<p><strong>ಅವಿಭಾಜ್ಯ ಆಂಧ್ರಕ್ಕೇ ಬೆಂಬಲ: ಬ್ರಹ್ಮಾನಂದರೆಡ್ಡಿ ಅವರಲ್ಲಿ ಆಂಧ್ರ ಕಾಂಗ್ರೆಸ್ ಶಾಸಕರ ವಿಶ್ವಾಸ</strong></p>.<p><strong>ಹೈದರಾಬಾದ್, ಜುಲೈ6</strong>– ಆಂಧ್ರ ಪ್ರದೇಶದ ಶಾಸನಸಭಾ ಕಾಂಗ್ರೆಸ್ ಪಕ್ಷವು ಇಂದು ಇಲ್ಲಿ ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿ ಅವರಲ್ಲಿ ಸರ್ವಾನುಮತದಿಂದ ತನ್ನ ಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿತು.</p>.<p>ರಾಜ್ಯದಲ್ಲಿ ಮತ್ತೆ ಮಾಮೂಲಿನ ಪರಿಸ್ಥಿತಿ ಉಂಟಾಗುವತನಕ ಮುಖ್ಯಮಂತ್ರಿ ಪದವಿಯಲ್ಲೇ ಮುಂದುವರಿದು ಅಂತಿಮವಾಗಿ ತೆಲಂಗಾಣ ಪ್ರದೇಶದವರೊಬ್ಬರು ನಾಯಕತ್ವವನ್ನು ವಹಿಸಿಕೊಳ್ಳುವಂತೆ ದಾರಿ ಮಾಡಿಕೊಡಬೇಕೆಂದೂ ಶ್ರೀ ಬ್ರಹ್ಮಾನಂದರೆಡ್ಡಿ ಅವರನ್ನು ಕೋರಿಕೊಳ್ಳಲಾಯಿತು.</p>.<p>ಸೈನಿಕ ಸಾಮಗ್ರಿಯಿದ್ದ ಗೂಡ್ಸ್ಟ್ರೈನ್ ಲೂಟಿ: ಇಬ್ಬರ ಬಂಧನ</p>.<p>ಕಲ್ಕತ್ತ, ಜುಲೈ 6– ಪೂರ್ವ ರೈಲ್ವೆಯ ರಾಣಿಗಂಜ್ ಮತ್ತು ಬೈಕ್ತನಗೋರ ಛಲು ನಿಲ್ದಾಣಗಳ ನಡುವೆ ಸೈನಿಕ ಸಾಮಗ್ರಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ಮಿಲಿಟರಿ ಗೂಡ್ಸ್ ಟ್ರೈನೊಂದನ್ನು ಗುರುತಿಸಿದ ವ್ಯಕ್ತಿಗಳು ಇಂದು ಬೆಳಿಗ್ಗೆ ಲೂಟಿ ಮಾಡಿದರು ಎಂದು ಇಲ್ಲಿಯ ಸೈನ್ಯದ ಕಚೇರಿಗೆ ವರದಿ ಬಂದಿದೆ.</p>.<p>ರೈಲ್ವೆ ಹಾದಿಯ ಮೇಲೆ ದೊಡ್ಡ ಕಲ್ಲುಗಳನ್ನಿಟ್ಟು ಟ್ರೈನನ್ನ ನಿಲ್ಲಿಸಿ ಅವರು ಲೂಟಿ ಮಾಡಿದರೆಂದೂ ಹೇಳಲಾಗಿದೆ.</p>.<p><strong>ರಾಜ್ಯ ಇಬ್ಭಾಗವಾಗುವುದನ್ನು ತಾವು ವಿರೋಧಿಸುವುದಾಗಿ ಸಚಿವ ಶ್ರೀ ಬಿ. ರಾಚಯ್ಯ</strong></p>.<p><strong>ಮೈಸೂರು, ಜುಲೈ 6–</strong> ರಾಜ್ಯದ ಯಾವುದಾದರೊಂದು ಪ್ರದೇಶ ಅಥವಾ ಒಂದು ಪಂಗಡಕ್ಕೆ ಅನ್ಯಾಯವಾಗಿದ್ದರೆ ಅದರ ನಿವಾರಣೆಗಾಗಿ ತಾವು ಹೋರಾಟ ಮಾಡಲು ಸಿದ್ಧವಿರುವುದಾಗಿಯೂ ಆದರೆ ಮೈಸೂರು ಎರಡು ರಾಜ್ಯವಾಗುವುದನ್ನು ತಾವು ಖಂಡಿತಾ ಒಪ್ಪುವುದಿಲ್ಲವೆಂದೂ ರಾಜ್ಯದ ವ್ಯವಸಾಯ ಸಚಿವ ಶ್ರೀ ಬಿ. ರಾಚಯ್ಯನವರು ಇಂದು ಇಲ್ಲಿ ಘೋಷಿಸಿದರು.</p>.<p><strong>ಈಗಲ್ – ಚಂದ್ರನಲ್ಲಿ ಇಳಿವ ಮಾನವ ಸಹಿತನೌಕೆ</strong></p>.<p><strong>ಹೂಸ್ಟನ್, ಜುಲೈ 6–</strong> ಚಂದ್ರಗ್ರಹದಲ್ಲಿ ಮಾನವಸಹಿತ ಇಳಿಯುವ ಮೊದಲ ಬಾಹ್ಯಾಕಾಶ ನೌಕೆಯ ಹೆಸರು ‘ಈಗಲ್’ ಚಂದ್ರ ಗ್ರಹದ ಸುತ್ತ ಕಕ್ಷಾಪಥದಲ್ಲಿ ಸಂಚರಿಸುವ ಸಹ ನೌಕೆಯ ಹೆಸರು ‘ಕೊಲಂಬಿಯಾ’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅವಿಭಾಜ್ಯ ಆಂಧ್ರಕ್ಕೇ ಬೆಂಬಲ: ಬ್ರಹ್ಮಾನಂದರೆಡ್ಡಿ ಅವರಲ್ಲಿ ಆಂಧ್ರ ಕಾಂಗ್ರೆಸ್ ಶಾಸಕರ ವಿಶ್ವಾಸ</strong></p>.<p><strong>ಹೈದರಾಬಾದ್, ಜುಲೈ6</strong>– ಆಂಧ್ರ ಪ್ರದೇಶದ ಶಾಸನಸಭಾ ಕಾಂಗ್ರೆಸ್ ಪಕ್ಷವು ಇಂದು ಇಲ್ಲಿ ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿ ಅವರಲ್ಲಿ ಸರ್ವಾನುಮತದಿಂದ ತನ್ನ ಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿತು.</p>.<p>ರಾಜ್ಯದಲ್ಲಿ ಮತ್ತೆ ಮಾಮೂಲಿನ ಪರಿಸ್ಥಿತಿ ಉಂಟಾಗುವತನಕ ಮುಖ್ಯಮಂತ್ರಿ ಪದವಿಯಲ್ಲೇ ಮುಂದುವರಿದು ಅಂತಿಮವಾಗಿ ತೆಲಂಗಾಣ ಪ್ರದೇಶದವರೊಬ್ಬರು ನಾಯಕತ್ವವನ್ನು ವಹಿಸಿಕೊಳ್ಳುವಂತೆ ದಾರಿ ಮಾಡಿಕೊಡಬೇಕೆಂದೂ ಶ್ರೀ ಬ್ರಹ್ಮಾನಂದರೆಡ್ಡಿ ಅವರನ್ನು ಕೋರಿಕೊಳ್ಳಲಾಯಿತು.</p>.<p>ಸೈನಿಕ ಸಾಮಗ್ರಿಯಿದ್ದ ಗೂಡ್ಸ್ಟ್ರೈನ್ ಲೂಟಿ: ಇಬ್ಬರ ಬಂಧನ</p>.<p>ಕಲ್ಕತ್ತ, ಜುಲೈ 6– ಪೂರ್ವ ರೈಲ್ವೆಯ ರಾಣಿಗಂಜ್ ಮತ್ತು ಬೈಕ್ತನಗೋರ ಛಲು ನಿಲ್ದಾಣಗಳ ನಡುವೆ ಸೈನಿಕ ಸಾಮಗ್ರಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ಮಿಲಿಟರಿ ಗೂಡ್ಸ್ ಟ್ರೈನೊಂದನ್ನು ಗುರುತಿಸಿದ ವ್ಯಕ್ತಿಗಳು ಇಂದು ಬೆಳಿಗ್ಗೆ ಲೂಟಿ ಮಾಡಿದರು ಎಂದು ಇಲ್ಲಿಯ ಸೈನ್ಯದ ಕಚೇರಿಗೆ ವರದಿ ಬಂದಿದೆ.</p>.<p>ರೈಲ್ವೆ ಹಾದಿಯ ಮೇಲೆ ದೊಡ್ಡ ಕಲ್ಲುಗಳನ್ನಿಟ್ಟು ಟ್ರೈನನ್ನ ನಿಲ್ಲಿಸಿ ಅವರು ಲೂಟಿ ಮಾಡಿದರೆಂದೂ ಹೇಳಲಾಗಿದೆ.</p>.<p><strong>ರಾಜ್ಯ ಇಬ್ಭಾಗವಾಗುವುದನ್ನು ತಾವು ವಿರೋಧಿಸುವುದಾಗಿ ಸಚಿವ ಶ್ರೀ ಬಿ. ರಾಚಯ್ಯ</strong></p>.<p><strong>ಮೈಸೂರು, ಜುಲೈ 6–</strong> ರಾಜ್ಯದ ಯಾವುದಾದರೊಂದು ಪ್ರದೇಶ ಅಥವಾ ಒಂದು ಪಂಗಡಕ್ಕೆ ಅನ್ಯಾಯವಾಗಿದ್ದರೆ ಅದರ ನಿವಾರಣೆಗಾಗಿ ತಾವು ಹೋರಾಟ ಮಾಡಲು ಸಿದ್ಧವಿರುವುದಾಗಿಯೂ ಆದರೆ ಮೈಸೂರು ಎರಡು ರಾಜ್ಯವಾಗುವುದನ್ನು ತಾವು ಖಂಡಿತಾ ಒಪ್ಪುವುದಿಲ್ಲವೆಂದೂ ರಾಜ್ಯದ ವ್ಯವಸಾಯ ಸಚಿವ ಶ್ರೀ ಬಿ. ರಾಚಯ್ಯನವರು ಇಂದು ಇಲ್ಲಿ ಘೋಷಿಸಿದರು.</p>.<p><strong>ಈಗಲ್ – ಚಂದ್ರನಲ್ಲಿ ಇಳಿವ ಮಾನವ ಸಹಿತನೌಕೆ</strong></p>.<p><strong>ಹೂಸ್ಟನ್, ಜುಲೈ 6–</strong> ಚಂದ್ರಗ್ರಹದಲ್ಲಿ ಮಾನವಸಹಿತ ಇಳಿಯುವ ಮೊದಲ ಬಾಹ್ಯಾಕಾಶ ನೌಕೆಯ ಹೆಸರು ‘ಈಗಲ್’ ಚಂದ್ರ ಗ್ರಹದ ಸುತ್ತ ಕಕ್ಷಾಪಥದಲ್ಲಿ ಸಂಚರಿಸುವ ಸಹ ನೌಕೆಯ ಹೆಸರು ‘ಕೊಲಂಬಿಯಾ’.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>