‘ಹ್ಞೂಂ ಕಲಾ, ವೋಟಿಗೋಸ್ಕರ ರೈಸ್ ಪುಲ್ಲಿಂಗು ಮಾಡಬ್ಯಾಡಿ, ದುಡಿಯೋ ಕೈಗೆ ಕೆಲಸ ಕೊಡಿ. ಗೆದ್ದಮ್ಯಾಲೆ ರೈಸು, ಸೈಟು, ಭಾಗ್ಯಗಳು, ಲಕ್ಷ್ಮಿಗಳು, ಕಲ್ಯಾಣಗಳು ಇತ್ಯಾದಿ ಫ್ರೀ ಭರವಸೆಗಳು ಏನೇನವೆ ನಿಮ್ಮ ನಿಮ್ಮ ಪಕ್ಸದ ದುಡ್ಡಲ್ಲಿ ಕೊಟ್ಟುಗಳಿ, ನಮ್ಮ ಕಾಸಿಗೆ ಕಯ್ಯಾಕಬ್ಯಾಡಿ ಅಂತ ಜನ ತಾಕೀತು ಮಾಡಬಕು’ ತುರೇಮಣೆ ಮಾತಿನ ಉರಿ ಎಲ್ಲರಿಗೂ ತಾಕ್ತಿತ್ತು.