<p>‘ಎಲ್ಲಾ ವ್ಯವಹಾರಗಳು ಶುರುವಾದರೂ ಸಿನಿಮಾ ಥಿಯೇಟರ್ಗಳ ಭಾಗ್ಯದ ಬಾಗಿಲು ತೆರೆಯಲಿಲ್ಲವಲ್ರೀ’ ಟಿ.ವಿ.ಯಲ್ಲಿ ಸಿನಿಮಾ ನೋಡುತ್ತಿದ್ದ ಸುಮಿ ಕೇಳಿದಳು.</p>.<p>‘ಕೊರೊನಾ ಇಂಟರ್ವಲ್ ಮುಗಿದು, ಮೇಲಿರುವ ದೊಡ್ಡ ಡೈರೆಕ್ಟರ್ ಆ್ಯಕ್ಷನ್ ಹೇಳಿದಾಗ ಸಿನಿಮಾ ಶುರುವಾಗುತ್ತದೆ’ ಎಂದ ಶಂಕ್ರಿ.</p>.<p>‘ಆ್ಯಕ್ಷನ್ ತಡವಾದ್ರೆ ಥಿಯೇಟರ್ಗಳು ವಾಣಿಜ್ಯ ಸಂಕೀರ್ಣ ಆಗಿಬಿಡ್ತವೆ ಕಣ್ರೀ... ಗಂಧದ ಗುಡಿಯಲ್ಲಿದ್ದ ಕಲಾರಾಧನೆಯ ಎಷ್ಟೋ ಗುಡಿ-ಗೋಪುರಗಳು ಉರುಳಿ ಮಾಲು, ಮಳಿಗೆ ಆಗಿಬಿಟ್ಟಿವೆ...’</p>.<p>‘ಹಾಗಂತ ಕೊರೊನಾ ಕಾಟದಲ್ಲಿ ಚಿತ್ರಮಂದಿರ ತೆರೆದರೆ ಅಭಿಮಾನಿ ಪ್ರೇಕ್ಷಕರಿಗೆ ಸೋಂಕು ಅಂಟುವುದಿಲ್ಲವೆ? ಜೊತೆಗೆ, ಆರು ತಿಂಗಳಿನಿಂದ ಪ್ರದರ್ಶನವಿಲ್ಲದೆ ಬೆಳ್ಳಿ ಪರದೆ ಕೊಳೆಯಾಗಿದೆಯಂತೆ, ಒಗೆದು ಒಪ್ಪ ಮಾಡಬೇಕಲ್ಲಾ?’</p>.<p>‘ಡಾ. ರಾಜ್ಕುಮಾರರ ಬಿಳಿ ಪಂಚೆಯಂತೆ ಶುಭ್ರವಾಗಿದ್ದ ಪರದೆಗೆ ಅದ್ಯಾವ ಹಟಮಾರಿ ಕೊಳೆ ಅಂಟಿಕೊಂಡಿದೆರೀ?’</p>.<p>‘ಡ್ರಗ್ಸ್ ಕೊಳೆ. ಇದು ಕೊರೊನಾಗಿಂತಾ ಅಪಾಯಕಾರಿಯಂತೆ. ಸಾಧಾರಣ ಡಿಟರ್ಜೆಂಟ್ನಿಂದ ಒಂದೇ ಒಗೆತದಲ್ಲಿ ಕೊಳೆ, ದುರ್ಗಂಧ ತೆಗೆಯುವುದು ಕಷ್ಟ ಅಂತ ಸಿಸಿಬಿಯವರು ಹೇಳುತ್ತಿದ್ದಾರೆ’.</p>.<p>‘ಶ್ರೀಗಂಧದ ಘಮಲಿಗೆ ಗಾಂಜಾ ಅಮಲು ಸೇರಿಕೊಂಡು ಬೆಳ್ಳಿಪರದೆ ಗಲೀಜಾಗಿರುವ ವಿಚಾರವೇನ್ರೀ?’</p>.<p>‘ಹೌದು, ಲಾಕ್ಡೌನ್ ಗ್ಯಾಪ್ನಲ್ಲಿ ಶ್ರೀಗಂಧದ ಇಳುವರಿ ಕುಸಿಯಿತು ಅಂತ ಕೆಲವರು ಶ್ರೀಗಂಧದ ಗಾರ್ಡನ್ನಲ್ಲಿ ಲಾಭದಾಯಕ ಗಾಂಜಾ ಬಿತ್ತನೆ ಮಾಡಲು ಹೋಗಿದ್ರಂತೆ’.</p>.<p>‘ಗಾಂಜಾವು ತುಳಿಸಿಯಷ್ಟೇ ಪವಿತ್ರ, ತುಳಿಸಿಕಟ್ಟೆ ರೀತಿ ಗಾಂಜಾಕಟ್ಟೆ ಕಟ್ಟಿ ಪೂಜಿಸಬಹುದು ಅಂದ್ರಂತೆ ಮೈಮೇಲೆ ಪ್ರಜ್ಞೆ ಇಲ್ಲದ ಪ್ರಜ್ಞಾವಂತರು!’</p>.<p>‘ಕೊರೊನಾಗೆ ಗಾಂಜಾ ಕಷಾಯ ರಾಮಬಾಣ ಅಂತನೂ ಹೇಳಿಬಿಡುತ್ತಿದ್ದರೇನೋ, ಸದ್ಯ, ಸಿಸಿಬಿಯವರು ಹಿಡಿದು ಅಮಲು ಇಳಿಸುತ್ತಿದ್ದಾರೆ...’ ಎಂದು ಸಿಟ್ಟಿನಿಂದ ಶಂಕ್ರಿ ಟಿ.ವಿ. ಆಫ್ ಮಾಡಿ ಎದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಎಲ್ಲಾ ವ್ಯವಹಾರಗಳು ಶುರುವಾದರೂ ಸಿನಿಮಾ ಥಿಯೇಟರ್ಗಳ ಭಾಗ್ಯದ ಬಾಗಿಲು ತೆರೆಯಲಿಲ್ಲವಲ್ರೀ’ ಟಿ.ವಿ.ಯಲ್ಲಿ ಸಿನಿಮಾ ನೋಡುತ್ತಿದ್ದ ಸುಮಿ ಕೇಳಿದಳು.</p>.<p>‘ಕೊರೊನಾ ಇಂಟರ್ವಲ್ ಮುಗಿದು, ಮೇಲಿರುವ ದೊಡ್ಡ ಡೈರೆಕ್ಟರ್ ಆ್ಯಕ್ಷನ್ ಹೇಳಿದಾಗ ಸಿನಿಮಾ ಶುರುವಾಗುತ್ತದೆ’ ಎಂದ ಶಂಕ್ರಿ.</p>.<p>‘ಆ್ಯಕ್ಷನ್ ತಡವಾದ್ರೆ ಥಿಯೇಟರ್ಗಳು ವಾಣಿಜ್ಯ ಸಂಕೀರ್ಣ ಆಗಿಬಿಡ್ತವೆ ಕಣ್ರೀ... ಗಂಧದ ಗುಡಿಯಲ್ಲಿದ್ದ ಕಲಾರಾಧನೆಯ ಎಷ್ಟೋ ಗುಡಿ-ಗೋಪುರಗಳು ಉರುಳಿ ಮಾಲು, ಮಳಿಗೆ ಆಗಿಬಿಟ್ಟಿವೆ...’</p>.<p>‘ಹಾಗಂತ ಕೊರೊನಾ ಕಾಟದಲ್ಲಿ ಚಿತ್ರಮಂದಿರ ತೆರೆದರೆ ಅಭಿಮಾನಿ ಪ್ರೇಕ್ಷಕರಿಗೆ ಸೋಂಕು ಅಂಟುವುದಿಲ್ಲವೆ? ಜೊತೆಗೆ, ಆರು ತಿಂಗಳಿನಿಂದ ಪ್ರದರ್ಶನವಿಲ್ಲದೆ ಬೆಳ್ಳಿ ಪರದೆ ಕೊಳೆಯಾಗಿದೆಯಂತೆ, ಒಗೆದು ಒಪ್ಪ ಮಾಡಬೇಕಲ್ಲಾ?’</p>.<p>‘ಡಾ. ರಾಜ್ಕುಮಾರರ ಬಿಳಿ ಪಂಚೆಯಂತೆ ಶುಭ್ರವಾಗಿದ್ದ ಪರದೆಗೆ ಅದ್ಯಾವ ಹಟಮಾರಿ ಕೊಳೆ ಅಂಟಿಕೊಂಡಿದೆರೀ?’</p>.<p>‘ಡ್ರಗ್ಸ್ ಕೊಳೆ. ಇದು ಕೊರೊನಾಗಿಂತಾ ಅಪಾಯಕಾರಿಯಂತೆ. ಸಾಧಾರಣ ಡಿಟರ್ಜೆಂಟ್ನಿಂದ ಒಂದೇ ಒಗೆತದಲ್ಲಿ ಕೊಳೆ, ದುರ್ಗಂಧ ತೆಗೆಯುವುದು ಕಷ್ಟ ಅಂತ ಸಿಸಿಬಿಯವರು ಹೇಳುತ್ತಿದ್ದಾರೆ’.</p>.<p>‘ಶ್ರೀಗಂಧದ ಘಮಲಿಗೆ ಗಾಂಜಾ ಅಮಲು ಸೇರಿಕೊಂಡು ಬೆಳ್ಳಿಪರದೆ ಗಲೀಜಾಗಿರುವ ವಿಚಾರವೇನ್ರೀ?’</p>.<p>‘ಹೌದು, ಲಾಕ್ಡೌನ್ ಗ್ಯಾಪ್ನಲ್ಲಿ ಶ್ರೀಗಂಧದ ಇಳುವರಿ ಕುಸಿಯಿತು ಅಂತ ಕೆಲವರು ಶ್ರೀಗಂಧದ ಗಾರ್ಡನ್ನಲ್ಲಿ ಲಾಭದಾಯಕ ಗಾಂಜಾ ಬಿತ್ತನೆ ಮಾಡಲು ಹೋಗಿದ್ರಂತೆ’.</p>.<p>‘ಗಾಂಜಾವು ತುಳಿಸಿಯಷ್ಟೇ ಪವಿತ್ರ, ತುಳಿಸಿಕಟ್ಟೆ ರೀತಿ ಗಾಂಜಾಕಟ್ಟೆ ಕಟ್ಟಿ ಪೂಜಿಸಬಹುದು ಅಂದ್ರಂತೆ ಮೈಮೇಲೆ ಪ್ರಜ್ಞೆ ಇಲ್ಲದ ಪ್ರಜ್ಞಾವಂತರು!’</p>.<p>‘ಕೊರೊನಾಗೆ ಗಾಂಜಾ ಕಷಾಯ ರಾಮಬಾಣ ಅಂತನೂ ಹೇಳಿಬಿಡುತ್ತಿದ್ದರೇನೋ, ಸದ್ಯ, ಸಿಸಿಬಿಯವರು ಹಿಡಿದು ಅಮಲು ಇಳಿಸುತ್ತಿದ್ದಾರೆ...’ ಎಂದು ಸಿಟ್ಟಿನಿಂದ ಶಂಕ್ರಿ ಟಿ.ವಿ. ಆಫ್ ಮಾಡಿ ಎದ್ದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>