<p><strong>ಬುದ್ಧಿಜೀವಿಗಳ ಮಾರ್ಗದರ್ಶನ: ಇಂದಿರಾ ಆಕಾಂಕ್ಷೆ<br />ನವದೆಹಲಿ, ಆ. 17–</strong> ನಮ್ಮ ಲೇಖಕರು ಹಾಗೂ ಬುದ್ಧಿಜೀವಿಗಳು ಜನತೆಗೆ ನಾಯಕತ್ವ ಒದಗಿಸುವುದರಲ್ಲಿ ಯಶಸ್ವಿಯಾಗಿಲ್ಲ ಎಂಬುದು ಪ್ರಧಾನಿ ಇಂದಿರಾ ಭಾವನೆ.</p>.<p>ಸಾಧಾರಣವಾಗಿ ತತ್ಕ್ಷಣದ ಸಮಸ್ಯೆಗಳಷ್ಟೇ ರಾಜಕಾರಣಿಯ ಚಿಂತೆಯಾಗಿರುತ್ತದೆ. ಆದರೆ, ಲೇಖಕ ಅಥವಾ ಕರ್ತೃವಿನ ಚಿಂತನೆ ಇನ್ನೂ ಆಳವಾದದ್ದು, ವ್ಯಾಪಕ, ಮೂಲಭೂತ ರೀತಿಯದು; ಮಾನವನ ಸುಖ–ದುಃಖ, ಶಂಕೆ–ಚಿಂತೆಗಳ ಸುಳಿಯಲ್ಲಿ ಸತತ ಅನ್ವೇಷಣೆ ಅವರದು. ಸಾಮಾಜಿಕ ಜೀವನಕ್ಕೆ ಒಂದು ಅರ್ಥ ಹುಡುಕುವ ಭಾವುಕರು ಅವರು ಎನ್ನುತ್ತಾರೆ ಇಂದಿರಾ.</p>.<p>ಖ್ಯಾತ ಹಿಂದಿ ಲೇಖಕ ಶ್ರೀಕಾಂತ್ ವರ್ಮಾ ಅವರಿಗೆ ಈಚೆಗೆ ಕೊಟ್ಟಸಂದರ್ಶನದಲ್ಲಿ ಶ್ರೀಮತಿ ಇಂದಿರಾ ಗಾಂಧಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p><strong>ಮಹಾಜನ್ ವರದಿ ಜಾರಿಗೆ ಖಡಾಖಂಡಿತ ಒತ್ತಾಯ: ಅನ್ಯಮಾರ್ಗವೇ ಇಲ್ಲ<br />ಬೆಂಗಳೂರು, ಆ. 17– </strong>‘ಮಹಾಜನ್ ವರದಿ ಕಾರ್ಯಗತ ಮಾಡಬೇಕೆಂಬ ರಾಜ್ಯದ ನಿಲುವನ್ನೇ ಪ್ರತಿಪಾದಿಸಿ’– ಇದು ಇಂದು ಮತ್ತೊಮ್ಮೆ ಸರ್ವ ಪಕ್ಷಗಳ ಪ್ರತಿನಿಧಿಗಳು ಮುಖ್ಯಮಂತ್ರಿಗೆ ನೀಡಿದ ಸೂಚನೆ.</p>.<p>ನಾಳೆ ದೆಹಲಿಯಲ್ಲಿ ಪ್ರಧಾನಿಯೊಡನೆ ಗಡಿ ವಿವಾದ ಕುರಿತು ಚರ್ಚಿಸುವಾಗ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಈ ನಿಲುವನ್ನೇ ಪ್ರತಿಪಾದಿಸುವರು.</p>.<p>ನಾಳೆ ಬೆಳಿಗ್ಗೆ ದೆಹಲಿಗೆ ತೆರಳುವ ಮುನ್ನ ಮುಖ್ಯಮಂತ್ರಿಗಳು ಇಂದು ಸರ್ವ ಪಕ್ಷಗಳ ಪ್ರತಿನಿಧಿಗಳೊಡನೆ ಸುಮಾರು ಎರಡೂವರೆ ಗಂಟೆಗಳ ಕಾಲ ಸಮಾಲೋಚನೆ ನಡೆಸಿದ ನಂತರ ರಾಜ್ಯದ ನಿಲುವಿನ ಬಗ್ಗೆ ಇದು ಮತ್ತೊಮ್ಮೆ ಸ್ಪಷ್ಟವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬುದ್ಧಿಜೀವಿಗಳ ಮಾರ್ಗದರ್ಶನ: ಇಂದಿರಾ ಆಕಾಂಕ್ಷೆ<br />ನವದೆಹಲಿ, ಆ. 17–</strong> ನಮ್ಮ ಲೇಖಕರು ಹಾಗೂ ಬುದ್ಧಿಜೀವಿಗಳು ಜನತೆಗೆ ನಾಯಕತ್ವ ಒದಗಿಸುವುದರಲ್ಲಿ ಯಶಸ್ವಿಯಾಗಿಲ್ಲ ಎಂಬುದು ಪ್ರಧಾನಿ ಇಂದಿರಾ ಭಾವನೆ.</p>.<p>ಸಾಧಾರಣವಾಗಿ ತತ್ಕ್ಷಣದ ಸಮಸ್ಯೆಗಳಷ್ಟೇ ರಾಜಕಾರಣಿಯ ಚಿಂತೆಯಾಗಿರುತ್ತದೆ. ಆದರೆ, ಲೇಖಕ ಅಥವಾ ಕರ್ತೃವಿನ ಚಿಂತನೆ ಇನ್ನೂ ಆಳವಾದದ್ದು, ವ್ಯಾಪಕ, ಮೂಲಭೂತ ರೀತಿಯದು; ಮಾನವನ ಸುಖ–ದುಃಖ, ಶಂಕೆ–ಚಿಂತೆಗಳ ಸುಳಿಯಲ್ಲಿ ಸತತ ಅನ್ವೇಷಣೆ ಅವರದು. ಸಾಮಾಜಿಕ ಜೀವನಕ್ಕೆ ಒಂದು ಅರ್ಥ ಹುಡುಕುವ ಭಾವುಕರು ಅವರು ಎನ್ನುತ್ತಾರೆ ಇಂದಿರಾ.</p>.<p>ಖ್ಯಾತ ಹಿಂದಿ ಲೇಖಕ ಶ್ರೀಕಾಂತ್ ವರ್ಮಾ ಅವರಿಗೆ ಈಚೆಗೆ ಕೊಟ್ಟಸಂದರ್ಶನದಲ್ಲಿ ಶ್ರೀಮತಿ ಇಂದಿರಾ ಗಾಂಧಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p><strong>ಮಹಾಜನ್ ವರದಿ ಜಾರಿಗೆ ಖಡಾಖಂಡಿತ ಒತ್ತಾಯ: ಅನ್ಯಮಾರ್ಗವೇ ಇಲ್ಲ<br />ಬೆಂಗಳೂರು, ಆ. 17– </strong>‘ಮಹಾಜನ್ ವರದಿ ಕಾರ್ಯಗತ ಮಾಡಬೇಕೆಂಬ ರಾಜ್ಯದ ನಿಲುವನ್ನೇ ಪ್ರತಿಪಾದಿಸಿ’– ಇದು ಇಂದು ಮತ್ತೊಮ್ಮೆ ಸರ್ವ ಪಕ್ಷಗಳ ಪ್ರತಿನಿಧಿಗಳು ಮುಖ್ಯಮಂತ್ರಿಗೆ ನೀಡಿದ ಸೂಚನೆ.</p>.<p>ನಾಳೆ ದೆಹಲಿಯಲ್ಲಿ ಪ್ರಧಾನಿಯೊಡನೆ ಗಡಿ ವಿವಾದ ಕುರಿತು ಚರ್ಚಿಸುವಾಗ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಈ ನಿಲುವನ್ನೇ ಪ್ರತಿಪಾದಿಸುವರು.</p>.<p>ನಾಳೆ ಬೆಳಿಗ್ಗೆ ದೆಹಲಿಗೆ ತೆರಳುವ ಮುನ್ನ ಮುಖ್ಯಮಂತ್ರಿಗಳು ಇಂದು ಸರ್ವ ಪಕ್ಷಗಳ ಪ್ರತಿನಿಧಿಗಳೊಡನೆ ಸುಮಾರು ಎರಡೂವರೆ ಗಂಟೆಗಳ ಕಾಲ ಸಮಾಲೋಚನೆ ನಡೆಸಿದ ನಂತರ ರಾಜ್ಯದ ನಿಲುವಿನ ಬಗ್ಗೆ ಇದು ಮತ್ತೊಮ್ಮೆ ಸ್ಪಷ್ಟವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>