‘ಅನಗತ್ಯ ಅವಸರದ ಕಾರಣ ಭಾರತದಲ್ಲಿ ಶಿಕ್ಷಣ ಯೋಜನೆಗೆ ಪೆಟ್ಟು’
ಬಳ್ಳಾರಿ, ಜೂನ್ 3– ‘ಹೊಸ ಅಭಿಪ್ರಾಯ ಅಥವಾ ಯೋಜನೆಗಳ ಬಗ್ಗೆ ಮೊದಲು ಪ್ರಯೋಗ ನಡೆಸಿ, ಅನುಭವ ಪಡೆದು, ಅವಕ್ಕೆ ಕಾರ್ಯಸಾಧ್ಯವಾಗುವಂತಹ ರೂಪ ಕೊಟ್ಟು, ಆಮೇಲೆ ಅವನ್ನು ಜಾರಿಗೆ ತರುವ ಬದಲು, ಅನಗತ್ಯ ಅವಸರದಿಂದ ಅವನ್ನು ಜಾರಿಗೆ ತಂದ ಕಾರಣ, ಭಾರತದಲ್ಲಿ ಶಿಕ್ಷಣ ಯೋಜನೆಗಳಿಗೆ ಪೆಟ್ಟು ಬಿದ್ದಿದೆ ಎಂದು ಕೇಂದ್ರದ ಶಿಕ್ಷಣ ಸಚಿವ ಡಾ. ವಿ.ಕೆ.ಆರ್.ವಿ. ರಾವ್
ಅವರು ಇಂದು ಇಲ್ಲಿ ಹೇಳಿದರು.