ನವದೆಹಲಿ, ಆ. 24– ಹಿಂದುಳಿದ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗುವಂತೆ ವರಮಾನ ತರುವ ರಾಜ್ಯಗಳ ಪಾಲಿನಲ್ಲಿ ಜನಸಂಖ್ಯೆ ಆಧಾರದ ಮೇಲೆ ಶೇ. 90ರಷ್ಟನ್ನು ಹಂಚಬೇಕೆಂದು ಐದನೇ ಹಣಕಾಸು ಆಯೋಗದ ಶಿಫಾರಸು ಮಾಡಿದೆ. ಮೈಸೂರು ರಾಜ್ಯಕ್ಕೆ 4ನೇ ಆಯೋಗದ ಅವಧಿಯಲ್ಲಿ ದೊರತಿದ್ದಕ್ಕಿಂತ 18 ಕೋಟಿ ರೂ. ಕಡಿಮೆಯಾಗಿ, 197.42 ಕೋಟಿ ರೂ.ಗಳಿಗೆ ಇಳಿಯುತ್ತದೆ.