<p>‘ಕ್ಷಿಪ್ರ ಕ್ರಾಂತಿಗೆ ಸರ್ಕಾರ ಗಡಗಡ ಅಂತ ಪೇಪರಲ್ಲಿ ಬಂದದಲ್ಲಾ ಸಾರ್’ ಅಂದೆ. ‘ಎರಡನೇ ಪದದ ಕಾಗುಣಿತವ ಪೇಪರ್ನೋರು ತಪ್ಪಾಗಿ ಹಾಕವರೆ ಕಣೋ. ಒತ್ತಕ್ಷರ, ದೀರ್ಘಾಕ್ಷರ ಸರಿಮಾಡ್ಕಬೆಕು’ ಅಂದರು ತುರೇಮಣೆ. ನನಗೆ ಅವರಂದ ಕಾಗೆಕುಣಿತ ಅರ್ಥವಾಯ್ತು. ಸುಮ್ಮಗಾದೆ.</p>.<p>‘ಹೋಗ್ಲಿ ಬುಡಿ ಸಾರ್. ಈ ದೇಶಭಕ್ತರ ರಾಜೀನಾಮೆ ನೋಡಿದರೆ ನಿಮಗೇನನ್ನಿಸತದೆ? ಇವ್ಯಾಕೆ ಮುನಿಸಿಕಂಡವೆ?’ ಅಂತ ಕೇಳಿದೆ ನಾನು.</p>.<p>‘ಮೋದಿಮಾರಾಜರು ಮತ್ತು ಗ್ರಹಮಂತ್ರಿಗಳ ಮಾತಿನ ಪ್ರಕಾರ ಡಾ.ಧವಳಪ್ಪನೋರು ಟೋಪಿಸೆಲ್ ಹೋಟಲಿಗೆ ಜೂನಿಯರ್ ಡಾಕ್ಟರುಗಳನ್ನ ಕಳಿಸವರೆ!’ ಅಂದರು ತುರೇಮಣೆ. ‘ಮೋದಿಮಾರಾಜರು ಏನಂದಿದ್ದರು’ ಅಂತ ಕೇಳಿದೆ.</p>.<p>‘ನೋಡ್ಲಾ ಮೋದಿಮಾರಾಜರು ಪಕ್ಷ ಎಲ್ಲರನ್ನೂ ತಲುಪಬೇಕು ಅಂತ ಹೇಳವರೋ ಇಲ್ಲವೋ? ಸುಮ್ಮನೆ ಕೂರಕ್ಕೆ ಧವಳಪ್ಪ<br />ನೋರೇನು ಸನ್ಯಾಸಿಯಾ? ಜಾಸ್ತಿ ಜನ ಶಾಸಕರನ್ನ ಪಕ್ಷಕ್ಕೆ ಸೇರಿಸಿ, ಸಿಎಂ ಆಗಿ 5 ಲಕ್ಷ ಕೋಟಿ ಡಾಲರ್ ಬಜೆಟ್ ಮಾಡತರಂತೆ. ಅದಕ್ಕೆ ನಮ್ಮ ವೃತ್ತಿಪರ ನಿರಾಶಾವಾದಿಗಳೆಲ್ಲಾ ಅಲ್ಲಿಗೆ ಹೋಗವೆ’ ಅಂದರು ತುರೇಮಣೆ.</p>.<p>‘ಏನ್ಸಾರ್ ನೀವು. ಮೋದಿಮಾರಾಜರು ಹೇಳಿರದು ಅವರ ಬಜೆಟ್ಟನ್ನ ಟೀಕಿಸಿದವರು ವೃತ್ತಿಪರ ನಿರಾಶಾವಾದಿಗಳು ಅಂತ’ ಅನ್ನೋ ಕ್ಲಾರಿಫಿಕೇಶನ್ ಕೊಟ್ಟೆ.</p>.<p>‘ಥೋ! ವೃತ್ತಿಪರ ನಿರಾಶಾವಾದಿಗಳು ಎಲ್ಲಾ ಕಡೆ ಎಲ್ಲಾ ಸಮಯದಲ್ಲೂ ಇರತರೆ ಕಣೋ. ಇಲ್ಲಿ ಪದವಿ ಅನ್ನೋ ವ್ಯಾಧಿ ತಗುಲಿ ಮುನಿಸಿಕಂಡು ಕೆಟ್ಟನಾತ ಶುರುವಾಗದೆ. ಇವುನ್ನೆಲ್ಲಾ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಮಾಡಿದ್ರೆ ಅಲ್ಲಿ ಹೊಸ ವೃತ್ತಿಪರ ನಿರಾಶಾವಾದಿಗಳು ರಾಜೀನಾಮೆ ಹಿಡಕಂಡು ನುಲಿತವೆ’ ಅಂದ್ರು.</p>.<p>‘ಹೌದು ಸಾರ್ ಅದಕ್ಕೆ ಕುಮಾರಣ್ಣನ ಮಂತ್ರಿಗಳೆಲ್ಲಾ ರಾಜೀನಾಮೆ ಕೊಟ್ಟು ವೃತ್ತಿಪರ ನಿರಾಶಾವಾದಿಗಳನ್ನ ಮಂತ್ರಿ ಮಾಡೋ ಸಿದ್ಧ ಸೂತ್ರ ತಯಾರಾಗದಂತೆ!’ ಅಂದೆ.</p>.<p>‘ದಡ್ಡಾ, ಆಗ ವೃತ್ತಿಪರ ನಿರಾಶಾವಾದಿಗಳ ಹೊಸಾ ಬ್ಯಾಚ್ ಶುರುವಾಯ್ತದೆ!’ ಅಂದ್ರು ತುರೇಮಣೆ. ಇದು ಬಗೆಹರಿಯುವ ವ್ಯಾಧಿ ಅಲ್ಲ ಅಂತ ಪೆಟ್ರೋಲ್ ರೇಟು, ತರಕಾರಿ ರೇಟು, ಪ್ರವಾಹ, ಬರ ಮರೆತು, ತಪ್ ನಮ್ದೇ ಅಂತ ಟೀವಿ ಮುಂದೆ ಕುತುಗಂಡೊ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕ್ಷಿಪ್ರ ಕ್ರಾಂತಿಗೆ ಸರ್ಕಾರ ಗಡಗಡ ಅಂತ ಪೇಪರಲ್ಲಿ ಬಂದದಲ್ಲಾ ಸಾರ್’ ಅಂದೆ. ‘ಎರಡನೇ ಪದದ ಕಾಗುಣಿತವ ಪೇಪರ್ನೋರು ತಪ್ಪಾಗಿ ಹಾಕವರೆ ಕಣೋ. ಒತ್ತಕ್ಷರ, ದೀರ್ಘಾಕ್ಷರ ಸರಿಮಾಡ್ಕಬೆಕು’ ಅಂದರು ತುರೇಮಣೆ. ನನಗೆ ಅವರಂದ ಕಾಗೆಕುಣಿತ ಅರ್ಥವಾಯ್ತು. ಸುಮ್ಮಗಾದೆ.</p>.<p>‘ಹೋಗ್ಲಿ ಬುಡಿ ಸಾರ್. ಈ ದೇಶಭಕ್ತರ ರಾಜೀನಾಮೆ ನೋಡಿದರೆ ನಿಮಗೇನನ್ನಿಸತದೆ? ಇವ್ಯಾಕೆ ಮುನಿಸಿಕಂಡವೆ?’ ಅಂತ ಕೇಳಿದೆ ನಾನು.</p>.<p>‘ಮೋದಿಮಾರಾಜರು ಮತ್ತು ಗ್ರಹಮಂತ್ರಿಗಳ ಮಾತಿನ ಪ್ರಕಾರ ಡಾ.ಧವಳಪ್ಪನೋರು ಟೋಪಿಸೆಲ್ ಹೋಟಲಿಗೆ ಜೂನಿಯರ್ ಡಾಕ್ಟರುಗಳನ್ನ ಕಳಿಸವರೆ!’ ಅಂದರು ತುರೇಮಣೆ. ‘ಮೋದಿಮಾರಾಜರು ಏನಂದಿದ್ದರು’ ಅಂತ ಕೇಳಿದೆ.</p>.<p>‘ನೋಡ್ಲಾ ಮೋದಿಮಾರಾಜರು ಪಕ್ಷ ಎಲ್ಲರನ್ನೂ ತಲುಪಬೇಕು ಅಂತ ಹೇಳವರೋ ಇಲ್ಲವೋ? ಸುಮ್ಮನೆ ಕೂರಕ್ಕೆ ಧವಳಪ್ಪ<br />ನೋರೇನು ಸನ್ಯಾಸಿಯಾ? ಜಾಸ್ತಿ ಜನ ಶಾಸಕರನ್ನ ಪಕ್ಷಕ್ಕೆ ಸೇರಿಸಿ, ಸಿಎಂ ಆಗಿ 5 ಲಕ್ಷ ಕೋಟಿ ಡಾಲರ್ ಬಜೆಟ್ ಮಾಡತರಂತೆ. ಅದಕ್ಕೆ ನಮ್ಮ ವೃತ್ತಿಪರ ನಿರಾಶಾವಾದಿಗಳೆಲ್ಲಾ ಅಲ್ಲಿಗೆ ಹೋಗವೆ’ ಅಂದರು ತುರೇಮಣೆ.</p>.<p>‘ಏನ್ಸಾರ್ ನೀವು. ಮೋದಿಮಾರಾಜರು ಹೇಳಿರದು ಅವರ ಬಜೆಟ್ಟನ್ನ ಟೀಕಿಸಿದವರು ವೃತ್ತಿಪರ ನಿರಾಶಾವಾದಿಗಳು ಅಂತ’ ಅನ್ನೋ ಕ್ಲಾರಿಫಿಕೇಶನ್ ಕೊಟ್ಟೆ.</p>.<p>‘ಥೋ! ವೃತ್ತಿಪರ ನಿರಾಶಾವಾದಿಗಳು ಎಲ್ಲಾ ಕಡೆ ಎಲ್ಲಾ ಸಮಯದಲ್ಲೂ ಇರತರೆ ಕಣೋ. ಇಲ್ಲಿ ಪದವಿ ಅನ್ನೋ ವ್ಯಾಧಿ ತಗುಲಿ ಮುನಿಸಿಕಂಡು ಕೆಟ್ಟನಾತ ಶುರುವಾಗದೆ. ಇವುನ್ನೆಲ್ಲಾ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಮಾಡಿದ್ರೆ ಅಲ್ಲಿ ಹೊಸ ವೃತ್ತಿಪರ ನಿರಾಶಾವಾದಿಗಳು ರಾಜೀನಾಮೆ ಹಿಡಕಂಡು ನುಲಿತವೆ’ ಅಂದ್ರು.</p>.<p>‘ಹೌದು ಸಾರ್ ಅದಕ್ಕೆ ಕುಮಾರಣ್ಣನ ಮಂತ್ರಿಗಳೆಲ್ಲಾ ರಾಜೀನಾಮೆ ಕೊಟ್ಟು ವೃತ್ತಿಪರ ನಿರಾಶಾವಾದಿಗಳನ್ನ ಮಂತ್ರಿ ಮಾಡೋ ಸಿದ್ಧ ಸೂತ್ರ ತಯಾರಾಗದಂತೆ!’ ಅಂದೆ.</p>.<p>‘ದಡ್ಡಾ, ಆಗ ವೃತ್ತಿಪರ ನಿರಾಶಾವಾದಿಗಳ ಹೊಸಾ ಬ್ಯಾಚ್ ಶುರುವಾಯ್ತದೆ!’ ಅಂದ್ರು ತುರೇಮಣೆ. ಇದು ಬಗೆಹರಿಯುವ ವ್ಯಾಧಿ ಅಲ್ಲ ಅಂತ ಪೆಟ್ರೋಲ್ ರೇಟು, ತರಕಾರಿ ರೇಟು, ಪ್ರವಾಹ, ಬರ ಮರೆತು, ತಪ್ ನಮ್ದೇ ಅಂತ ಟೀವಿ ಮುಂದೆ ಕುತುಗಂಡೊ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>