<p><strong>ಖಾಸಗಿಯವರಿಗೆ ಮಂಡ್ಯ ಕಾಗದ ಕಾರ್ಖಾನೆ: ಪರಿಶೀಲನೆಯಲ್ಲಿ<br />ಬೆಂಗಳೂರು, ಮಾರ್ಚ್ 9:</strong> ಆರಂಭವಾದ ಅಂದಿನಿಂದ ನಷ್ಟದಲ್ಲಿ ನಡೆಯುತ್ತಿರುವ ಮಂಡ್ಯ ನ್ಯಾಷನಲ್ ಕಾಗದ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ವಿಚಾರವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಕೈಗಾರಿಕಾ ಸಚಿವ ಎಂ. ರಾಜಶೇಖರ ಮೂರ್ತಿ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p>.<p><strong>ಗಡಿ ವಿವಾದ: ಪಾಟೀಲ್ಗೆ ಪ್ರಧಾನಿ ಪತ್ರ<br />ಬೆಂಗಳೂರು, ಮಾರ್ಚ್ 9</strong>: ಮೈಸೂರು–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಈಚೆಗೆ ದೆಹಲಿಯಿಂದ ಅಧಿಕಾರಿಗಳು ತಂದ ಸೂಚನೆಗಳು ‘ಬರೇ ತಾತ್ಕಾಲಿಕವಾದವು’ ಎಂದು ಪ್ರಧಾನಿಯವರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.</p>.<p>ಈ ಪ್ರಶ್ನೆಯ ಬಗ್ಗೆ ಚರ್ಚಿಸಲು ದೆಹಲಿಗೆ ಬರುವಂತೆ ಶ್ರೀಮತಿ ಇಂದಿರಾ ಗಾಂಧಿಯವರು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದಾರೆ. ನಿನ್ನೆ ಬೆಂಗಳೂರಿಗೆ ತಲುಪಿದ ಈ ಪತ್ರಕ್ಕೆ ಒಂದೆರಡು ದಿನಗಳಲ್ಲಿ ಶ್ರೀ ಪಾಟೀಲರು ಉತ್ತರ ಬರೆಯಲಿದ್ದಾರೆ.</p>.<p>ಮಹಾಜನ್ ಶಿಫಾರಸು ಶೀಘ್ರ ಜಾರಿಗೆ ಚವಾಣರಿಗೆ ರಾಜ್ಯ ಶಾಸಕರ ಪ್ರಬಲ ಒತ್ತಾಯ</p>.<p>ನವದೆಹಲಿ, ಮಾರ್ಚ್ 9: ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಹಾಜನ್ ಆಯೋಗದ ಶಿಫಾರಸುಗಳನ್ನು ಶೀಘ್ರವೇ ಜಾರಿಗೆ ತರಬೇಕೆಂದು ಮೈಸೂರು ರಾಜ್ಯದ 16 ಮಂದಿ ಶಾಸಕರ ನಿಯೋಗವು ಇಂದು ಮಧ್ಯಾಹ್ನ ಪ್ರಬಲವಾಗಿ ವಾದಿಸಿದ್ದನ್ನು ಕೇಂದ್ರ ಗೃಹಮಂತ್ರಿ ಶ್ರೀ ವೈ.ಬಿ. ಚವಾಣ್ ಆಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾಸಗಿಯವರಿಗೆ ಮಂಡ್ಯ ಕಾಗದ ಕಾರ್ಖಾನೆ: ಪರಿಶೀಲನೆಯಲ್ಲಿ<br />ಬೆಂಗಳೂರು, ಮಾರ್ಚ್ 9:</strong> ಆರಂಭವಾದ ಅಂದಿನಿಂದ ನಷ್ಟದಲ್ಲಿ ನಡೆಯುತ್ತಿರುವ ಮಂಡ್ಯ ನ್ಯಾಷನಲ್ ಕಾಗದ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ವಿಚಾರವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಕೈಗಾರಿಕಾ ಸಚಿವ ಎಂ. ರಾಜಶೇಖರ ಮೂರ್ತಿ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.</p>.<p><strong>ಗಡಿ ವಿವಾದ: ಪಾಟೀಲ್ಗೆ ಪ್ರಧಾನಿ ಪತ್ರ<br />ಬೆಂಗಳೂರು, ಮಾರ್ಚ್ 9</strong>: ಮೈಸೂರು–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಈಚೆಗೆ ದೆಹಲಿಯಿಂದ ಅಧಿಕಾರಿಗಳು ತಂದ ಸೂಚನೆಗಳು ‘ಬರೇ ತಾತ್ಕಾಲಿಕವಾದವು’ ಎಂದು ಪ್ರಧಾನಿಯವರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.</p>.<p>ಈ ಪ್ರಶ್ನೆಯ ಬಗ್ಗೆ ಚರ್ಚಿಸಲು ದೆಹಲಿಗೆ ಬರುವಂತೆ ಶ್ರೀಮತಿ ಇಂದಿರಾ ಗಾಂಧಿಯವರು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದಾರೆ. ನಿನ್ನೆ ಬೆಂಗಳೂರಿಗೆ ತಲುಪಿದ ಈ ಪತ್ರಕ್ಕೆ ಒಂದೆರಡು ದಿನಗಳಲ್ಲಿ ಶ್ರೀ ಪಾಟೀಲರು ಉತ್ತರ ಬರೆಯಲಿದ್ದಾರೆ.</p>.<p>ಮಹಾಜನ್ ಶಿಫಾರಸು ಶೀಘ್ರ ಜಾರಿಗೆ ಚವಾಣರಿಗೆ ರಾಜ್ಯ ಶಾಸಕರ ಪ್ರಬಲ ಒತ್ತಾಯ</p>.<p>ನವದೆಹಲಿ, ಮಾರ್ಚ್ 9: ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಮಹಾಜನ್ ಆಯೋಗದ ಶಿಫಾರಸುಗಳನ್ನು ಶೀಘ್ರವೇ ಜಾರಿಗೆ ತರಬೇಕೆಂದು ಮೈಸೂರು ರಾಜ್ಯದ 16 ಮಂದಿ ಶಾಸಕರ ನಿಯೋಗವು ಇಂದು ಮಧ್ಯಾಹ್ನ ಪ್ರಬಲವಾಗಿ ವಾದಿಸಿದ್ದನ್ನು ಕೇಂದ್ರ ಗೃಹಮಂತ್ರಿ ಶ್ರೀ ವೈ.ಬಿ. ಚವಾಣ್ ಆಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>