<p>‘ಸೋರುತಿಹುದು ಮನೆಯ ಮಾಳಿಗೆ...’ ಷರೀಫಜ್ಜನ ಹಾಡನ್ನು ಹಾಡುತ್ತಾ ಒಳ ಬಂದೆ.</p>.<p>‘ಬಂದ್ರಾ, ಬನ್ನಿ, ಬನ್ನಿ’ ಎಂದ ಹೆಂಡತಿ, ‘ನಮ್ಮ ಮನೆಯ ಮಾಳಿಗೆಯೂ ಸೋರುತಿದೆ, ನೋಡಿದಿರಾ?’ ಕೇಳಿದಳು. </p>.<p>‘ದೇಶದಲ್ಲಿ ನೀಟ್-ನೆಟ್ ಪೇಪರ್ಗಳೇ ಸೋರುತ್ತಿವೆ. ನಮ್ಮ ಮನೆ ಯಾವ ಲೆಕ್ಕ ಬಿಡಮ್ಮ?’ ಹೇಳಿದೆ ಉಡಾಫೆಯಿಂದ. </p>.<p>‘ನಮ್ಮ ದೇವರ ಮನೆಯೂ ಸೋರುತ್ತಿದೆ’ </p>.<p>‘ಅಂಥ ಅಯೋಧ್ಯೆ ಶ್ರೀರಾಮದೇವರ ದೇಗುಲವೇ ಸೋರುತ್ತಿದೆಯಂತೆ, ಇನ್ನು ನಮ್ಮ ದೇವರ ಮನೆ ಸೋರದಿರುತ್ತದೆಯೇ’ </p>.<p>‘ಏನಾಗಿದೆ ರೀ ನಿಮಗೆ’ ಎಂದು ರೇಗಿದ ಪತ್ನಿ, ‘ನಮ್ಮನೆ ಆವರಣದಲ್ಲಿರೋ ಗೋಡೆ ಕುಸಿದಿದೆ, ಅದಾದರೂ ಗೊತ್ತಿದೆಯಾ?’ </p>.<p>‘ದೊಡ್ಡ ದೊಡ್ಡ ಸೇತುವೆಗಳೇ ಕುಸಿಯುತ್ತಿವೆ....’ ಎನ್ನುತ್ತಿದ್ದಂತೆ ಬಾಯಿ ಮುಚ್ಚಿದ ಹೆಂಡತಿ, ‘ನಮ್ಮ ಊರಿನಲ್ಲಿ ಬಸ್ಸ್ಟ್ಯಾಂಡ್ ಬಿಲ್ಡಿಂಗ್ ಕೂಡ ಸೋರುತ್ತಿದೆಯಂತೆ ’ ಎಂದಳು. </p>.<p>‘ಏರ್ಪೋರ್ಟ್ಗಳೇ ಸೋರುತ್ತಿವೆ. ನಿಮ್ಮೂರಿನ ಬಸ್ಸ್ಟ್ಯಾಂಡ್ ಏನ್ ಮಹಾ’ ಎಂದೆ. </p>.<p>‘ಒಂದಾದರೂ ಒಳ್ಳೆಯ ಸುದ್ದಿ ಹೇಳ್ರಿ’ </p>.<p>‘ಆ ಪರಮಾತ್ಮ ಏನು ಹೇಳಿಸುತ್ತಿದ್ದಾನೋ ಅದನ್ನೇ ನಾನು ಹೇಳುತ್ತಿದ್ದೇನೆ’ ಎಂದೆ.</p>.<p>‘ಯಪ್ಪಾ, ನಿಮ್ಮ ವೇದಾಂತ ಕೇಳುವುದಕ್ಕಾಗ್ತಿಲ್ಲ ನನಗೆ. ಅದಿರಲಿ. ನಮ್ಮ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಅದಕ್ಕಾದರೂ ಖುಷಿ ಪಡಿ’. </p>.<p>‘ಖುಷಿಯ ವಿಚಾರವೇ, ಆದರೆ ಇನ್ನು ಮುಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜ ಟಿ20 ಮ್ಯಾಚ್ಗಳಲ್ಲಿ ಇಂಡಿಯನ್ ಜೆರ್ಸಿಯಲ್ಲಿ ಕಾಣಲ್ವಲ್ಲ’ ಎಂದೆ.</p>.<p>‘ಇದರಲ್ಲಿಯೂ ಬೇಸರವನ್ನೇ ನೋಡಬೇಡಿ. ಯುವಕರಿಗೂ ಅವಕಾಶ ಸಿಗಲಿ ಅನ್ನೋದು ಅವರ ಆಸೆ’. </p>.<p>‘ಎಲ್ಲರೂ ಹೀಗೇ ಯೋಚನೆ ಮಾಡಬೇಕು ಎಂದು ಪರಮಾತ್ಮ ನನ್ನಲ್ಲಿ ಹೇಳಿಸುತ್ತಿದ್ದಾನೆ’. </p>.<p>‘ಅದೇನಾದರೂ ನಿಜವಾದರೆ, ಶೇ 90ರಷ್ಟು ರಾಜಕಾರಣಿಗಳು ರಿಟೈರ್ಡ್ ಆಗಬೇಕಾಗುತ್ತೆ’ ನಕ್ಕಳು ಹೆಂಡತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸೋರುತಿಹುದು ಮನೆಯ ಮಾಳಿಗೆ...’ ಷರೀಫಜ್ಜನ ಹಾಡನ್ನು ಹಾಡುತ್ತಾ ಒಳ ಬಂದೆ.</p>.<p>‘ಬಂದ್ರಾ, ಬನ್ನಿ, ಬನ್ನಿ’ ಎಂದ ಹೆಂಡತಿ, ‘ನಮ್ಮ ಮನೆಯ ಮಾಳಿಗೆಯೂ ಸೋರುತಿದೆ, ನೋಡಿದಿರಾ?’ ಕೇಳಿದಳು. </p>.<p>‘ದೇಶದಲ್ಲಿ ನೀಟ್-ನೆಟ್ ಪೇಪರ್ಗಳೇ ಸೋರುತ್ತಿವೆ. ನಮ್ಮ ಮನೆ ಯಾವ ಲೆಕ್ಕ ಬಿಡಮ್ಮ?’ ಹೇಳಿದೆ ಉಡಾಫೆಯಿಂದ. </p>.<p>‘ನಮ್ಮ ದೇವರ ಮನೆಯೂ ಸೋರುತ್ತಿದೆ’ </p>.<p>‘ಅಂಥ ಅಯೋಧ್ಯೆ ಶ್ರೀರಾಮದೇವರ ದೇಗುಲವೇ ಸೋರುತ್ತಿದೆಯಂತೆ, ಇನ್ನು ನಮ್ಮ ದೇವರ ಮನೆ ಸೋರದಿರುತ್ತದೆಯೇ’ </p>.<p>‘ಏನಾಗಿದೆ ರೀ ನಿಮಗೆ’ ಎಂದು ರೇಗಿದ ಪತ್ನಿ, ‘ನಮ್ಮನೆ ಆವರಣದಲ್ಲಿರೋ ಗೋಡೆ ಕುಸಿದಿದೆ, ಅದಾದರೂ ಗೊತ್ತಿದೆಯಾ?’ </p>.<p>‘ದೊಡ್ಡ ದೊಡ್ಡ ಸೇತುವೆಗಳೇ ಕುಸಿಯುತ್ತಿವೆ....’ ಎನ್ನುತ್ತಿದ್ದಂತೆ ಬಾಯಿ ಮುಚ್ಚಿದ ಹೆಂಡತಿ, ‘ನಮ್ಮ ಊರಿನಲ್ಲಿ ಬಸ್ಸ್ಟ್ಯಾಂಡ್ ಬಿಲ್ಡಿಂಗ್ ಕೂಡ ಸೋರುತ್ತಿದೆಯಂತೆ ’ ಎಂದಳು. </p>.<p>‘ಏರ್ಪೋರ್ಟ್ಗಳೇ ಸೋರುತ್ತಿವೆ. ನಿಮ್ಮೂರಿನ ಬಸ್ಸ್ಟ್ಯಾಂಡ್ ಏನ್ ಮಹಾ’ ಎಂದೆ. </p>.<p>‘ಒಂದಾದರೂ ಒಳ್ಳೆಯ ಸುದ್ದಿ ಹೇಳ್ರಿ’ </p>.<p>‘ಆ ಪರಮಾತ್ಮ ಏನು ಹೇಳಿಸುತ್ತಿದ್ದಾನೋ ಅದನ್ನೇ ನಾನು ಹೇಳುತ್ತಿದ್ದೇನೆ’ ಎಂದೆ.</p>.<p>‘ಯಪ್ಪಾ, ನಿಮ್ಮ ವೇದಾಂತ ಕೇಳುವುದಕ್ಕಾಗ್ತಿಲ್ಲ ನನಗೆ. ಅದಿರಲಿ. ನಮ್ಮ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದೆ. ಅದಕ್ಕಾದರೂ ಖುಷಿ ಪಡಿ’. </p>.<p>‘ಖುಷಿಯ ವಿಚಾರವೇ, ಆದರೆ ಇನ್ನು ಮುಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜ ಟಿ20 ಮ್ಯಾಚ್ಗಳಲ್ಲಿ ಇಂಡಿಯನ್ ಜೆರ್ಸಿಯಲ್ಲಿ ಕಾಣಲ್ವಲ್ಲ’ ಎಂದೆ.</p>.<p>‘ಇದರಲ್ಲಿಯೂ ಬೇಸರವನ್ನೇ ನೋಡಬೇಡಿ. ಯುವಕರಿಗೂ ಅವಕಾಶ ಸಿಗಲಿ ಅನ್ನೋದು ಅವರ ಆಸೆ’. </p>.<p>‘ಎಲ್ಲರೂ ಹೀಗೇ ಯೋಚನೆ ಮಾಡಬೇಕು ಎಂದು ಪರಮಾತ್ಮ ನನ್ನಲ್ಲಿ ಹೇಳಿಸುತ್ತಿದ್ದಾನೆ’. </p>.<p>‘ಅದೇನಾದರೂ ನಿಜವಾದರೆ, ಶೇ 90ರಷ್ಟು ರಾಜಕಾರಣಿಗಳು ರಿಟೈರ್ಡ್ ಆಗಬೇಕಾಗುತ್ತೆ’ ನಕ್ಕಳು ಹೆಂಡತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>