ಸಂಪುಟ ವಿಸ್ತರಣೆಯ ಕಸರತ್ತಿನಿಂದ ರಾಜಾಹುಲಿ ಹೈರಾಣಾಗಿ ಹೋಗಿದ್ದರು. ಸಚಿವ ಸ್ಥಾನ ವಂಚಿತರ ಫೋನ್ ಕರೆಗಳು ಬರುತ್ತಲೇ ಇದ್ದವು. ಸಾಹೇಬರ ಚಿಂತೆ ನೋಡಿದ ಅವರ ಕಾರು ಚಾಲಕ ತೆಪರೇಸಿ, ‘ಸರ್, ನೀವು ಪರ್ಮಿಶನ್ ಕೊಟ್ರೆ ನಿಮ್ಮ ಮೊಬೈಲ್ ಕಾಲ್ಗಳಿಗೆ ನಾನೇ ಉತ್ತರಿಸಿ ಎಲ್ಲ ಸರಿ ಮಾಡ್ತೀನಿ’ ಎಂದ. ಫಟ್ ಅಂತ ಮೊಬೈಲನ್ನು ಅವನ ಕೈಗಿತ್ತ ರಾಜಾಹುಲಿ ‘ಏನಾದ್ರು ಮಾಡ್ಕೊ’ ಎಂದು ನಿದ್ರೆಗೆ ಜಾರಿದರು.