ಬೆಂಗಳೂರು, ಏ. 18– ಮೈಸೂರು ಹಾಗೂ ಮಹಾರಾಷ್ಟ್ರ ಗಡಿ ವಿವಾದವನ್ನು ಏಕ ಸದಸ್ಯ ಆಯೋಗದ ಮೂಲಕ ಅಂತಿಮವಾಗಿ ನಿರ್ಧರಿಸಬೇಕೆಂಬ 1967ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯಕ್ಕೆ ಪ್ರಧಾನಿ ಹಾಗೂ ಗೃಹ ಸಚಿವ ಶ್ರೀ ಚವಾಣರೂ ಬದ್ಧರೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಹೇಳಿದರು. ಬೆಳಗಾವಿಯನ್ನು ವಿಭಜಿಸುವುದು ‘ಮೂರ್ಖತನ’ ಎಂದು ಟೀಕಿಸಿದರು.