<p><strong>30 ಸಂಪುಟಗಳಲ್ಲಿ ವಿಷಯ ಅನುಕ್ರಮವಾದ ಕನ್ನಡ ವಿಶ್ವಕೋಶ</strong></p>.<p><strong>ಬೆಂಗಳೂರು, ಮೇ 15– </strong>90 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿಷಯಗಳಿಗೆ ಅನುಕ್ರಮವಾಗಿರುವ ನೂತನ ರೀತಿಯ ಕನ್ನಡ ವಿಶ್ವಕೋಶ ರಚಿಸಲು ಸರ್ಕಾರ ಇಂದು ನಿರ್ಧಾರ ಕೈಗೊಂಡಿತು.</p>.<p>ಈಗಾಗಲೇ ಸಾರ್ವತ್ರಿಕ ಉಪಯೋಗಗಳಿಗೆ ಸಂಬಂಧಿಸಿದ ವಿಶ್ವಕೋಶವನ್ನು ಸಿದ್ಧಪಡಿಸುತ್ತಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಈ ಕಾರ್ಯವನ್ನೂ ವಹಿಸಿಕೊಡಲಾಗುವುದು.</p>.<p>ಒಟ್ಟು 30 ಸಂಪುಟಗಳನ್ನು ಸಿದ್ಧಗೊಳಿಸಲು ಬೇಕಾಗುವ ಅವಧಿ 15 ವರ್ಷಗಳು. ಸರ್ಕಾರವು ಪ್ರತೀ ವರ್ಷ 4 ಲಕ್ಷ ರೂಪಾಯಿಗಳಂತೆ ಒಟ್ಟು 60 ಲಕ್ಷ ರೂಪಾಯಿಗಳ ಗ್ರ್ಯಾಂಟು ಕೊಡುವುದು. ಉಳಿದ 30 ಲಕ್ಷ ರೂಪಾಯಿಗಳನ್ನು ವಿಶ್ವವಿದ್ಯಾಲಯ ಹೊಂದಿಸಿಕೊಳ್ಳಬೇಕಾಗುವುದು.</p>.<p><strong>ಮಂಗಳೂರು– ಮುಂಬೈ ರೈಲ್ವೆಗೆ ಸರ್ವೆ</strong></p>.<p><strong>ಬೆಂಗಳೂರು, ಮೇ 15– </strong>ಮುಂಬೈನಿಂದ ಮಂಗಳೂರಿಗೆ ಪಶ್ಚಿಮ ಕರಾವಳಿ ರೈಲು ಮಾರ್ಗ ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಸರ್ವೆ ನಡೆಸಲು ತೀರ್ಮಾನಿಸಿದೆ.</p>.<p>ಬ್ರಾಡ್ಗೇಜ್ ಮಾರ್ಗ ನಿರ್ಮಾಣದ ಈ ಸರ್ವೆಗೆ 22 ಲಕ್ಷ ರೂಪಾಯಿ ಖರ್ಚಾಗುವುದೆಂದು ಅಂದಾಜು ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>30 ಸಂಪುಟಗಳಲ್ಲಿ ವಿಷಯ ಅನುಕ್ರಮವಾದ ಕನ್ನಡ ವಿಶ್ವಕೋಶ</strong></p>.<p><strong>ಬೆಂಗಳೂರು, ಮೇ 15– </strong>90 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿಷಯಗಳಿಗೆ ಅನುಕ್ರಮವಾಗಿರುವ ನೂತನ ರೀತಿಯ ಕನ್ನಡ ವಿಶ್ವಕೋಶ ರಚಿಸಲು ಸರ್ಕಾರ ಇಂದು ನಿರ್ಧಾರ ಕೈಗೊಂಡಿತು.</p>.<p>ಈಗಾಗಲೇ ಸಾರ್ವತ್ರಿಕ ಉಪಯೋಗಗಳಿಗೆ ಸಂಬಂಧಿಸಿದ ವಿಶ್ವಕೋಶವನ್ನು ಸಿದ್ಧಪಡಿಸುತ್ತಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಈ ಕಾರ್ಯವನ್ನೂ ವಹಿಸಿಕೊಡಲಾಗುವುದು.</p>.<p>ಒಟ್ಟು 30 ಸಂಪುಟಗಳನ್ನು ಸಿದ್ಧಗೊಳಿಸಲು ಬೇಕಾಗುವ ಅವಧಿ 15 ವರ್ಷಗಳು. ಸರ್ಕಾರವು ಪ್ರತೀ ವರ್ಷ 4 ಲಕ್ಷ ರೂಪಾಯಿಗಳಂತೆ ಒಟ್ಟು 60 ಲಕ್ಷ ರೂಪಾಯಿಗಳ ಗ್ರ್ಯಾಂಟು ಕೊಡುವುದು. ಉಳಿದ 30 ಲಕ್ಷ ರೂಪಾಯಿಗಳನ್ನು ವಿಶ್ವವಿದ್ಯಾಲಯ ಹೊಂದಿಸಿಕೊಳ್ಳಬೇಕಾಗುವುದು.</p>.<p><strong>ಮಂಗಳೂರು– ಮುಂಬೈ ರೈಲ್ವೆಗೆ ಸರ್ವೆ</strong></p>.<p><strong>ಬೆಂಗಳೂರು, ಮೇ 15– </strong>ಮುಂಬೈನಿಂದ ಮಂಗಳೂರಿಗೆ ಪಶ್ಚಿಮ ಕರಾವಳಿ ರೈಲು ಮಾರ್ಗ ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಸರ್ವೆ ನಡೆಸಲು ತೀರ್ಮಾನಿಸಿದೆ.</p>.<p>ಬ್ರಾಡ್ಗೇಜ್ ಮಾರ್ಗ ನಿರ್ಮಾಣದ ಈ ಸರ್ವೆಗೆ 22 ಲಕ್ಷ ರೂಪಾಯಿ ಖರ್ಚಾಗುವುದೆಂದು ಅಂದಾಜು ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>