ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ| ಸೋಮವಾರ, 11–5–1970

Last Updated 10 ಮೇ 2020, 16:17 IST
ಅಕ್ಷರ ಗಾತ್ರ

ಕರಾವಳಿ ಪ್ರದೇಶದಲ್ಲಿ ನಕ್ಸಲೀಯ ಚಟುವಟಿಕೆ

ನವದೆಹಲಿ, ಮೇ 10– ಭತ್ತದ ಕಣಜಗಳಾದ ಕರಾವಳಿ ಪ್ರದೇಶಗಳಲ್ಲಿ ಭೂವಿಹೀನರು ಮತ್ತು ಯುವ ಜನಾಂಗದಲ್ಲಿ ನಕ್ಸಲೀಯ ಚಳವಳಿ ಹೆಚ್ಚು ವ್ಯಾಪಕವಾಗುತ್ತಿದೆ.

ಆಂಧ್ರ, ಕೇರಳ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಭೂಸಮಸ್ಯೆಗಳು ನಕ್ಸಲೀಯ ಚಳವಳಿಗೆ ಸಂಬಂಧಿಸಿದಂತಿವೆ. ಮೈಸೂರು ರಾಜ್ಯದಲ್ಲಿ ನಕ್ಸಲೀಯರ
ಸಮಸ್ಯೆ ಇಲ್ಲ. ಆದರೂ ಕೇರಳದಿಂದ ನಕ್ಸಲೀಯರ ಅತಿಕ್ರಮಣವನ್ನು ತಡೆಯಲು ಕೇರಳ ಗಡಿಯಲ್ಲಿ ಬಲವಾದ ಸಶಸ್ತ್ರ ಪೊಲೀಸ್‌ ಕಾವಲು ಹಾಕಲಾಗಿದೆ. ಬೆಂಗಳೂರಿನಲ್ಲಿ ಮಾವೊ ಭಿತ್ತಿಪತ್ರಗಳನ್ನು ಅಂಟಿಸಿದ ಪ್ರಕರಣ ಬಿಟ್ಟರೆ ಬೇರಾವ ಮಹತ್ವದ ಘಟನೆಯೂ ಇಲ್ಲ.‌

ಹಿಂದಿ ಮಾಧ್ಯಮ ವಾರ್ಸಿಟಿಯಿಂದ ಕನ್ನಡದ ಪ್ರಗತಿಗೆ ವಿಪತ್ತು: ವಿರೋ ಧಿಸಲು ಜನತೆಗೆ ಕರೆ

ಮೈಸೂರು, ಮೇ 10– ಬೆಂಗಳೂರಿನಲ್ಲಿ ಕೇಂದ್ರದ ಹಿಂದಿ ಮಾಧ್ಯಮದ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನಡೆದಿದೆಯೆಂದು ಹೇಳಲಾಗಿರುವ ಪ್ರಯತ್ನ ಹಿಂದಿಯೇತರರ ಮೇಲೆ ಹಿಂದಿ ಸಾಮ್ರಾಜ್ಯ ಶಾಹಿಯನ್ನು ಹೇರಲು ನಡೆದಿರುವ ಮೋಸದ ಯತ್ನವೆಂದು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಡೈರೆಕ್ಟರ್‌ ಡಾ. ಹಾ.ಮಾ.ನಾಯಕ್‌ ಅವರು ಇಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT