‘ಯಾಕಿಲ್ಲ ಯಂಟಪ್ಪಣ್ಣ, ಅಪ್ಪಂದ್ರು ಕ್ಯಾಕರಣದಲ್ಲಿ ತಮ್ಮ ಸ್ವಯಂಕೃತಾಪರಾಧವಾದ ಮಕ್ಕಳಿಗೆ ಹಗ್ಗ-ಮೂಗುದಾರ ತೊಡಿಸಿ, ಲಾಳ ಕಟ್ಟಿಸಿ ರಾಜಕೀಯಕ್ಕೆ ರೆಡಿ ಮಾಡಿರತರೆ. ಹೈಕಮಾಂಡಿಂದ ಟಿಕೇಟು ಸಿಕ್ಕದಿದ್ರೆ ಮಕ್ಕಳ ಪರವಾಗಿ ತಾವೇ ಬಂಡಾಯದ ಜಲ್ಲಿಕಟ್ಟು ಮಾಡಕ್ಕೂ ತಯಾರಾಗಿರ್ತರೆ!’ ಅಂತಂದೆ.
‘ಸಾತಿವ್ರತ್ಯಕ್ಕೆ ಕಟ್ಟುಬಿದ್ದು ಹೆಂಡರನ್ನ ಚುನಾವಣೆಗೆ ಇಳಿಸಿರೋ ಗಂಡಯ್ಯದಿರದ್ದೂ ಇದೇ ಥರದ ಪತಿಷ್ಠೆ ಇರತದೆ ಕಪ್ಪ!’ ಅಂದು ಯಂಟಪ್ಪಣ್ಣ ಪಟಾಕಿ ಹಾರಿಸಿತು.