‘ಏಳು ವರ್ಷದ ಮಗಳ ಜತೆ ವಾಸವಿದ್ದ ಮಹಾಲಕ್ಷ್ಮಿ, ಟೀ ಮಾಡಲೆಂದು ಬೆಳಿಗ್ಗೆ ಅಡುಗೆ ಕೋಣೆಗೆ ಹೋಗಿದ್ದರು. ಸಿಲಿಂಡರ್ನಲ್ಲಿದ್ದ ಅನಿಲ ಖಾಲಿ ಆಗಿದ್ದರಿಂದ, ಅದನ್ನು ಬದಲಿಸಲು ಮುಂದಾಗಿದ್ದರು. ಹೊಸ ಸಿಲಿಂಡರ್ ಮುಚ್ಚಳ ತೆಗೆಯುತ್ತಿದ್ದಂತೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಕೆಲ ಕ್ಷಣಗಳಲ್ಲೇ ಬೆಂಕಿ ಇಡೀ ಅಡುಗೆ ಕೋಣೆಯನ್ನು ಆವರಿಸಿತ್ತು’ ಎಂದು ಸ್ಥಳೀಯರೊಬ್ಬರು ತಿಳಿಸಿದರು.