<p>ಬೆಕ್ಕಣ್ಣ ಮಡಿ ಪಂಚೆಯುಟ್ಟು, ಹಣೆಗೆ ಕುಂಕುಮವಿಟ್ಟು, ಪಂಚಾಂಗದ ಕಟ್ಟು ಹಿಡಿದು ಕೂತಿತ್ತು.</p><p>‘ಏನಲೇ ಇದು ನಿನ್ನ ಅವತಾರ? ನೀ ಯಾವಾಗಿಂದ ಯುಗಾದಿ ಪಂಚಾಂಗ ಹೇಳಾಕೆ ಶುರು ಮಾಡಿದೆ?’ ಎಂದೆ ಗಾಬರಿಯಿಂದ.</p><p>‘ಹಾಕಿದ್ಯಾ ಅಡ್ಡಬಾಯಿ’ ಎಂದು ರೇಗಿದ ಬೆಕ್ಕಣ್ಣ, ‘ಯುಟ್ಯೂಬ್ಗೆ ಅಪ್ಲೋಡ್ ಮಾಡೂಣು ಅಂತ ರಿಹರ್ಸಲ್ ಮಾಡಾಕ್ಹತ್ತೀನಿ’ ಎಂದುತ್ತರಿಸಿ ಗಂಟಲು ಸರಿಪಡಿಸಿಕೊಂಡಿತು.</p><p>‘ಹೊಸ ವಿಶ್ವಾವಸು ಸಂವತ್ಸರದೊಳು ಕರುನಾಡಿಗರಿಗೆ ಕ್ಷೀರ, ಧಾನ್ಯ, ಫಲ, ತರಕಾರಿ ಬಲು ತುಟ್ಟಿಯಾಗುವುದು. ವಿದ್ಯುತ್ ತಂತಿಗಿಂತಲೂ ವಿದ್ಯುತ್ ಬಿಲ್ ಹೆಚ್ಚು ಶಾಕ್ ಹೊಡೆಯುವುದು’.</p><p>‘ಅದನ್ನು ಹೇಳಾಕೆ ನಿನ್ನ ಪಂಚಾಂಗ ಎದಕ್ಕೆ ಬೇಕಲೇ? ಹಳೇ ಸಂವತ್ಸರ ಹೋಗುವಾಗ ಬೆಲೆ ಏರಿಕೆ ಉಡುಗೊರೆ ಕೊಟ್ಟು ಹೋಗೈತಿ. ಹೊಸ ಸಂವತ್ಸರನೂ ಬೆಲೆ ಏರಿಕೆ ಉಡುಗೊರೆ ಹಿಡಕೊಂಡೇ ಬಂದೈತಿ’ ಎಂದೆ.</p><p>‘ನೀ ಸುಮ್ಮನೆ ಕೇಳು. ವಿಶ್ವಾವಸು ಅಂದರೆ ವಿಶ್ವಾಸ, ನಂಬಿಕೆ ವೃದ್ಧಿ. ಮೋದಿಮಾಮ, ಟ್ರಂಪ್, ಪುಟಿನ್ ತ್ರಿಮೂರ್ತಿಗಳ ಮೇಲೆ ವಿಶ್ವದೆಲ್ಲೆಡೆಯ ಜನರ ವಿಶ್ವಾಸ ವೃದ್ಧಿಯಾಗುವುದು. ಈ ಜನನಾಯಕರಿಗೆ ದೊಡ್ಡ ಕಾರ್ಪೊರೇಟ್ ಕುಳಗಳ ಮೇಲೆ ನಂಬಿಕೆ ಇನ್ನಷ್ಟು ಹೆಚ್ಚುವುದು’.</p><p>‘ಅಂಗೈ ಹುಣ್ಣಿಗೆ ಕನ್ನಡಿ ತೋರಿಸಿದಂತೆ ನೀ ಸಂವತ್ಸರ ಫಲ ಹೇಳಾಕೆ ಹತ್ತಿ! ನಿಮ್ಮ ಯತ್ನಾಳ ಅಂಕಲ್ಲು ಪಕ್ಷದಿಂದ ಉಚ್ಚಾಟನೆಯಾದ್ರೂ<br>2028ರಾಗೆ ನಾನೇ ಸಿಎಂ ಅಂದಾರೆ. ಹೊಸ ಸಂವತ್ಸರ ಏನು ಹೇಳತೈತೆ?’ ಎಂದು ಕೇಳಿದೆ.</p><p>‘2028ರ ಸಂವತ್ಸರ ಫಲದ ಮೇಲೆ ಅವರು ಸಿಎಂ ಆಗೂದು ಅವಲಂಬಿಸಿರತೈತಿ. ಮುಂದೆ ಕೇಳು. ವಿಶ್ವಾವಸು ಸಂವತ್ಸರದೊಳು ಎಲ್ಲಾ ರಾಶಿಯವರ ಸಂಪತ್ತು ಸಮೃದ್ಧಿಯಾಗುವುದು’ ಎಂದು ಖುಷಿಯಿಂದ ಹೇಳಿತು.</p><p>ನಾನು ಕಿಸಕ್ಕನೆ ನಕ್ಕೆ.</p><p>‘ಯಾರ ಸಂಪತ್ತು ವೃದ್ಧಿ? ಅದಾನಿ, ಅಂಬಾನಿಗಳಿದ್ದೋ ಅಥವಾ<br>ಶ್ರೀಸಾಮಾನ್ಯರಿದ್ದೋ?’</p><p>‘ಶ್ರೀಸಾಮಾನ್ಯರಿಗೆ ಸಂಪತ್ತು ಎದಕ್ಕೆ ಬೇಕು? ಅವರು ಚುನಾವಣೆವಳಗೆ ಮತ ಹಾಕಕ್ಕೆ ಜೀಂವಾ ಹಿಡಕ್ಕೊಂಡಿದ್ದರೆ ಸಾಕೇಳು!’ ಬೆಕ್ಕಣ್ಣ ಹಂಗಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಕ್ಕಣ್ಣ ಮಡಿ ಪಂಚೆಯುಟ್ಟು, ಹಣೆಗೆ ಕುಂಕುಮವಿಟ್ಟು, ಪಂಚಾಂಗದ ಕಟ್ಟು ಹಿಡಿದು ಕೂತಿತ್ತು.</p><p>‘ಏನಲೇ ಇದು ನಿನ್ನ ಅವತಾರ? ನೀ ಯಾವಾಗಿಂದ ಯುಗಾದಿ ಪಂಚಾಂಗ ಹೇಳಾಕೆ ಶುರು ಮಾಡಿದೆ?’ ಎಂದೆ ಗಾಬರಿಯಿಂದ.</p><p>‘ಹಾಕಿದ್ಯಾ ಅಡ್ಡಬಾಯಿ’ ಎಂದು ರೇಗಿದ ಬೆಕ್ಕಣ್ಣ, ‘ಯುಟ್ಯೂಬ್ಗೆ ಅಪ್ಲೋಡ್ ಮಾಡೂಣು ಅಂತ ರಿಹರ್ಸಲ್ ಮಾಡಾಕ್ಹತ್ತೀನಿ’ ಎಂದುತ್ತರಿಸಿ ಗಂಟಲು ಸರಿಪಡಿಸಿಕೊಂಡಿತು.</p><p>‘ಹೊಸ ವಿಶ್ವಾವಸು ಸಂವತ್ಸರದೊಳು ಕರುನಾಡಿಗರಿಗೆ ಕ್ಷೀರ, ಧಾನ್ಯ, ಫಲ, ತರಕಾರಿ ಬಲು ತುಟ್ಟಿಯಾಗುವುದು. ವಿದ್ಯುತ್ ತಂತಿಗಿಂತಲೂ ವಿದ್ಯುತ್ ಬಿಲ್ ಹೆಚ್ಚು ಶಾಕ್ ಹೊಡೆಯುವುದು’.</p><p>‘ಅದನ್ನು ಹೇಳಾಕೆ ನಿನ್ನ ಪಂಚಾಂಗ ಎದಕ್ಕೆ ಬೇಕಲೇ? ಹಳೇ ಸಂವತ್ಸರ ಹೋಗುವಾಗ ಬೆಲೆ ಏರಿಕೆ ಉಡುಗೊರೆ ಕೊಟ್ಟು ಹೋಗೈತಿ. ಹೊಸ ಸಂವತ್ಸರನೂ ಬೆಲೆ ಏರಿಕೆ ಉಡುಗೊರೆ ಹಿಡಕೊಂಡೇ ಬಂದೈತಿ’ ಎಂದೆ.</p><p>‘ನೀ ಸುಮ್ಮನೆ ಕೇಳು. ವಿಶ್ವಾವಸು ಅಂದರೆ ವಿಶ್ವಾಸ, ನಂಬಿಕೆ ವೃದ್ಧಿ. ಮೋದಿಮಾಮ, ಟ್ರಂಪ್, ಪುಟಿನ್ ತ್ರಿಮೂರ್ತಿಗಳ ಮೇಲೆ ವಿಶ್ವದೆಲ್ಲೆಡೆಯ ಜನರ ವಿಶ್ವಾಸ ವೃದ್ಧಿಯಾಗುವುದು. ಈ ಜನನಾಯಕರಿಗೆ ದೊಡ್ಡ ಕಾರ್ಪೊರೇಟ್ ಕುಳಗಳ ಮೇಲೆ ನಂಬಿಕೆ ಇನ್ನಷ್ಟು ಹೆಚ್ಚುವುದು’.</p><p>‘ಅಂಗೈ ಹುಣ್ಣಿಗೆ ಕನ್ನಡಿ ತೋರಿಸಿದಂತೆ ನೀ ಸಂವತ್ಸರ ಫಲ ಹೇಳಾಕೆ ಹತ್ತಿ! ನಿಮ್ಮ ಯತ್ನಾಳ ಅಂಕಲ್ಲು ಪಕ್ಷದಿಂದ ಉಚ್ಚಾಟನೆಯಾದ್ರೂ<br>2028ರಾಗೆ ನಾನೇ ಸಿಎಂ ಅಂದಾರೆ. ಹೊಸ ಸಂವತ್ಸರ ಏನು ಹೇಳತೈತೆ?’ ಎಂದು ಕೇಳಿದೆ.</p><p>‘2028ರ ಸಂವತ್ಸರ ಫಲದ ಮೇಲೆ ಅವರು ಸಿಎಂ ಆಗೂದು ಅವಲಂಬಿಸಿರತೈತಿ. ಮುಂದೆ ಕೇಳು. ವಿಶ್ವಾವಸು ಸಂವತ್ಸರದೊಳು ಎಲ್ಲಾ ರಾಶಿಯವರ ಸಂಪತ್ತು ಸಮೃದ್ಧಿಯಾಗುವುದು’ ಎಂದು ಖುಷಿಯಿಂದ ಹೇಳಿತು.</p><p>ನಾನು ಕಿಸಕ್ಕನೆ ನಕ್ಕೆ.</p><p>‘ಯಾರ ಸಂಪತ್ತು ವೃದ್ಧಿ? ಅದಾನಿ, ಅಂಬಾನಿಗಳಿದ್ದೋ ಅಥವಾ<br>ಶ್ರೀಸಾಮಾನ್ಯರಿದ್ದೋ?’</p><p>‘ಶ್ರೀಸಾಮಾನ್ಯರಿಗೆ ಸಂಪತ್ತು ಎದಕ್ಕೆ ಬೇಕು? ಅವರು ಚುನಾವಣೆವಳಗೆ ಮತ ಹಾಕಕ್ಕೆ ಜೀಂವಾ ಹಿಡಕ್ಕೊಂಡಿದ್ದರೆ ಸಾಕೇಳು!’ ಬೆಕ್ಕಣ್ಣ ಹಂಗಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>