ಮಗನನ್ನೂ ಶಾಸಕನನ್ನಾಗಿ ಮಾಡಿ ತಮ್ಮೊಂದಿಗೆ ವಿಧಾನಸೌಧಕ್ಕೆ ಕರೆದೊಯ್ಯಬೇಕೆಂಬ ಕನಸು ಶಾಸಕರಿಗಿತ್ತು. ಅವರ ಪತ್ನಿಯು ಮಗನಿಗಾಗಿ ದೇವರಿಗೆ ಹರಕೆ ಹೊತ್ತಿದ್ದರು. ಮಗನೂ ಕಾರ್ಯಕರ್ತರನ್ನು ಸಂಘಟಿಸಿ ಪಕ್ಕದ ಕ್ಷೇತ್ರದಲ್ಲಿ ಕೃಷಿ ಮಾಡಲು ನೆಲ ಹಸನು ಮಾಡಿಕೊಂಡಿದ್ದ. ಆದರೆ, ಕುಟುಂಬಕ್ಕೊಂದು ರೇಷನ್ ಕಾರ್ಡ್ ರೀತಿ, ಕುಟುಂಬಕ್ಕೊಂದು ಟಿಕೆಟ್ ಅಂತ ಪಕ್ಷ ನಿರ್ಧಾರ ಮಾಡಿದ್ದು ಶಾಸಕರ ಕುಟುಂಬದ ಆಸೆಗೆ ತಣ್ಣೀರು ಎರಚಿದಂತಾಯ್ತು.