<p>‘ಗುರೂ... ಎಲ್ಲ ದೇವರಿಗೂ ಒಂದೊಂದು ಆಯುಧ ಅದಾವಂತೆ. ನಮ್ಮ ರಾಜಕಾರಣಿಗಳ ಆಯುಧ ಯಾವುದು’ ತೆಪರೇಸಿ ಪ್ರಶ್ನೆಗೆ ನಕ್ಕ ಗುಡ್ಡೆ ‘ಮಂಗ್ಯಾ ಅದೂ ಗೊತ್ತಿಲ್ಲೇನ್ಲೆ, ‘ನಾಲಿಗೆ’ ಅಂದ.</p>.<p>‘ಬರೀ ನಾಲಿಗೆ ಅಲ್ಲ, ಎಲುಬಿಲ್ಲದ ನಾಲಿಗೆ ಅನ್ನು’ ದುಬ್ಬೀರ ತಿದ್ದಿದ.</p>.<p>‘ಯಾಕೆ ಕೇಳಿದೆ ಅಂದ್ರೆ ದಸರಾ ಬಂತಲ್ಲ, ಎಲ್ರೂ ತಮ್ಮ ತಮ್ಮ ಆಯುಧ ತಿಕ್ಕಿ ತೊಳ್ಕಳೋ ತರ ಈ ರಾಜಕಾರಣಿಗಳು ಗಬ್ಬು ನಾರೋ ತಮ್ಮ ನಾಲಿಗೆಗಳನ್ನ ಯಾಕೆ ತಿಕ್ಕಿ ತೊಳ್ಕಾಬಾರ್ದು ಅಂತ’ ತೆಪರೇಸಿಗೆ ಕೋಪ.</p>.<p>‘ಕರೆಕ್ಟ್ ಕಣಲೆ ತೆಪರ, ಈ ರಾಜಕಾರಣಿಗಳು ಏನ್ ಮಾತಾಡ್ತರಲೆ, ಹೆಣ್ಮಕ್ಕಳನ್ನ ‘ಐಟಂ’ ಅಂತಾರೆ. ತಮಗೆ ಆಗದೋರ್ನ ‘ಮೀರ್ ಸಾದಿಕ್’ ಅಂತಾರೆ. ಅಷ್ಟೆ ಯಾಕಪ ಮೊನ್ನೆ ನಮ್ಮ ‘ನಮೋ’ ಸಾಹೇಬ್ರನ್ನ ಯಾರೋ ತಿರುಪತಿ ತಿಮ್ಮಪ್ಪಂಗೆ ಹೋಲಿಸಿದ್ರು. ಯಾಕೆ?’ ದುಬ್ಬೀರ ಕೇಳಿದ.</p>.<p>‘ಯಾಕೇಂದ್ರೆ ತಿಮ್ಮಪ್ಪನ ಹುಂಡಿಗೆ ಬಿದ್ದ ಹಣ, ನಮೋ ಹುಂಡಿಗೆ ಬಿದ್ದ ಜಿಎಸ್ಟಿ ರೊಕ್ಕ ಎರಡೂ ವಾಪಸ್ ಬರಲ್ಲಲ್ಲ ಅದ್ಕೆ...’ ಗುಡ್ಡೆ ನಕ್ಕ.</p>.<p>‘ಅದಿರ್ಲಿ, ರಾಜಾಹುಲೀನ ಮನೆಗೆ, ಹುಲಿಯಾ ಸಾಹೇಬ್ರನ್ನ ಕಾಡಿಗೆ ಕಳಿಸ್ತೀವಿ ಅಂತ ಮೊನ್ನೆ ಯಾರೋ ಎಗರಾಡ್ತಿದ್ರು?’ ಕೊಟ್ರೇಶಿ ವಿಷಯ ಬದಲಾಯಿಸಲು ನೋಡಿದ.</p>.<p>‘ಯಾರು ಯಾರನ್ನ ಎಲ್ಲಿಗಾದ್ರೂ ಕಳಿಸ್ಲಿ ಬಿಡಲೆ, ಎಲ್ಲ ಸೇರಿ ಮತದಾರರನ್ನ ವನವಾಸಕ್ಕೆ ಕಳ್ಸೋದಂತೂ ಗ್ಯಾರಂಟಿ’ ಎಂದ ದುಬ್ಬೀರ, ‘ಲೇ ತೆಪರ, ಆಯುಧ ಪೂಜೆಗೆ ಎಲ್ಲ ರೆಡಿ ಮಾಡ್ಕಂಡೇನೋ?’ ಎಂದ.</p>.<p>‘ಅವನು ಪೂಜೆ ಮಾಡಲ್ಲ ಕಣಲೆ, ಮಾಡಿಸ್ಕಂತಾನೆ...’ ಗುಡ್ಡೆ ಕಿಸಕ್ಕೆಂದ.</p>.<p>‘ಲೇಯ್, ಏನೇನೋ ಪಿಂಕ್ಲಿ ಮಾತಾಡ್ಬ್ಯಾಡ, ನಮ್ಮನೇಲಿ ದಸರಾ-ಆಯುಧ ಪೂಜೆ ಎಲ್ಲ ಮಾಡಲ್ಲ...’ ತೆಪರೇಸಿಗೆ ಸಿಟ್ಟು ಬಂತು.</p>.<p>‘ನಾನೂ ಅದೇ ಹೇಳಿದ್ದು, ನಿನ್ ಹೆಂಡ್ತಿ ನಿಂಗೆ ದಿನಾ ಲಟ್ಟಣಿಗೆ ಪೂಜೆ ಮಾಡೋವಾಗ ಈ ಒಂದು ದಿನದ ಆಯುಧಪೂಜೆ ಯಾಕೆ ಬೇಕು?’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಗುರೂ... ಎಲ್ಲ ದೇವರಿಗೂ ಒಂದೊಂದು ಆಯುಧ ಅದಾವಂತೆ. ನಮ್ಮ ರಾಜಕಾರಣಿಗಳ ಆಯುಧ ಯಾವುದು’ ತೆಪರೇಸಿ ಪ್ರಶ್ನೆಗೆ ನಕ್ಕ ಗುಡ್ಡೆ ‘ಮಂಗ್ಯಾ ಅದೂ ಗೊತ್ತಿಲ್ಲೇನ್ಲೆ, ‘ನಾಲಿಗೆ’ ಅಂದ.</p>.<p>‘ಬರೀ ನಾಲಿಗೆ ಅಲ್ಲ, ಎಲುಬಿಲ್ಲದ ನಾಲಿಗೆ ಅನ್ನು’ ದುಬ್ಬೀರ ತಿದ್ದಿದ.</p>.<p>‘ಯಾಕೆ ಕೇಳಿದೆ ಅಂದ್ರೆ ದಸರಾ ಬಂತಲ್ಲ, ಎಲ್ರೂ ತಮ್ಮ ತಮ್ಮ ಆಯುಧ ತಿಕ್ಕಿ ತೊಳ್ಕಳೋ ತರ ಈ ರಾಜಕಾರಣಿಗಳು ಗಬ್ಬು ನಾರೋ ತಮ್ಮ ನಾಲಿಗೆಗಳನ್ನ ಯಾಕೆ ತಿಕ್ಕಿ ತೊಳ್ಕಾಬಾರ್ದು ಅಂತ’ ತೆಪರೇಸಿಗೆ ಕೋಪ.</p>.<p>‘ಕರೆಕ್ಟ್ ಕಣಲೆ ತೆಪರ, ಈ ರಾಜಕಾರಣಿಗಳು ಏನ್ ಮಾತಾಡ್ತರಲೆ, ಹೆಣ್ಮಕ್ಕಳನ್ನ ‘ಐಟಂ’ ಅಂತಾರೆ. ತಮಗೆ ಆಗದೋರ್ನ ‘ಮೀರ್ ಸಾದಿಕ್’ ಅಂತಾರೆ. ಅಷ್ಟೆ ಯಾಕಪ ಮೊನ್ನೆ ನಮ್ಮ ‘ನಮೋ’ ಸಾಹೇಬ್ರನ್ನ ಯಾರೋ ತಿರುಪತಿ ತಿಮ್ಮಪ್ಪಂಗೆ ಹೋಲಿಸಿದ್ರು. ಯಾಕೆ?’ ದುಬ್ಬೀರ ಕೇಳಿದ.</p>.<p>‘ಯಾಕೇಂದ್ರೆ ತಿಮ್ಮಪ್ಪನ ಹುಂಡಿಗೆ ಬಿದ್ದ ಹಣ, ನಮೋ ಹುಂಡಿಗೆ ಬಿದ್ದ ಜಿಎಸ್ಟಿ ರೊಕ್ಕ ಎರಡೂ ವಾಪಸ್ ಬರಲ್ಲಲ್ಲ ಅದ್ಕೆ...’ ಗುಡ್ಡೆ ನಕ್ಕ.</p>.<p>‘ಅದಿರ್ಲಿ, ರಾಜಾಹುಲೀನ ಮನೆಗೆ, ಹುಲಿಯಾ ಸಾಹೇಬ್ರನ್ನ ಕಾಡಿಗೆ ಕಳಿಸ್ತೀವಿ ಅಂತ ಮೊನ್ನೆ ಯಾರೋ ಎಗರಾಡ್ತಿದ್ರು?’ ಕೊಟ್ರೇಶಿ ವಿಷಯ ಬದಲಾಯಿಸಲು ನೋಡಿದ.</p>.<p>‘ಯಾರು ಯಾರನ್ನ ಎಲ್ಲಿಗಾದ್ರೂ ಕಳಿಸ್ಲಿ ಬಿಡಲೆ, ಎಲ್ಲ ಸೇರಿ ಮತದಾರರನ್ನ ವನವಾಸಕ್ಕೆ ಕಳ್ಸೋದಂತೂ ಗ್ಯಾರಂಟಿ’ ಎಂದ ದುಬ್ಬೀರ, ‘ಲೇ ತೆಪರ, ಆಯುಧ ಪೂಜೆಗೆ ಎಲ್ಲ ರೆಡಿ ಮಾಡ್ಕಂಡೇನೋ?’ ಎಂದ.</p>.<p>‘ಅವನು ಪೂಜೆ ಮಾಡಲ್ಲ ಕಣಲೆ, ಮಾಡಿಸ್ಕಂತಾನೆ...’ ಗುಡ್ಡೆ ಕಿಸಕ್ಕೆಂದ.</p>.<p>‘ಲೇಯ್, ಏನೇನೋ ಪಿಂಕ್ಲಿ ಮಾತಾಡ್ಬ್ಯಾಡ, ನಮ್ಮನೇಲಿ ದಸರಾ-ಆಯುಧ ಪೂಜೆ ಎಲ್ಲ ಮಾಡಲ್ಲ...’ ತೆಪರೇಸಿಗೆ ಸಿಟ್ಟು ಬಂತು.</p>.<p>‘ನಾನೂ ಅದೇ ಹೇಳಿದ್ದು, ನಿನ್ ಹೆಂಡ್ತಿ ನಿಂಗೆ ದಿನಾ ಲಟ್ಟಣಿಗೆ ಪೂಜೆ ಮಾಡೋವಾಗ ಈ ಒಂದು ದಿನದ ಆಯುಧಪೂಜೆ ಯಾಕೆ ಬೇಕು?’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>