ಆಂಧ್ರ, ಕೇರಳ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಭೂಸಮಸ್ಯೆಗಳು ನಕ್ಸಲೀಯ ಚಳವಳಿಗೆ ಸಂಬಂಧಿಸಿದಂತಿವೆ. ಮೈಸೂರು ರಾಜ್ಯದಲ್ಲಿ ನಕ್ಸಲೀಯರ
ಸಮಸ್ಯೆ ಇಲ್ಲ. ಆದರೂ ಕೇರಳದಿಂದ ನಕ್ಸಲೀಯರ ಅತಿಕ್ರಮಣವನ್ನು ತಡೆಯಲು ಕೇರಳ ಗಡಿಯಲ್ಲಿ ಬಲವಾದ ಸಶಸ್ತ್ರ ಪೊಲೀಸ್ ಕಾವಲು ಹಾಕಲಾಗಿದೆ. ಬೆಂಗಳೂರಿನಲ್ಲಿ ಮಾವೊ ಭಿತ್ತಿಪತ್ರಗಳನ್ನು ಅಂಟಿಸಿದ ಪ್ರಕರಣ ಬಿಟ್ಟರೆ ಬೇರಾವ ಮಹತ್ವದ ಘಟನೆಯೂ ಇಲ್ಲ.