<p>ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೊದಲ ಅಗ್ನಿಪರೀಕ್ಷೆಯನ್ನು ರಾಜ್ಯದ ಹೈಕೋರ್ಟ್ನಿಂದಲೇ ಎದುರಿಸಬೇಕಾಗಿ ಬಂದಿದೆ. `ವಾರದೊಳಗೆ ಲೋಕಾಯುಕ್ತರನ್ನು ನೇಮಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು~ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.<br /> <br /> ಭ್ರಷ್ಟಾಚಾರದಿಂದ ಮುಕ್ತವಾದ ಆಡಳಿತ ನೀಡುವುದಾಗಿ ಘೋಷಿಸಿರುವ ಶೆಟ್ಟರ್ ಅವರಿಗೆ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಒಂದು ವಾರದ ಕಾಲಾವಕಾಶ ಮಾತ್ರ ಇದೆ, ಆಗಲೇ ಕ್ಷಣಗಣನೆ ಪ್ರಾರಂಭವಾಗಿದೆ. <br /> <br /> ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ನಿವೃತ್ತಿಯಾಗಿ ಒಂದು ವರ್ಷವಾಗುತ್ತಾ ಬಂದರೂ ಆ ಹುದ್ದೆಯನ್ನು ತುಂಬಲು ಸಾಧ್ಯವಾಗದೆ ಇರುವುದು ಹೈಕೋರ್ಟ್ ಕೆಂಡಾಮಂಡಲವಾಗಲು ಕಾರಣ.<br /> <br /> ಈ ಕರ್ತವ್ಯಲೋಪಕ್ಕೆ ರಾಜ್ಯ ಸರ್ಕಾರದ ನೈತಿಕ ದಿವಾಳಿತನವಲ್ಲದೇ ಬೇರೇನೂ ಕಾರಣ ಇಲ್ಲ. ಲೋಕಾಯುಕ್ತರ ನೇಮಕಕ್ಕೆ ನ್ಯಾಯಮೂರ್ತಿಗಳ ಅರ್ಹತೆ ಮತ್ತು ಪ್ರಾಮಾಣಿಕತೆಗಳೇ ಮಾನದಂಡವಾಗಬೇಕೇ ಹೊರತು ಜಾತಿ ಇಲ್ಲವೇ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಗಳಲ್ಲ.<br /> <br /> ಒಂದಷ್ಟು ಆರೋಪಗಳಿದ್ದರೂ ಲೋಕಾಯುಕ್ತರಾಗುವ ಅರ್ಹತೆ ಉಳ್ಳವರು ಇಲ್ಲವೇ ಇಲ್ಲ ಎನ್ನುವ ಸ್ಥಿತಿಯನ್ನು ನ್ಯಾಯಾಂಗ ತಲುಪಿಲ್ಲ. ಆದರೆ ರಾಜ್ಯ ಬಿಜೆಪಿ ಸರ್ಕಾರದ ಬೇರೆ ರೀತಿಯ ಲೆಕ್ಕಾಚಾರಗಳಿಂದಾಗಿ ಲೋಕಾಯುಕ್ತರ ನೇಮಕ ಸಾಧ್ಯವಾಗಿಲ್ಲ. <br /> <br /> ಲೋಕಾಯುಕ್ತರಾಗಿ ನೇಮಕಗೊಂಡಿದ್ದ ಒಬ್ಬ ನ್ಯಾಯಮೂರ್ತಿಗಳು ನಿವೇಶನ ಹಗರಣದ ಆರೋಪ ಎದುರಿಸಿ ಪದತ್ಯಾಗ ಮಾಡಬೇಕಾಯಿತು. ಮತ್ತೊಬ್ಬರ ನೇಮಕಕ್ಕೆ ರಾಜ್ಯಪಾಲರೇ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅದೂ ಸಾಧ್ಯವಾಗಲಿಲ್ಲ. ಇಂತಹದೇ ಕಾರಣಗಳಿಂದಾಗಿ ಇಬ್ಬರು ಉಪ ಲೋಕಾಯುಕ್ತರು ಕೂಡಾ ಬಹಳ ದಿನ ಹುದ್ದೆಯಲ್ಲಿ ಮುಂದುವರಿಯಲಿಲ್ಲ.<br /> <br /> ಗಣಿಲೂಟಿ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಲೋಕಾಯುಕ್ತರು ನೀಡಿರುವ ವರದಿಯಿಂದ ಮುಖ್ಯಮಂತ್ರಿಯೇ ಅಧಿಕಾರ ಕಳೆದುಕೊಂಡ ನಂತರ ಸರ್ಕಾರ ಜಾಗೃತವಾಗಿದೆ.<br /> <br /> ಭ್ರಷ್ಟಾಚಾರದ ಹಗರಣಗಳು ಮುಖ್ಯಮಂತ್ರಿಯವರಿಂದ ಹಿಡಿದು ಸಚಿವರ ವರೆಗೆ ಎಲ್ಲರನ್ನೂ ನುಂಗಿಹಾಕುತ್ತಿರುವುದರಿಂದ ಎಚ್ಚರಗೊಂಡಿರುವ ರಾಜ್ಯಸರ್ಕಾರ ಶತಾಯಗತಾಯ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಲು ಹಟತೊಟ್ಟಂತೆ ಕಾಣುತ್ತಿದೆ. <br /> <br /> ರಾಷ್ಟ್ರಮಟ್ಟದಲ್ಲಿ ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಅಣ್ಣಾಹಜಾರೆ ನಡೆಸುತ್ತಿರುವ ಚಳವಳಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬಹಿರಂಗವಾಗಿ ಬೆಂಬಲ ಘೋಷಿಸಿದ್ದರು. ಆದರೆ ಕರ್ನಾಟಕದಲ್ಲಿ ಖಾಲಿ ಬಿದ್ದಿರುವ ಲೋಕಾಯುಕ್ತ ಹುದ್ದೆ ಬಗ್ಗೆ ಮಾತ್ರ ಅವರು ತುಟಿ ಬಿಚ್ಚುತ್ತಿಲ್ಲ. ಇದು ಆ ಪಕ್ಷದ ಆತ್ಮವಂಚನೆಯ ನಡವಳಿಕೆ. <br /> <br /> ಗಣಿಲೂಟಿ ಹಗರಣದ ಬಗ್ಗೆ ಹಿಂದಿನ ಲೋಕಾಯುಕ್ತರು ನೀಡಿರುವ ವರದಿಯಲ್ಲಿ ವಿರೋಧಪಕ್ಷಗಳ ಕೆಲವು ಹಿರಿಯ ನಾಯಕರ ಹೆಸರುಗಳೂ ಕಾಣಿಸಿಕೊಂಡಿರುವುದರಿಂದ ಅವುಗಳು ಕೂಡಾ ಜಾಣಮೌನದ ಮೂಲಕ ಸರ್ಕಾರದ ಹುನ್ನಾರದಲ್ಲಿ ಶಾಮೀಲಾಗಿರುವಂತೆ ವರ್ತಿಸುತ್ತಿವೆ.<br /> <br /> ಈ ಕಣ್ಣುಮುಚ್ಚಾಲೆಯ ಆಟ ಬಹಳ ದಿನ ನಡೆಯಲಾರದು ಎಂಬುದಕ್ಕೆ ಹೈಕೋರ್ಟ್ ನೀಡಿರುವ ಎಚ್ಚರಿಕೆಯೇ ಸಂಕೇತ. ಸರ್ಕಾರದ ಕರ್ತವ್ಯಲೋಪದಿಂದಾಗಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂಬ ಗಂಭೀರ ಮಾತುಗಳನ್ನು ಹೈಕೋರ್ಟ್ ಆಡಿದ ನಂತರ ರಾಜ್ಯಪಾಲರು ಕೈಕಟ್ಟಿ ಕೂರಲಾರರು.<br /> <br /> ರಾಜ್ಯಸರ್ಕಾರದ ಕರ್ತವ್ಯಲೋಪ ಕಂಡ ಗುಜರಾತ್ನ ರಾಜ್ಯಪಾಲರು ತಾವೇ ಲೋಕಾಯುಕ್ತರನ್ನು ನೇಮಿಸಿದ ಪೂರ್ವನಿದರ್ಶನ ಇಲ್ಲಿನ ರಾಜ್ಯಪಾಲರ ಮುಂದೆಯೂ ಇದೆ. ಅನಗತ್ಯವಾದ ಇಂತಹ ವಿವಾದಕ್ಕೆ ಅವಕಾಶ ನೀಡದೆ ಹೈಕೋರ್ಟ್ ನೀಡಿದ ಗಡುವಿನೊಳಗೆ ಮುಖ್ಯಮಂತ್ರಿಗಳು ಲೋಕಾಯುಕ್ತರನ್ನು ನೇಮಿಸುವುದು ಒಳಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೊದಲ ಅಗ್ನಿಪರೀಕ್ಷೆಯನ್ನು ರಾಜ್ಯದ ಹೈಕೋರ್ಟ್ನಿಂದಲೇ ಎದುರಿಸಬೇಕಾಗಿ ಬಂದಿದೆ. `ವಾರದೊಳಗೆ ಲೋಕಾಯುಕ್ತರನ್ನು ನೇಮಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು~ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.<br /> <br /> ಭ್ರಷ್ಟಾಚಾರದಿಂದ ಮುಕ್ತವಾದ ಆಡಳಿತ ನೀಡುವುದಾಗಿ ಘೋಷಿಸಿರುವ ಶೆಟ್ಟರ್ ಅವರಿಗೆ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಒಂದು ವಾರದ ಕಾಲಾವಕಾಶ ಮಾತ್ರ ಇದೆ, ಆಗಲೇ ಕ್ಷಣಗಣನೆ ಪ್ರಾರಂಭವಾಗಿದೆ. <br /> <br /> ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ನಿವೃತ್ತಿಯಾಗಿ ಒಂದು ವರ್ಷವಾಗುತ್ತಾ ಬಂದರೂ ಆ ಹುದ್ದೆಯನ್ನು ತುಂಬಲು ಸಾಧ್ಯವಾಗದೆ ಇರುವುದು ಹೈಕೋರ್ಟ್ ಕೆಂಡಾಮಂಡಲವಾಗಲು ಕಾರಣ.<br /> <br /> ಈ ಕರ್ತವ್ಯಲೋಪಕ್ಕೆ ರಾಜ್ಯ ಸರ್ಕಾರದ ನೈತಿಕ ದಿವಾಳಿತನವಲ್ಲದೇ ಬೇರೇನೂ ಕಾರಣ ಇಲ್ಲ. ಲೋಕಾಯುಕ್ತರ ನೇಮಕಕ್ಕೆ ನ್ಯಾಯಮೂರ್ತಿಗಳ ಅರ್ಹತೆ ಮತ್ತು ಪ್ರಾಮಾಣಿಕತೆಗಳೇ ಮಾನದಂಡವಾಗಬೇಕೇ ಹೊರತು ಜಾತಿ ಇಲ್ಲವೇ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಗಳಲ್ಲ.<br /> <br /> ಒಂದಷ್ಟು ಆರೋಪಗಳಿದ್ದರೂ ಲೋಕಾಯುಕ್ತರಾಗುವ ಅರ್ಹತೆ ಉಳ್ಳವರು ಇಲ್ಲವೇ ಇಲ್ಲ ಎನ್ನುವ ಸ್ಥಿತಿಯನ್ನು ನ್ಯಾಯಾಂಗ ತಲುಪಿಲ್ಲ. ಆದರೆ ರಾಜ್ಯ ಬಿಜೆಪಿ ಸರ್ಕಾರದ ಬೇರೆ ರೀತಿಯ ಲೆಕ್ಕಾಚಾರಗಳಿಂದಾಗಿ ಲೋಕಾಯುಕ್ತರ ನೇಮಕ ಸಾಧ್ಯವಾಗಿಲ್ಲ. <br /> <br /> ಲೋಕಾಯುಕ್ತರಾಗಿ ನೇಮಕಗೊಂಡಿದ್ದ ಒಬ್ಬ ನ್ಯಾಯಮೂರ್ತಿಗಳು ನಿವೇಶನ ಹಗರಣದ ಆರೋಪ ಎದುರಿಸಿ ಪದತ್ಯಾಗ ಮಾಡಬೇಕಾಯಿತು. ಮತ್ತೊಬ್ಬರ ನೇಮಕಕ್ಕೆ ರಾಜ್ಯಪಾಲರೇ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅದೂ ಸಾಧ್ಯವಾಗಲಿಲ್ಲ. ಇಂತಹದೇ ಕಾರಣಗಳಿಂದಾಗಿ ಇಬ್ಬರು ಉಪ ಲೋಕಾಯುಕ್ತರು ಕೂಡಾ ಬಹಳ ದಿನ ಹುದ್ದೆಯಲ್ಲಿ ಮುಂದುವರಿಯಲಿಲ್ಲ.<br /> <br /> ಗಣಿಲೂಟಿ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ಲೋಕಾಯುಕ್ತರು ನೀಡಿರುವ ವರದಿಯಿಂದ ಮುಖ್ಯಮಂತ್ರಿಯೇ ಅಧಿಕಾರ ಕಳೆದುಕೊಂಡ ನಂತರ ಸರ್ಕಾರ ಜಾಗೃತವಾಗಿದೆ.<br /> <br /> ಭ್ರಷ್ಟಾಚಾರದ ಹಗರಣಗಳು ಮುಖ್ಯಮಂತ್ರಿಯವರಿಂದ ಹಿಡಿದು ಸಚಿವರ ವರೆಗೆ ಎಲ್ಲರನ್ನೂ ನುಂಗಿಹಾಕುತ್ತಿರುವುದರಿಂದ ಎಚ್ಚರಗೊಂಡಿರುವ ರಾಜ್ಯಸರ್ಕಾರ ಶತಾಯಗತಾಯ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಲು ಹಟತೊಟ್ಟಂತೆ ಕಾಣುತ್ತಿದೆ. <br /> <br /> ರಾಷ್ಟ್ರಮಟ್ಟದಲ್ಲಿ ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಅಣ್ಣಾಹಜಾರೆ ನಡೆಸುತ್ತಿರುವ ಚಳವಳಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಬಹಿರಂಗವಾಗಿ ಬೆಂಬಲ ಘೋಷಿಸಿದ್ದರು. ಆದರೆ ಕರ್ನಾಟಕದಲ್ಲಿ ಖಾಲಿ ಬಿದ್ದಿರುವ ಲೋಕಾಯುಕ್ತ ಹುದ್ದೆ ಬಗ್ಗೆ ಮಾತ್ರ ಅವರು ತುಟಿ ಬಿಚ್ಚುತ್ತಿಲ್ಲ. ಇದು ಆ ಪಕ್ಷದ ಆತ್ಮವಂಚನೆಯ ನಡವಳಿಕೆ. <br /> <br /> ಗಣಿಲೂಟಿ ಹಗರಣದ ಬಗ್ಗೆ ಹಿಂದಿನ ಲೋಕಾಯುಕ್ತರು ನೀಡಿರುವ ವರದಿಯಲ್ಲಿ ವಿರೋಧಪಕ್ಷಗಳ ಕೆಲವು ಹಿರಿಯ ನಾಯಕರ ಹೆಸರುಗಳೂ ಕಾಣಿಸಿಕೊಂಡಿರುವುದರಿಂದ ಅವುಗಳು ಕೂಡಾ ಜಾಣಮೌನದ ಮೂಲಕ ಸರ್ಕಾರದ ಹುನ್ನಾರದಲ್ಲಿ ಶಾಮೀಲಾಗಿರುವಂತೆ ವರ್ತಿಸುತ್ತಿವೆ.<br /> <br /> ಈ ಕಣ್ಣುಮುಚ್ಚಾಲೆಯ ಆಟ ಬಹಳ ದಿನ ನಡೆಯಲಾರದು ಎಂಬುದಕ್ಕೆ ಹೈಕೋರ್ಟ್ ನೀಡಿರುವ ಎಚ್ಚರಿಕೆಯೇ ಸಂಕೇತ. ಸರ್ಕಾರದ ಕರ್ತವ್ಯಲೋಪದಿಂದಾಗಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂಬ ಗಂಭೀರ ಮಾತುಗಳನ್ನು ಹೈಕೋರ್ಟ್ ಆಡಿದ ನಂತರ ರಾಜ್ಯಪಾಲರು ಕೈಕಟ್ಟಿ ಕೂರಲಾರರು.<br /> <br /> ರಾಜ್ಯಸರ್ಕಾರದ ಕರ್ತವ್ಯಲೋಪ ಕಂಡ ಗುಜರಾತ್ನ ರಾಜ್ಯಪಾಲರು ತಾವೇ ಲೋಕಾಯುಕ್ತರನ್ನು ನೇಮಿಸಿದ ಪೂರ್ವನಿದರ್ಶನ ಇಲ್ಲಿನ ರಾಜ್ಯಪಾಲರ ಮುಂದೆಯೂ ಇದೆ. ಅನಗತ್ಯವಾದ ಇಂತಹ ವಿವಾದಕ್ಕೆ ಅವಕಾಶ ನೀಡದೆ ಹೈಕೋರ್ಟ್ ನೀಡಿದ ಗಡುವಿನೊಳಗೆ ಮುಖ್ಯಮಂತ್ರಿಗಳು ಲೋಕಾಯುಕ್ತರನ್ನು ನೇಮಿಸುವುದು ಒಳಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>