<p>ಚಿಕ್ಕೇಶಿಗೆ ತಾನು ಯಾವುದೋ ಜೋಶ್ನಲ್ಲಿ ಕೊಟ್ಟಿದ್ದ ಆಶ್ವಾಸನೆ ಪೀಕಲಾಟಕ್ಕೆ ಸಿಕ್ಕಿಸುತ್ತದೆ ಎಂಬ ಕಲ್ಪನೆ ಇರಲಿಲ್ಲ. ಕೊರೊನಾ ಆರ್ಭಟ ಕಡಿಮೆಯಾದ ಮೇಲೆ ಆ್ಯನಿವರ್ಸರೀನ ಹೊರಗೆ ಸೆಲೆಬ್ರೇಟ್ ಮಾಡೋಣ ಅಂದಿದ್ದನ್ನೇ ಮುಂದಿಟ್ಟು ಹೆಂಡತಿ ಚಿನ್ನಮ್ಮ ಬೆಳ್ಳಂಬೆಳಗ್ಗೆ ಕಾಫಿ ನಿರಾಕರಣೆ ಚಳವಳಿ ಪ್ರಾರಂಭಿಸಿಬಿಟ್ಟಿದ್ದಳು!</p>.<p>‘ಪೇಪರ್, ಟೀವಿ ನೋಡಿದೀಯಲ್ಲ. ಜನ ಮೈಮರೆತರೆ ಕೊರೊನಾ ಮೂರನೇ ಅಲೆ ಅಪ್ಪಳಿಸುತ್ತೇಂತ ಮೋದೀಜಿ ವಾರ್ನಿಂಗ್ ಕೊಟ್ಟಿಲ್ವೆ?’ ಎಂದ ಚಿಕ್ಕೇಶಿ.</p>.<p>‘ಅದೇ ಪೇಪರ್, ಟೀವೀಲಿ ಪುರಿ ಜಗನ್ನಾಥ ರಥೋತ್ಸವ ಶುರುವಾಗಿರೋದು, ಹೋಟೆಲ್-ಸಿನಿಮಾ-ಮಾರ್ಕೆಟ್ಗಳಲ್ಲಿ ಜನ ಜಮಾಯಿಸಿರೋದೂ ಬಂದಿತ್ತಲ್ಲ’ ಚಿನ್ನಮ್ಮನ ಉವಾಚ.</p>.<p>‘ಆಗ್ಲಿ, ನಾವು ಆ್ಯನಿವರ್ಸರೀನ ಆಕಾಶದಲ್ಲಿ ಮಾಡಿದ್ರೆ ಹೇಗೆ?’ ಎಂದ. ಸ್ವಲ್ಪ ಮೆತ್ತಗಾದ ಚಿನ್ನಮ್ಮ ‘ಅದೇನು ಬಿಡ್ಸಿ ಹೇಳ್ರೀ’ ಎಂದಳು.</p>.<p>‘ಮೆಕ್ಸಿಕೊದಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಕಂಪನಿಯೋರು ಮೊನ್ನೆ ಪ್ರಯೋಗಾರ್ಥ ಬಾಹ್ಯಾಕಾಶ ಯಾತ್ರೆ ಮಾಡಿದಾರೆ. ಅದ್ರಲ್ಲಿ ಭಾರತ ಮೂಲದ ಶಿರೀಷಾ ಬಂಡ್ಲ ಕೂಡ ಇದ್ದರು. ಹಿಂದೆ ನಮ್ಮ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್<br />ಈ ಯಾತ್ರೆ ಮಾಡಿದ್ರಲ್ಲಾ- ನಮ್ಮಿಬ್ಬರಿಗೆ ಎರಡು ಸೀಟ್ ಬುಕ್ ಮಾಡಿಸ್ತೀನಿ. ಆಗ ನೀನು ನಾಲ್ಕನೆಯವಳಾಗ್ತೀಯ!’</p>.<p>‘ಹೀಗೆ ಆಕಾಶ ತೋರಿಸಿ ಮಾತಿಗೆ ತಪ್ಪಿದರೆ ಅಡುಗೆ ಬಂದ್ ಮಾಡಿ ಉಪವಾಸ ಸತ್ಯಾಗ್ರಹ ಆರಂಭಿಸ್ತೀನಿ’.</p>.<p>‘ಮಹರಾಯ್ತಿ ಹಾಗೆಲ್ಲಾ ಮಾಡ್ಬೇಡ. ಆ್ಯನಿವರ್ಸರೀನ ಭೂಮಿ ಮೇಲೇ ಆಚರಿಸೋಣ, ರೈಲಲ್ಲಿ’.</p>.<p>‘ಹೀಗೆಲ್ಲಾ ರೈಲು ಬಿಟ್ರೆ ನಾನು ನಂಬೋಳಲ್ಲ...’</p>.<p>‘ಇಲ್ಕೇಳು, ನಿನ್ನ ತೌರು ಮನೆ ಮಂಗಳೂರಿನಿಂದ ಬೆಂಗಳೂರಿಗೆ ಹೋಗೋ ಸ್ಪೆಷಲ್ ಟ್ರೇನಿಗೆ ಮೊನ್ನೆಯಿಂದ ಎರಡು ವಿಸ್ಟಡೋಮ್ ಬೋಗಿಗಳನ್ನ ಜೋಡಿಸಿದಾರೆ. ಈ ಪಾರದರ್ಶಕ ಹೊದಿಕೆಯ ಬೋಗಿಗಳಲ್ಲಿ ಕುಳಿತು, ಮಳೆಗಾಲದ ಪಶ್ಚಿಮ ಘಟ್ಟದ ಸೊಬಗು ಸವಿಯುತ್ತಾ ಪ್ರಯಾಣಿಸುವುದು ಆಹಾ... ಸ್ವರ್ಗ ಸುಖ, ಗಗನಯಾನಕ್ಕಿಂತಲೂ ಮಿಗಿಲು!’</p>.<p>ಚಿನ್ನಮ್ಮ ಹೈಫೈ ಚಪ್ಪಾಳೆ ತಟ್ಟಿದಳು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕೇಶಿಗೆ ತಾನು ಯಾವುದೋ ಜೋಶ್ನಲ್ಲಿ ಕೊಟ್ಟಿದ್ದ ಆಶ್ವಾಸನೆ ಪೀಕಲಾಟಕ್ಕೆ ಸಿಕ್ಕಿಸುತ್ತದೆ ಎಂಬ ಕಲ್ಪನೆ ಇರಲಿಲ್ಲ. ಕೊರೊನಾ ಆರ್ಭಟ ಕಡಿಮೆಯಾದ ಮೇಲೆ ಆ್ಯನಿವರ್ಸರೀನ ಹೊರಗೆ ಸೆಲೆಬ್ರೇಟ್ ಮಾಡೋಣ ಅಂದಿದ್ದನ್ನೇ ಮುಂದಿಟ್ಟು ಹೆಂಡತಿ ಚಿನ್ನಮ್ಮ ಬೆಳ್ಳಂಬೆಳಗ್ಗೆ ಕಾಫಿ ನಿರಾಕರಣೆ ಚಳವಳಿ ಪ್ರಾರಂಭಿಸಿಬಿಟ್ಟಿದ್ದಳು!</p>.<p>‘ಪೇಪರ್, ಟೀವಿ ನೋಡಿದೀಯಲ್ಲ. ಜನ ಮೈಮರೆತರೆ ಕೊರೊನಾ ಮೂರನೇ ಅಲೆ ಅಪ್ಪಳಿಸುತ್ತೇಂತ ಮೋದೀಜಿ ವಾರ್ನಿಂಗ್ ಕೊಟ್ಟಿಲ್ವೆ?’ ಎಂದ ಚಿಕ್ಕೇಶಿ.</p>.<p>‘ಅದೇ ಪೇಪರ್, ಟೀವೀಲಿ ಪುರಿ ಜಗನ್ನಾಥ ರಥೋತ್ಸವ ಶುರುವಾಗಿರೋದು, ಹೋಟೆಲ್-ಸಿನಿಮಾ-ಮಾರ್ಕೆಟ್ಗಳಲ್ಲಿ ಜನ ಜಮಾಯಿಸಿರೋದೂ ಬಂದಿತ್ತಲ್ಲ’ ಚಿನ್ನಮ್ಮನ ಉವಾಚ.</p>.<p>‘ಆಗ್ಲಿ, ನಾವು ಆ್ಯನಿವರ್ಸರೀನ ಆಕಾಶದಲ್ಲಿ ಮಾಡಿದ್ರೆ ಹೇಗೆ?’ ಎಂದ. ಸ್ವಲ್ಪ ಮೆತ್ತಗಾದ ಚಿನ್ನಮ್ಮ ‘ಅದೇನು ಬಿಡ್ಸಿ ಹೇಳ್ರೀ’ ಎಂದಳು.</p>.<p>‘ಮೆಕ್ಸಿಕೊದಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಕಂಪನಿಯೋರು ಮೊನ್ನೆ ಪ್ರಯೋಗಾರ್ಥ ಬಾಹ್ಯಾಕಾಶ ಯಾತ್ರೆ ಮಾಡಿದಾರೆ. ಅದ್ರಲ್ಲಿ ಭಾರತ ಮೂಲದ ಶಿರೀಷಾ ಬಂಡ್ಲ ಕೂಡ ಇದ್ದರು. ಹಿಂದೆ ನಮ್ಮ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್<br />ಈ ಯಾತ್ರೆ ಮಾಡಿದ್ರಲ್ಲಾ- ನಮ್ಮಿಬ್ಬರಿಗೆ ಎರಡು ಸೀಟ್ ಬುಕ್ ಮಾಡಿಸ್ತೀನಿ. ಆಗ ನೀನು ನಾಲ್ಕನೆಯವಳಾಗ್ತೀಯ!’</p>.<p>‘ಹೀಗೆ ಆಕಾಶ ತೋರಿಸಿ ಮಾತಿಗೆ ತಪ್ಪಿದರೆ ಅಡುಗೆ ಬಂದ್ ಮಾಡಿ ಉಪವಾಸ ಸತ್ಯಾಗ್ರಹ ಆರಂಭಿಸ್ತೀನಿ’.</p>.<p>‘ಮಹರಾಯ್ತಿ ಹಾಗೆಲ್ಲಾ ಮಾಡ್ಬೇಡ. ಆ್ಯನಿವರ್ಸರೀನ ಭೂಮಿ ಮೇಲೇ ಆಚರಿಸೋಣ, ರೈಲಲ್ಲಿ’.</p>.<p>‘ಹೀಗೆಲ್ಲಾ ರೈಲು ಬಿಟ್ರೆ ನಾನು ನಂಬೋಳಲ್ಲ...’</p>.<p>‘ಇಲ್ಕೇಳು, ನಿನ್ನ ತೌರು ಮನೆ ಮಂಗಳೂರಿನಿಂದ ಬೆಂಗಳೂರಿಗೆ ಹೋಗೋ ಸ್ಪೆಷಲ್ ಟ್ರೇನಿಗೆ ಮೊನ್ನೆಯಿಂದ ಎರಡು ವಿಸ್ಟಡೋಮ್ ಬೋಗಿಗಳನ್ನ ಜೋಡಿಸಿದಾರೆ. ಈ ಪಾರದರ್ಶಕ ಹೊದಿಕೆಯ ಬೋಗಿಗಳಲ್ಲಿ ಕುಳಿತು, ಮಳೆಗಾಲದ ಪಶ್ಚಿಮ ಘಟ್ಟದ ಸೊಬಗು ಸವಿಯುತ್ತಾ ಪ್ರಯಾಣಿಸುವುದು ಆಹಾ... ಸ್ವರ್ಗ ಸುಖ, ಗಗನಯಾನಕ್ಕಿಂತಲೂ ಮಿಗಿಲು!’</p>.<p>ಚಿನ್ನಮ್ಮ ಹೈಫೈ ಚಪ್ಪಾಳೆ ತಟ್ಟಿದಳು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>