮೂಲಕ ಸ್ವರ್ಗ ತಲಪುವ ಸುಲಭ ಮಾರ್ಗ’.</p>.<p>‘ಹಾಗಾದರೆ ‘ನೀರಿನ ಹೆಜ್ಜೆ’ ಕೃತಿಕಾರರಿಂದ ಆಧುನಿಕ ‘ಕವಿರಾಜಮಾರ್ಗ’ ರಚನೆಯೂ ಆಗಲಿ’ ತಿಂಗಳೇಶ ಆಶಾವಾದದ ಹೆಜ್ಜೆ ಇರಿಸಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>