<blockquote>‘ಎಐ ಇಂಪ್ಯಾಕ್ಟ್ ಶೃಂಗಸಭೆ’ ಕೃತಕ ಬುದ್ಧಿಮತ್ತೆ ಕ್ಷೇತ್ರದ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಿದೆ ಹಾಗೂ ಆ ಕ್ಷೇತ್ರದಲ್ಲಿನ ಚರ್ಚೆಗಳಲ್ಲಿ ಭಾರತೀಯರಿಗೆ ವೇದಿಕೆ ದೊರಕಿಸುವ ಪ್ರಯತ್ನವಾಗಿದೆ.</blockquote>.<p>ನವದೆಹಲಿಯಲ್ಲಿ ಕಳೆದ ವಾರ ಕೊನೆಗೊಂಡ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ಯು ದೇಶದಲ್ಲಿನ ‘ಎಐ’ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹದ್ದಾಗಿದೆ. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ‘ಜಾಗತಿಕ ದಕ್ಷಿಣ’ ಭಾಗದಲ್ಲಿ ನಡೆದ ಮೊದಲ ಪ್ರಮುಖ ಸಮಾವೇಶ ಇದಾಗಿದೆ. ಕೃತಕ ಬುದ್ಧಿಮತ್ತೆಯ ಪ್ರತಿಷ್ಠಿತ ವೇದಿಕೆಗಳಲ್ಲಿ ಜಾಗತಿಕ ದಕ್ಷಿಣ ದೇಶಗಳು ಇಲ್ಲಿಯವರೆಗೆ ಯಾವುದೇ ಮಹತ್ವದ ಉಪಸ್ಥಿತಿಯನ್ನು ಹೊಂದಿಲ್ಲ ಮತ್ತು ‘ಎಐ’ ಆಡಳಿತಕ್ಕೆ ಸಂಬಂಧಿಸಿದ ಸಂವಾದಗಳಲ್ಲಿ ಭಾಗಿಯಾಗಿಲ್ಲ. ಪ್ರಸ್ತುತ ವಿಶ್ವವ್ಯಾಪಿಯಾಗಿರುವ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶವನ್ನು ದೆಹಲಿಯ ಸಮಾವೇಶ ದಕ್ಷಿಣದ ದೇಶಗಳಿಗೆ, ವಿಶೇಷವಾಗಿ ಭಾರತಕ್ಕೆ ಕಲ್ಪಿಸಿತು. ಈ ಶೃಂಗಸಭೆಯಲ್ಲಿ ಅಳವಡಿಸಿಕೊಂಡ ‘ದೆಹಲಿ ಘೋಷಣೆ’ಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಪ್ರಜಾಪ್ರಭುತ್ವದ ಸ್ಪರ್ಶ ನೀಡುವ ಮೂಲಕ ವಿಶ್ವದಲ್ಲಿ ಬದಲಾವಣೆ ತರುವುದಕ್ಕೆ ಕರೆ ನೀಡಿದೆ. ‘ಎಐ’ ಬಳಕೆಯ ಅನುಕೂಲವನ್ನು ಜನರಿಗೆ ಸಾಧ್ಯವಾದಷ್ಟೂ ತಲಪಿಸುವ, ವಿಶ್ವದ ದಕ್ಷಿಣ ಭಾಗದ ದೇಶಗಳಲ್ಲಿ ‘ಎಐ’ ಅನ್ನು ಪ್ರಸ್ತುತವಾಗಿಸುವ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಆಗಿಸುವ ಕುರಿತು ‘ದೆಹಲಿ ಘೋಷಣೆ’ ಒಳಗೊಂಡಿರುವ ವಿಷಯಗಳು ಭಾರತ ಗೊತ್ತುಪಡಿಸಿಕೊಂಡ ಆದ್ಯತೆಗಳೊಂದಿಗೆ ಹೊಂದಾಣಿಕೆ ಆಗುವಂತಿವೆ. ಈ ಘೋಷಣೆಗೆ ಅಮೆರಿಕ, ಚೀನಾ, ಫ್ರಾನ್ಸ್ ಸೇರಿದಂತೆ ಕೃತಕ ಬುದ್ಧಿಮತ್ತೆ ಕ್ಷೇತ್ರದ ಮುಂಚೂಣಿ ದೇಶಗಳು ಸಹಿ ಹಾಕಿವೆ.</p>.<p>ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಓಪನ್ ಕೋಡ್ ಮತ್ತು ಹಂಚಿಕೆಯ ಅಭಿವೃದ್ಧಿಯನ್ನು ಆಧರಿಸಿದ ‘ಎಐ’ ಕುರಿತ ಪರ್ಯಾಯ ದೃಷ್ಟಿಕೋನವನ್ನು ಪ್ರತಿಪಾದಿಸಿದರು. ಅಂತಿಮವಾಗಿ ‘ಎಐ’ ತಂತ್ರಜ್ಞಾನ ವಿಶ್ವದ ಸಾಮಾನ್ಯ ಒಳಿತನ್ನು ಸಾಧಿಸುವಂತಿರಬೇಕು. ದೇಶಗಳು ಮತ್ತು ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಇರುವ ಸಂದರ್ಭದಲ್ಲಿ ಈ ‘ಸಾಮಾನ್ಯ ಒಳಿತಿ’ನ ಆಶಯ ಮಹತ್ವದ್ದಾಗಿದೆ. ಚಾಟ್ಜಿಪಿಟಿ ಸಿಇಒ ಸ್ಯಾಮ್ ಆಲ್ಟ್ಮನ್ ಮತ್ತು ಆ್ಯಂಥ್ರೊಪಿಕ್ ಸಿಇಒ ಡೇರಿಯೊ ಅಮೊಡೈ ಅವರು ಶೃಂಗಸಭೆಯಲ್ಲಿ ಸಾರ್ವಜನಿಕವಾಗಿ ಪರಸ್ಪರ ಕೈಗಳನ್ನು ಹಿಡಿದುಕೊಂಡು ಮೇಲೆತ್ತಲು ನಿರಾಕರಿಸಿದ್ದು, ಆ ಕ್ಷೇತ್ರದಲ್ಲಿ ಇರುವ ಸ್ಪರ್ಧೆಯ ತೀವ್ರತೆಯನ್ನು ಸಂಕೇತಿಸುವಂತಿದೆ. ವಿಶ್ವದ ಗಮನಸೆಳೆದಿದ್ದರೂ, ‘ಎಐ’ ತಂತ್ರಜ್ಞಾನ ಇನ್ನೂ ಶೈಶವಾವಸ್ಥೆಯಲ್ಲಿದೆ ಹಾಗೂ ಅದರ ಸಾಧ್ಯತೆಗಳು ಅಸ್ಪಷ್ಟವಾಗಿಯೇ ಇವೆ. ಕೈಗಾರಿಕೆ, ವೈದ್ಯಕೀಯ, ಕೃಷಿ, ಕಾನೂನು, ಸಮಾಜ ವಿಜ್ಞಾನ ಸೇರಿದಂತೆ ಖಾಸಗಿ ಹಾಗೂ ಸಾರ್ವಜನಿಕ ಜೀವನದ ಬಹುತೇಕ ಕ್ಷೇತ್ರಗಳನ್ನು ಈ ಹಿಂದಿನ ಯಾವ ತಂತ್ರಜ್ಞಾನವೂ ಪ್ರಭಾವಿಸದಷ್ಟು ಗಾಢವಾಗಿ ‘ಎಐ’ ಪ್ರಭಾವಿಸಲಿದೆ ಎಂದು ಭಾವಿಸಲಾಗಿದೆ. ಅಮೆರಿಕ, ಚೀನಾದಂತಹ ಕೆಲವು ದೇಶಗಳು ಮತ್ತು ಸಂಸ್ಥೆಗಳು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ನರೇಂದ್ರ ಮೋದಿ ಅವರು ನೀಡಿರುವ ‘ಮಾನವ್’ (ಎಂಎಎನ್ಎವಿ) ಪರಿಕಲ್ಪನೆ ಪ್ರತಿನಿಧಿಸುವ ನೈತಿಕತೆ, ಹೊಣೆಗಾರಿಕೆ, ರಾಷ್ಟ್ರೀಯ ಸಾರ್ವಭೌಮತೆ, ಲಭ್ಯತೆ ಹಾಗೂ ವಿಶ್ವಾಸಾರ್ಹತೆ ಎನ್ನುವ ಐದು ಆಶಯಗಳನ್ನು ಈ ಕ್ಷೇತ್ರದ ಭಾಗವಾಗಿಸುವುದು ಸುಲಭವಲ್ಲವಾದರೂ, ಸಾಮಾನ್ಯ ಒಳಿತಿಗಾಗಿ ಮೂಲಭೂತವಾದ ಮಾರ್ಗಸೂಚಿಗಳನ್ನು ಹೊಂದುವ ಅಗತ್ಯವನ್ನು ಗಟ್ಟಿಯಾಗಿ ಹೇಳಬೇಕಾಗಿದೆ.</p>.<p>‘ಎಐ’ ಕ್ಷೇತ್ರದ ಪ್ರಮುಖ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಿದ್ದು ಶೃಂಗಸಭೆಯ ವಿಶೇಷಗಳಲ್ಲೊಂದಾಗಿದೆ. ಐದುನೂರಕ್ಕೂ ಹೆಚ್ಚು ಖಾಸಗಿ ಮಾತುಕತೆಗಳು ನಡೆದಿದ್ದು, 250 ಶತಕೋಟಿ ಡಾಲರ್ಗೂ ಹೆಚ್ಚು ಬಂಡವಾಳ ಹೂಡಿಕೆಯ ಬದ್ಧತೆ ಹಾಗೂ 20 ಶತಕೋಟಿ ಡಾಲರ್ ಅಂದಾಜಿನ ಸಂಶೋಧನೆಗಳ ಬದ್ಧತೆಗೆ ಸಮಾವೇಶ ಸಾಕ್ಷಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಗೂಗಲ್ ಮತ್ತು ಮೈಕ್ರೊಸಾಫ್ಟ್ನಂತಹ ಪ್ರಮುಖ ಸಂಸ್ಥೆಗಳೊಂದಿಗಿನ ಭಾರತದ ಪಾಲುದಾರಿಕೆಯ ಮಾತುಕತೆಗಳು ತಂತ್ರಜ್ಞಾನ ಮತ್ತು ಬಂಡವಾಳ, ಎರಡರ ಬರುವಿಕೆಗೂ ಕಾರಣವಾಗುವಂತಿವೆ. ಭಾರತವು ತನ್ನ ಅಗತ್ಯ ಮತ್ತು ಸಂದರ್ಭಗಳಿಗೆ ಸಂಬಂಧಿಸಿದಂತೆ ನಾವೀನ್ಯತೆ ಮತ್ತು ಪ್ರಯೋಗಗಳ ಮೂಲಕ ಸಂಶೋಧನೆಯನ್ನು ರೂಪಿಸಿಕೊಳ್ಳಬೇಕಾಗಿದೆ. ‘ಎಐ’ಗೆ ಸಂಬಂಧಿಸಿದ ಆಸಕ್ತಿ ಮತ್ತು ಚಟುವಟಿಕೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಈ ಕ್ಷೇತ್ರದಲ್ಲಿ ಹಲವಾರು ನವೋದ್ಯಮಗಳು ಸಕ್ರಿಯವಾಗಿವೆ. ಈ ಎಲ್ಲ ಚಟುವಟಿಕೆಗಳಿಗೆ ಮತ್ತು ಆಕಾಂಕ್ಷೆಗಳಿಗೆ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ ಉತ್ತೇಜನ ನೀಡಿದೆ.</p>
<blockquote>‘ಎಐ ಇಂಪ್ಯಾಕ್ಟ್ ಶೃಂಗಸಭೆ’ ಕೃತಕ ಬುದ್ಧಿಮತ್ತೆ ಕ್ಷೇತ್ರದ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಿದೆ ಹಾಗೂ ಆ ಕ್ಷೇತ್ರದಲ್ಲಿನ ಚರ್ಚೆಗಳಲ್ಲಿ ಭಾರತೀಯರಿಗೆ ವೇದಿಕೆ ದೊರಕಿಸುವ ಪ್ರಯತ್ನವಾಗಿದೆ.</blockquote>.<p>ನವದೆಹಲಿಯಲ್ಲಿ ಕಳೆದ ವಾರ ಕೊನೆಗೊಂಡ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ಯು ದೇಶದಲ್ಲಿನ ‘ಎಐ’ ಸಂಬಂಧಿತ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹದ್ದಾಗಿದೆ. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ‘ಜಾಗತಿಕ ದಕ್ಷಿಣ’ ಭಾಗದಲ್ಲಿ ನಡೆದ ಮೊದಲ ಪ್ರಮುಖ ಸಮಾವೇಶ ಇದಾಗಿದೆ. ಕೃತಕ ಬುದ್ಧಿಮತ್ತೆಯ ಪ್ರತಿಷ್ಠಿತ ವೇದಿಕೆಗಳಲ್ಲಿ ಜಾಗತಿಕ ದಕ್ಷಿಣ ದೇಶಗಳು ಇಲ್ಲಿಯವರೆಗೆ ಯಾವುದೇ ಮಹತ್ವದ ಉಪಸ್ಥಿತಿಯನ್ನು ಹೊಂದಿಲ್ಲ ಮತ್ತು ‘ಎಐ’ ಆಡಳಿತಕ್ಕೆ ಸಂಬಂಧಿಸಿದ ಸಂವಾದಗಳಲ್ಲಿ ಭಾಗಿಯಾಗಿಲ್ಲ. ಪ್ರಸ್ತುತ ವಿಶ್ವವ್ಯಾಪಿಯಾಗಿರುವ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶವನ್ನು ದೆಹಲಿಯ ಸಮಾವೇಶ ದಕ್ಷಿಣದ ದೇಶಗಳಿಗೆ, ವಿಶೇಷವಾಗಿ ಭಾರತಕ್ಕೆ ಕಲ್ಪಿಸಿತು. ಈ ಶೃಂಗಸಭೆಯಲ್ಲಿ ಅಳವಡಿಸಿಕೊಂಡ ‘ದೆಹಲಿ ಘೋಷಣೆ’ಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಪ್ರಜಾಪ್ರಭುತ್ವದ ಸ್ಪರ್ಶ ನೀಡುವ ಮೂಲಕ ವಿಶ್ವದಲ್ಲಿ ಬದಲಾವಣೆ ತರುವುದಕ್ಕೆ ಕರೆ ನೀಡಿದೆ. ‘ಎಐ’ ಬಳಕೆಯ ಅನುಕೂಲವನ್ನು ಜನರಿಗೆ ಸಾಧ್ಯವಾದಷ್ಟೂ ತಲಪಿಸುವ, ವಿಶ್ವದ ದಕ್ಷಿಣ ಭಾಗದ ದೇಶಗಳಲ್ಲಿ ‘ಎಐ’ ಅನ್ನು ಪ್ರಸ್ತುತವಾಗಿಸುವ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಆಗಿಸುವ ಕುರಿತು ‘ದೆಹಲಿ ಘೋಷಣೆ’ ಒಳಗೊಂಡಿರುವ ವಿಷಯಗಳು ಭಾರತ ಗೊತ್ತುಪಡಿಸಿಕೊಂಡ ಆದ್ಯತೆಗಳೊಂದಿಗೆ ಹೊಂದಾಣಿಕೆ ಆಗುವಂತಿವೆ. ಈ ಘೋಷಣೆಗೆ ಅಮೆರಿಕ, ಚೀನಾ, ಫ್ರಾನ್ಸ್ ಸೇರಿದಂತೆ ಕೃತಕ ಬುದ್ಧಿಮತ್ತೆ ಕ್ಷೇತ್ರದ ಮುಂಚೂಣಿ ದೇಶಗಳು ಸಹಿ ಹಾಕಿವೆ.</p>.<p>ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಓಪನ್ ಕೋಡ್ ಮತ್ತು ಹಂಚಿಕೆಯ ಅಭಿವೃದ್ಧಿಯನ್ನು ಆಧರಿಸಿದ ‘ಎಐ’ ಕುರಿತ ಪರ್ಯಾಯ ದೃಷ್ಟಿಕೋನವನ್ನು ಪ್ರತಿಪಾದಿಸಿದರು. ಅಂತಿಮವಾಗಿ ‘ಎಐ’ ತಂತ್ರಜ್ಞಾನ ವಿಶ್ವದ ಸಾಮಾನ್ಯ ಒಳಿತನ್ನು ಸಾಧಿಸುವಂತಿರಬೇಕು. ದೇಶಗಳು ಮತ್ತು ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಇರುವ ಸಂದರ್ಭದಲ್ಲಿ ಈ ‘ಸಾಮಾನ್ಯ ಒಳಿತಿ’ನ ಆಶಯ ಮಹತ್ವದ್ದಾಗಿದೆ. ಚಾಟ್ಜಿಪಿಟಿ ಸಿಇಒ ಸ್ಯಾಮ್ ಆಲ್ಟ್ಮನ್ ಮತ್ತು ಆ್ಯಂಥ್ರೊಪಿಕ್ ಸಿಇಒ ಡೇರಿಯೊ ಅಮೊಡೈ ಅವರು ಶೃಂಗಸಭೆಯಲ್ಲಿ ಸಾರ್ವಜನಿಕವಾಗಿ ಪರಸ್ಪರ ಕೈಗಳನ್ನು ಹಿಡಿದುಕೊಂಡು ಮೇಲೆತ್ತಲು ನಿರಾಕರಿಸಿದ್ದು, ಆ ಕ್ಷೇತ್ರದಲ್ಲಿ ಇರುವ ಸ್ಪರ್ಧೆಯ ತೀವ್ರತೆಯನ್ನು ಸಂಕೇತಿಸುವಂತಿದೆ. ವಿಶ್ವದ ಗಮನಸೆಳೆದಿದ್ದರೂ, ‘ಎಐ’ ತಂತ್ರಜ್ಞಾನ ಇನ್ನೂ ಶೈಶವಾವಸ್ಥೆಯಲ್ಲಿದೆ ಹಾಗೂ ಅದರ ಸಾಧ್ಯತೆಗಳು ಅಸ್ಪಷ್ಟವಾಗಿಯೇ ಇವೆ. ಕೈಗಾರಿಕೆ, ವೈದ್ಯಕೀಯ, ಕೃಷಿ, ಕಾನೂನು, ಸಮಾಜ ವಿಜ್ಞಾನ ಸೇರಿದಂತೆ ಖಾಸಗಿ ಹಾಗೂ ಸಾರ್ವಜನಿಕ ಜೀವನದ ಬಹುತೇಕ ಕ್ಷೇತ್ರಗಳನ್ನು ಈ ಹಿಂದಿನ ಯಾವ ತಂತ್ರಜ್ಞಾನವೂ ಪ್ರಭಾವಿಸದಷ್ಟು ಗಾಢವಾಗಿ ‘ಎಐ’ ಪ್ರಭಾವಿಸಲಿದೆ ಎಂದು ಭಾವಿಸಲಾಗಿದೆ. ಅಮೆರಿಕ, ಚೀನಾದಂತಹ ಕೆಲವು ದೇಶಗಳು ಮತ್ತು ಸಂಸ್ಥೆಗಳು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ನರೇಂದ್ರ ಮೋದಿ ಅವರು ನೀಡಿರುವ ‘ಮಾನವ್’ (ಎಂಎಎನ್ಎವಿ) ಪರಿಕಲ್ಪನೆ ಪ್ರತಿನಿಧಿಸುವ ನೈತಿಕತೆ, ಹೊಣೆಗಾರಿಕೆ, ರಾಷ್ಟ್ರೀಯ ಸಾರ್ವಭೌಮತೆ, ಲಭ್ಯತೆ ಹಾಗೂ ವಿಶ್ವಾಸಾರ್ಹತೆ ಎನ್ನುವ ಐದು ಆಶಯಗಳನ್ನು ಈ ಕ್ಷೇತ್ರದ ಭಾಗವಾಗಿಸುವುದು ಸುಲಭವಲ್ಲವಾದರೂ, ಸಾಮಾನ್ಯ ಒಳಿತಿಗಾಗಿ ಮೂಲಭೂತವಾದ ಮಾರ್ಗಸೂಚಿಗಳನ್ನು ಹೊಂದುವ ಅಗತ್ಯವನ್ನು ಗಟ್ಟಿಯಾಗಿ ಹೇಳಬೇಕಾಗಿದೆ.</p>.<p>‘ಎಐ’ ಕ್ಷೇತ್ರದ ಪ್ರಮುಖ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಿದ್ದು ಶೃಂಗಸಭೆಯ ವಿಶೇಷಗಳಲ್ಲೊಂದಾಗಿದೆ. ಐದುನೂರಕ್ಕೂ ಹೆಚ್ಚು ಖಾಸಗಿ ಮಾತುಕತೆಗಳು ನಡೆದಿದ್ದು, 250 ಶತಕೋಟಿ ಡಾಲರ್ಗೂ ಹೆಚ್ಚು ಬಂಡವಾಳ ಹೂಡಿಕೆಯ ಬದ್ಧತೆ ಹಾಗೂ 20 ಶತಕೋಟಿ ಡಾಲರ್ ಅಂದಾಜಿನ ಸಂಶೋಧನೆಗಳ ಬದ್ಧತೆಗೆ ಸಮಾವೇಶ ಸಾಕ್ಷಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಗೂಗಲ್ ಮತ್ತು ಮೈಕ್ರೊಸಾಫ್ಟ್ನಂತಹ ಪ್ರಮುಖ ಸಂಸ್ಥೆಗಳೊಂದಿಗಿನ ಭಾರತದ ಪಾಲುದಾರಿಕೆಯ ಮಾತುಕತೆಗಳು ತಂತ್ರಜ್ಞಾನ ಮತ್ತು ಬಂಡವಾಳ, ಎರಡರ ಬರುವಿಕೆಗೂ ಕಾರಣವಾಗುವಂತಿವೆ. ಭಾರತವು ತನ್ನ ಅಗತ್ಯ ಮತ್ತು ಸಂದರ್ಭಗಳಿಗೆ ಸಂಬಂಧಿಸಿದಂತೆ ನಾವೀನ್ಯತೆ ಮತ್ತು ಪ್ರಯೋಗಗಳ ಮೂಲಕ ಸಂಶೋಧನೆಯನ್ನು ರೂಪಿಸಿಕೊಳ್ಳಬೇಕಾಗಿದೆ. ‘ಎಐ’ಗೆ ಸಂಬಂಧಿಸಿದ ಆಸಕ್ತಿ ಮತ್ತು ಚಟುವಟಿಕೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಈ ಕ್ಷೇತ್ರದಲ್ಲಿ ಹಲವಾರು ನವೋದ್ಯಮಗಳು ಸಕ್ರಿಯವಾಗಿವೆ. ಈ ಎಲ್ಲ ಚಟುವಟಿಕೆಗಳಿಗೆ ಮತ್ತು ಆಕಾಂಕ್ಷೆಗಳಿಗೆ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ ಉತ್ತೇಜನ ನೀಡಿದೆ.</p>