‘ರಾಮನಿಲ್ಲದ ರಾಮರಥದಾಗೆ, ಇಡೀ ದೇಶ ಸುತ್ತಿ, ಇಟ್ಟಿಗೆ ಒಟ್ಟು ಮಾಡಿ, ಬಾಬರಿ ಮಸೀದಿ ಬೀಳಿಸಿ, ಅದೇ ಜಾಗದಲ್ಲೇ ರಾಮ ಹುಟ್ಯಾನ ಅಂತ ಸಾಧಿಸಾಕ ಅಷ್ಟೆಲ್ಲ ಮಾಡಿದ ಆ ಅಡ್ವಾಣಿಯವರ್ನ ಕರಿಯಾಕೇ ಮೀನಮೇಷ ಎಣ್ಸಿದ್ರು. ಇನ್ ನಮ್ಮನ್ನು ಕರೀತಾರೇನು ಅವ್ರು. ಆ ನೇಪಾಳದವ್ರು ಬೇರೆ ‘ರಾಮ ನಮ್ಮಲ್ಲಿ ಹುಟ್ಯಾನ, ನೇಪಾಳಿ ಅಂವ’ ಅಂತ ಹೇಳಾಕಹತ್ಯಾರ. ಆವಾಗೇ ನಮ್ಮವ್ವ, ನಮ್ಮಪ್ಪ ಬರ್ತ್ ಸರ್ಟಿಫಿಕೇಟ್ ಸರಿಯಾಗಿ ಮಾಡಿಸಿದ್ದರೆ ಜನ್ಮಭೂಮಿ ರಗಳೆನೇ ಇರ್ತಿರಲಿಲ್ಲ’ ರಾಮ ಸಿಡುಕಿದ.