<p><strong>ಚುನಾವಣೆ ಸಮಯದಲ್ಲಿ ಮೋಸ ಹೋಗಬೇಡಿ: ಖಾನ್</strong><br /><strong>ಮದುರೈ, ಜ. 3–</strong> ನಿಷ್ಠೆಯಿಲ್ಲದ ರಾಜಕಾರಣಿಗಳಿಂದ ಚುನಾವಣೆಗಳ ಸಂದರ್ಭದಲ್ಲಿ ಮೋಸಹೋಗದಂತೆ ಖಾನ್ ಅಬ್ದುಲ್ ಗಫಾರ್ ಖಾನ್ ಅವರು ಜನತೆಗೆ ಅದರಲ್ಲಿಯೂ ಮುಖ್ಯವಾಗಿ ಬಡವರಿಗೆ ಇಂದು ಕರೆ ಇತ್ತರು.</p>.<p>‘ಕಾಂಗ್ರೆಸ್, ಕಮ್ಯುನಿಸ್ಟ್, ಜನಸಂಘ ಅಥವಾ ಸ್ವತಂತ್ರ, ಯಾವುದೇ ಪಕ್ಷಕ್ಕೆ ಅಭ್ಯರ್ಥಿಯು ಸೇರಿರಲಿ ರಾಷ್ಟ್ರದಿಂದ ಬಡತನ ಮತ್ತು ಮತೀಯ ಭಾವನೆಯನ್ನು ನಿರ್ಮೂಲಗೊಳಿಸುವ ಹಾಗೂ ಜನತೆಯ ಸೇವೆ ಮಾಡಲು ಮಾತು ಕೊಡುವವರೆಗೂ ಅವರನ್ನು ಚುನಾಯಿಸಬೇಡಿ’ ಎಂದರು.</p>.<p><strong>ಇಂದಿರಾಗೆ ಸಿ.ಬಿ. ಗುಪ್ತರ ಹೊಸ ವರ್ಷದ ಉಡುಗೊರೆ</strong><br /><strong>ವದೆಹಲಿ, ಜ. 3–</strong> ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಸಿ.ಬಿ. ಗುಪ್ತ ಅವರಿಂದ ಹೊಸ ವರ್ಷದ ಅಪೂರ್ವ ಉಡುಗೊರೆ ಪಡೆದಿದ್ದಾರೆ. ಅದು ಮೂವತ್ತೇಳು ಲಕ್ಷ ರೂ.ಗಳ ಬಿಲ್.</p>.<p>ಕಳೆದ ವರ್ಷ ಶ್ರೀಮತಿ ಇಂದಿರಾ ಗಾಂಧಿಯವರು ಉತ್ತರ ಪ್ರದೇಶದಲ್ಲಿ ಪ್ರವಾಸ ಕೈಗೊಂಡಾಗಲೆಲ್ಲ ರಾಜ್ಯ ಸರ್ಕಾರ ನಿರ್ವಹಿಸಿದ ಖರ್ಚು ವೆಚ್ಚದ ಬಾಬ್ತೇ ಈ ಬಿಲ್. ಈ ಹಣವನ್ನು ಸಾಧ್ಯವಾದಷ್ಟು ಬೇಗ ಪಾವತಿ ಮಾಡುವಂತೆ ಸಿ.ಬಿ. ಗುಪ್ತ ಅವರು ಪ್ರಧಾನಿಯನ್ನು ಕೇಳಿದ್ದಾರೆ.</p>.<p>ಇಂದಿರಾ ಗಾಂಧಿಯವರನ್ನು ಪೇಚಿನಲ್ಲಿ ಸಿಕ್ಕಿಸುವ ಉದ್ದೇಶದಿಂದಲೇ ಕಳುಹಿಸಿರುವ ಈ ಬಿಲ್ನ ಸಾಧಕ–ಬಾಧಕದ ಪರಿಣಾಮಗಳನ್ನು ಪ್ರಧಾನಿಯವರ ಕಚೇರಿ ಈಗ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಗುಪ್ತ ಅವರಿಗೆ ಸೂಕ್ತ ಉತ್ತರ ಕಳುಹಿಸುವ ನಿರೀಕ್ಷೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚುನಾವಣೆ ಸಮಯದಲ್ಲಿ ಮೋಸ ಹೋಗಬೇಡಿ: ಖಾನ್</strong><br /><strong>ಮದುರೈ, ಜ. 3–</strong> ನಿಷ್ಠೆಯಿಲ್ಲದ ರಾಜಕಾರಣಿಗಳಿಂದ ಚುನಾವಣೆಗಳ ಸಂದರ್ಭದಲ್ಲಿ ಮೋಸಹೋಗದಂತೆ ಖಾನ್ ಅಬ್ದುಲ್ ಗಫಾರ್ ಖಾನ್ ಅವರು ಜನತೆಗೆ ಅದರಲ್ಲಿಯೂ ಮುಖ್ಯವಾಗಿ ಬಡವರಿಗೆ ಇಂದು ಕರೆ ಇತ್ತರು.</p>.<p>‘ಕಾಂಗ್ರೆಸ್, ಕಮ್ಯುನಿಸ್ಟ್, ಜನಸಂಘ ಅಥವಾ ಸ್ವತಂತ್ರ, ಯಾವುದೇ ಪಕ್ಷಕ್ಕೆ ಅಭ್ಯರ್ಥಿಯು ಸೇರಿರಲಿ ರಾಷ್ಟ್ರದಿಂದ ಬಡತನ ಮತ್ತು ಮತೀಯ ಭಾವನೆಯನ್ನು ನಿರ್ಮೂಲಗೊಳಿಸುವ ಹಾಗೂ ಜನತೆಯ ಸೇವೆ ಮಾಡಲು ಮಾತು ಕೊಡುವವರೆಗೂ ಅವರನ್ನು ಚುನಾಯಿಸಬೇಡಿ’ ಎಂದರು.</p>.<p><strong>ಇಂದಿರಾಗೆ ಸಿ.ಬಿ. ಗುಪ್ತರ ಹೊಸ ವರ್ಷದ ಉಡುಗೊರೆ</strong><br /><strong>ವದೆಹಲಿ, ಜ. 3–</strong> ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಸಿ.ಬಿ. ಗುಪ್ತ ಅವರಿಂದ ಹೊಸ ವರ್ಷದ ಅಪೂರ್ವ ಉಡುಗೊರೆ ಪಡೆದಿದ್ದಾರೆ. ಅದು ಮೂವತ್ತೇಳು ಲಕ್ಷ ರೂ.ಗಳ ಬಿಲ್.</p>.<p>ಕಳೆದ ವರ್ಷ ಶ್ರೀಮತಿ ಇಂದಿರಾ ಗಾಂಧಿಯವರು ಉತ್ತರ ಪ್ರದೇಶದಲ್ಲಿ ಪ್ರವಾಸ ಕೈಗೊಂಡಾಗಲೆಲ್ಲ ರಾಜ್ಯ ಸರ್ಕಾರ ನಿರ್ವಹಿಸಿದ ಖರ್ಚು ವೆಚ್ಚದ ಬಾಬ್ತೇ ಈ ಬಿಲ್. ಈ ಹಣವನ್ನು ಸಾಧ್ಯವಾದಷ್ಟು ಬೇಗ ಪಾವತಿ ಮಾಡುವಂತೆ ಸಿ.ಬಿ. ಗುಪ್ತ ಅವರು ಪ್ರಧಾನಿಯನ್ನು ಕೇಳಿದ್ದಾರೆ.</p>.<p>ಇಂದಿರಾ ಗಾಂಧಿಯವರನ್ನು ಪೇಚಿನಲ್ಲಿ ಸಿಕ್ಕಿಸುವ ಉದ್ದೇಶದಿಂದಲೇ ಕಳುಹಿಸಿರುವ ಈ ಬಿಲ್ನ ಸಾಧಕ–ಬಾಧಕದ ಪರಿಣಾಮಗಳನ್ನು ಪ್ರಧಾನಿಯವರ ಕಚೇರಿ ಈಗ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಗುಪ್ತ ಅವರಿಗೆ ಸೂಕ್ತ ಉತ್ತರ ಕಳುಹಿಸುವ ನಿರೀಕ್ಷೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>