‘ಒಲಿಂಪಿಕ್ಸಿನಲ್ಲಿ ಸಿಂಧು ಇನ್ನೂ ಚೆನ್ನಾಗಿ ಬ್ಯಾಟು ಬೀಸಿದ್ದರೆ ಚಿನ್ನದ ಪದಕವೇ ಸಿಗ್ತಿತ್ತು, ನಮ್ಮ ಬಾಕ್ಸರುಗಳು ಎದುರಿನವರನ್ನು ಸರಿಯಾಗಿ ಚಚ್ಚಲಿಲ್ಲ, ಕರ್ಣಾರ್ಜುನರಂಥ ಬಿಲ್ವಿದ್ಯೆಗಾರರ ಮಹಾನ್ ಚರಿತ್ರೆಯ ನಾಡಿನ ನಮ್ಮವರ ಬಾಣ ಪದಕದ ಗುರಿ ತಲುಪಲಿಲ್ಲ’ ಎಂದೆಲ್ಲ ಬೆಕ್ಕಣ್ಣ ಗೊಣಗೊಣ ಎನ್ನುತ್ತಿತ್ತು.
‘ಸೋತವರು ನೀವು! ಪಂದ್ಯದಾಗೆಕ್ವಾಲಿಫೈ ಹಂತದೊಳಗೇ ನೀವು ಶ್ರೀಸಾಮಾನ್ಯರು ಮತ್ತು ನಿಮ್ಮ ಪ್ರಜಾಪ್ರಭುತ್ವ ಮುಗ್ಗರಿಸಿ ಬಿದ್ದದ. ನಿಮಗೆ ಗೊತ್ತೇ ಆಗದ ಹಂಗೆ ನಾಮ ಬಿದ್ದಿರತೈತಿ, ತಿಳಕೋರಿ’ ಎನ್ನುತ್ತ ಬೆಕ್ಕಣ್ಣ ಪಕಪಕನೆ ನಕ್ಕಿತು!