‘ಅಲ್ಲಲೇ ಮಂಗ್ಯಾ, ಆಡಳಿತ ಅಂದ್ಮ್ಯಾಲೆ ಕೊಡಾದು, ತಕಳಾದು ಇದ್ದೇ ಇತ್ತದೆ. ಅದ್ಕೆ ಮಧ್ಯವರ್ತಿಗಳು ಯಾರು? ಆಡಳಿತ ಯಂತ್ರದಲ್ಲಿ ಕೆಲಸ ಮಾಡೋರು. ಅವರನ್ನೆಲ್ಲಾ ಈ ಲೋಕಾವುಲಿ ಅಟ್ಟಾಡಿಸಿ ಪರಪ್ಪನ್ ಜೈಲಿಗೆ ಓಡುಸ್ಬುಟ್ರೆ ಪರ್ಸಂಟೇಜ್ ಕಲೆಕ್ಸನ್ ಮಾಡೋರ್ ಯಾರ್ಲ? ಅದ್ಕೇ ಅವರನ್ ಕಾಯಕ್ಕೆ ಈ ಸೆಟಪ್ಪು. ಜನಗಳ ಕಣ್ಣಿಗೆ ‘ಓ ಹುಲಿ ಬಂತು ಹುಲಿ’ ಅನ್ನೋ ಅಂಗಾಗ್ಬೇಕು, ಇವರು ಪುಸ್ಸಿಕ್ಯಾಟ್ನ ಕಂಕಳಲ್ಲಿ ಮಡಿಕ್ಕಂಡು ತಲೆ ಸವರ್ಬೇಕು... ಎಂಗೆ?’