<p>‘ಒಲಿಂಪಿಕ್ಸಿನಲ್ಲಿ ಸಿಂಧು ಇನ್ನೂ ಚೆನ್ನಾಗಿ ಬ್ಯಾಟು ಬೀಸಿದ್ದರೆ ಚಿನ್ನದ ಪದಕವೇ ಸಿಗ್ತಿತ್ತು, ನಮ್ಮ ಬಾಕ್ಸರುಗಳು ಎದುರಿನವರನ್ನು ಸರಿಯಾಗಿ ಚಚ್ಚಲಿಲ್ಲ, ಕರ್ಣಾರ್ಜುನರಂಥ ಬಿಲ್ವಿದ್ಯೆಗಾರರ ಮಹಾನ್ ಚರಿತ್ರೆಯ ನಾಡಿನ ನಮ್ಮವರ ಬಾಣ ಪದಕದ ಗುರಿ ತಲುಪಲಿಲ್ಲ’ ಎಂದೆಲ್ಲ ಬೆಕ್ಕಣ್ಣ ಗೊಣಗೊಣ ಎನ್ನುತ್ತಿತ್ತು.</p>.<p>‘ಅಲ್ಲಲೇ... ಸಿಎಂಪಿಕ್ಸ್ ದೊಡ್ಡದು ಅಂತಿದ್ದವನು ಅದ್ಯಾವಾಗ ಒಲಿಂಪಿಕ್ಸ್ ನೋಡಾಕೆ ಶುರು ಮಾಡಿದೆ’ ಎಂದೆ.</p>.<p>‘ಸಿಎಂಪಿಕ್ಸ್ದು ಒಂದು ಗ್ರ್ಯಾನ್ ಸ್ಲಾಮ್ ಮುಗೀತು... ಇನ್ನು ಟೆಸ್ಟ್ ಮ್ಯಾಚುಗಳು ಶುರುವಾಗ್ತವೆ. ಅದರ ಮಜಾ ತಗಳ್ಳಕ್ಕೆ ತುಸು ಕಾಯಬಕು’ ಎಂದಿತು.</p>.<p>ಮತ್ತ ಕೊನೇದಿನ ನಿಮ್ಮ ಯೆಡ್ಯೂರಜ್ಜಾರು ಕಣ್ಣೀರಧಾರೆ ಹರಿಸಿದ್ದು ಗ್ರ್ಯಾನ್ ಸ್ಲಾಮ್ನಾಗೆ ಸೋತಿದ್ದಕ್ಕೇನು’ ಎಂದು ಕಿಚಾಯಿಸಿದೆ.</p>.<p>‘ಅವರೆಲ್ಲಿ ಸೋತಾರ...? ಪಂದ್ಯ ಬಿಟ್ಟುಕೊಟ್ಟಾರ! ಇಡೀ ಪ್ರಪಂಚದಾಗೆ ಎಲ್ಲ ಶೋಕಕ್ಕಿಂತ ಮಿಗಿಲಾದದ್ದು ಕುರ್ಚಿತ್ಯಾಗ ಶೋಕ ತಿಳಕೋ’ ಎಂದು ನೊಂದು ನುಡಿಯಿತು.</p>.<p>‘ಹ್ಞೂಂ ಮತ್ತ. ನೋಡೀಯಿಲ್ಲೋ ನಿಮ್ಮ ಕುಮಾರಣ್ಣನೂ ದೋಸ್ತಿ ಸರ್ಕಾರದಾಗೆ ನಾ ಬರೀ ಗುಮಾಸ್ತನಾಗಿದ್ದೆ ಅಂತ ನಿನ್ನೆ ಕಣ್ಣಿಗೆ ಕರ್ಚೀಪು ಒತ್ತಿಕೆಂಡು ವದ್ದಾಡಿ ಹೇಳಾಕಹತ್ತಿದ್ದರು’ ಎಂದೆ.</p>.<p>‘ಸಿಎಂ ಗುಮಾಸ್ತರಾದರು ಅಂತ್ಹೇಳಿ ಗುಮಾಸ್ತರು ಸಿಎಂ ಆಗಾಕೆ ಆಗಂಗಿಲ್ಲ...’ ಬೆಕ್ಕಣ್ಣ ಹೊಸ ಗಾದೆ ಹೊಸೆಯಿತು.</p>.<p>‘ಮತ್ತ ಗ್ರ್ಯಾನ್ ಸ್ಲಾಮ್ನಾಗೆ ಗೆದ್ದವರು ಯಾರು? ಮಠಾಧಿಪತಿಗಳಾ ಅಥವಾ ನಮ್ಮ ಹೊಸ ಸಿಎಮ್ಮಾ?</p>.<p>‘ಎಲ್ಲದೀ ನೀ... ಗೆದ್ದಿದ್ದು ಕಮಲಕ್ಕನ ಹೈಕಮಾಂಡು. ಉಳಿದವರಿಗೆ ಬೆಳ್ಳಿ, ಕಂಚು ಸಿಕ್ಕರೆ ಅಷ್ಟೇ ಪುಣ್ಯ’.</p>.<p>‘ಮತ್ತ ಅಜ್ಜಾರೂ ಸೋತಿಲ್ಲ ಅಂತಿ, ಹಂಗಾರೆ ಸೋತವರು ಯಾರು?’</p>.<p>‘ಸೋತವರು ನೀವು! ಪಂದ್ಯದಾಗೆಕ್ವಾಲಿಫೈ ಹಂತದೊಳಗೇ ನೀವು ಶ್ರೀಸಾಮಾನ್ಯರು ಮತ್ತು ನಿಮ್ಮ ಪ್ರಜಾಪ್ರಭುತ್ವ ಮುಗ್ಗರಿಸಿ<br />ಬಿದ್ದದ. ನಿಮಗೆ ಗೊತ್ತೇ ಆಗದ ಹಂಗೆ ನಾಮ ಬಿದ್ದಿರತೈತಿ, ತಿಳಕೋರಿ’ ಎನ್ನುತ್ತ ಬೆಕ್ಕಣ್ಣ ಪಕಪಕನೆ ನಕ್ಕಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಒಲಿಂಪಿಕ್ಸಿನಲ್ಲಿ ಸಿಂಧು ಇನ್ನೂ ಚೆನ್ನಾಗಿ ಬ್ಯಾಟು ಬೀಸಿದ್ದರೆ ಚಿನ್ನದ ಪದಕವೇ ಸಿಗ್ತಿತ್ತು, ನಮ್ಮ ಬಾಕ್ಸರುಗಳು ಎದುರಿನವರನ್ನು ಸರಿಯಾಗಿ ಚಚ್ಚಲಿಲ್ಲ, ಕರ್ಣಾರ್ಜುನರಂಥ ಬಿಲ್ವಿದ್ಯೆಗಾರರ ಮಹಾನ್ ಚರಿತ್ರೆಯ ನಾಡಿನ ನಮ್ಮವರ ಬಾಣ ಪದಕದ ಗುರಿ ತಲುಪಲಿಲ್ಲ’ ಎಂದೆಲ್ಲ ಬೆಕ್ಕಣ್ಣ ಗೊಣಗೊಣ ಎನ್ನುತ್ತಿತ್ತು.</p>.<p>‘ಅಲ್ಲಲೇ... ಸಿಎಂಪಿಕ್ಸ್ ದೊಡ್ಡದು ಅಂತಿದ್ದವನು ಅದ್ಯಾವಾಗ ಒಲಿಂಪಿಕ್ಸ್ ನೋಡಾಕೆ ಶುರು ಮಾಡಿದೆ’ ಎಂದೆ.</p>.<p>‘ಸಿಎಂಪಿಕ್ಸ್ದು ಒಂದು ಗ್ರ್ಯಾನ್ ಸ್ಲಾಮ್ ಮುಗೀತು... ಇನ್ನು ಟೆಸ್ಟ್ ಮ್ಯಾಚುಗಳು ಶುರುವಾಗ್ತವೆ. ಅದರ ಮಜಾ ತಗಳ್ಳಕ್ಕೆ ತುಸು ಕಾಯಬಕು’ ಎಂದಿತು.</p>.<p>ಮತ್ತ ಕೊನೇದಿನ ನಿಮ್ಮ ಯೆಡ್ಯೂರಜ್ಜಾರು ಕಣ್ಣೀರಧಾರೆ ಹರಿಸಿದ್ದು ಗ್ರ್ಯಾನ್ ಸ್ಲಾಮ್ನಾಗೆ ಸೋತಿದ್ದಕ್ಕೇನು’ ಎಂದು ಕಿಚಾಯಿಸಿದೆ.</p>.<p>‘ಅವರೆಲ್ಲಿ ಸೋತಾರ...? ಪಂದ್ಯ ಬಿಟ್ಟುಕೊಟ್ಟಾರ! ಇಡೀ ಪ್ರಪಂಚದಾಗೆ ಎಲ್ಲ ಶೋಕಕ್ಕಿಂತ ಮಿಗಿಲಾದದ್ದು ಕುರ್ಚಿತ್ಯಾಗ ಶೋಕ ತಿಳಕೋ’ ಎಂದು ನೊಂದು ನುಡಿಯಿತು.</p>.<p>‘ಹ್ಞೂಂ ಮತ್ತ. ನೋಡೀಯಿಲ್ಲೋ ನಿಮ್ಮ ಕುಮಾರಣ್ಣನೂ ದೋಸ್ತಿ ಸರ್ಕಾರದಾಗೆ ನಾ ಬರೀ ಗುಮಾಸ್ತನಾಗಿದ್ದೆ ಅಂತ ನಿನ್ನೆ ಕಣ್ಣಿಗೆ ಕರ್ಚೀಪು ಒತ್ತಿಕೆಂಡು ವದ್ದಾಡಿ ಹೇಳಾಕಹತ್ತಿದ್ದರು’ ಎಂದೆ.</p>.<p>‘ಸಿಎಂ ಗುಮಾಸ್ತರಾದರು ಅಂತ್ಹೇಳಿ ಗುಮಾಸ್ತರು ಸಿಎಂ ಆಗಾಕೆ ಆಗಂಗಿಲ್ಲ...’ ಬೆಕ್ಕಣ್ಣ ಹೊಸ ಗಾದೆ ಹೊಸೆಯಿತು.</p>.<p>‘ಮತ್ತ ಗ್ರ್ಯಾನ್ ಸ್ಲಾಮ್ನಾಗೆ ಗೆದ್ದವರು ಯಾರು? ಮಠಾಧಿಪತಿಗಳಾ ಅಥವಾ ನಮ್ಮ ಹೊಸ ಸಿಎಮ್ಮಾ?</p>.<p>‘ಎಲ್ಲದೀ ನೀ... ಗೆದ್ದಿದ್ದು ಕಮಲಕ್ಕನ ಹೈಕಮಾಂಡು. ಉಳಿದವರಿಗೆ ಬೆಳ್ಳಿ, ಕಂಚು ಸಿಕ್ಕರೆ ಅಷ್ಟೇ ಪುಣ್ಯ’.</p>.<p>‘ಮತ್ತ ಅಜ್ಜಾರೂ ಸೋತಿಲ್ಲ ಅಂತಿ, ಹಂಗಾರೆ ಸೋತವರು ಯಾರು?’</p>.<p>‘ಸೋತವರು ನೀವು! ಪಂದ್ಯದಾಗೆಕ್ವಾಲಿಫೈ ಹಂತದೊಳಗೇ ನೀವು ಶ್ರೀಸಾಮಾನ್ಯರು ಮತ್ತು ನಿಮ್ಮ ಪ್ರಜಾಪ್ರಭುತ್ವ ಮುಗ್ಗರಿಸಿ<br />ಬಿದ್ದದ. ನಿಮಗೆ ಗೊತ್ತೇ ಆಗದ ಹಂಗೆ ನಾಮ ಬಿದ್ದಿರತೈತಿ, ತಿಳಕೋರಿ’ ಎನ್ನುತ್ತ ಬೆಕ್ಕಣ್ಣ ಪಕಪಕನೆ ನಕ್ಕಿತು!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>