<p><strong>ನಿರ್ದಿಷ್ಟ ಅವಧಿಯೊಳಗೆ ಗಡಿ ವಿವಾದ ಇತ್ಯರ್ಥಕ್ಕೆ ಬಾಲ್ ಠಕ್ರೆ ಮನವಿ</strong></p>.<p><strong>ಮುಂಬೈ, ಫೆ. 8–</strong> ಮಹಾರಾಷ್ಟ್ರ ಮತ್ತು ಮೈಸೂರು ನಡುವಣ ಗಡಿ ವಿವಾದವನ್ನು ‘ನಿರ್ದಿಷ್ಟ ಅವಧಿ’ ಒಳಗೆ ಇತ್ಯರ್ಥಗೊಳಿಸಬೇಕೆಂದು ಶಿವಸೇನ ಮುಖ್ಯಸ್ಥರಾದ ಶ್ರೀ ಬಾಲ್ ಠಕ್ರೆ ಅವರು ಉಪ ಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯ್ ಅವರಿಗೆ ಬರೆದಿರುವ ಪತ್ರವೊಂದರಲ್ಲಿ ಮನವಿ ಮಾಡಿಕೊಂಡಿದ್ದಾರೆ.</p>.<p><strong>ವಿದ್ಯಾರ್ಥಿಗಳಲ್ಲಿ ಸರಿಯಾದ ಮೌಲ್ಯಗಳ ನಿರೂಪಣೆಗೆ ಕರೆ</strong></p>.<p><strong>ಬೆಳಗಾವಿ, ಫೆ. 8– </strong>ವಿದ್ಯಾರ್ಥಿಗಳು ಶಿಸ್ತಿನಿಂದ ಕೂಡಿ, ಸತ್ಯದಲ್ಲಿ ನಿಷ್ಠೆಯುಳ್ಳವರಾಗಿ ಬಾಳುವಂತೆ ಮಾಡಲು ಅವರಲ್ಲಿ ಸರಿಯಾದ ಮೌಲ್ಯಗಳನ್ನು ರೂಪಿಸುವುದು ಅಗತ್ಯವೆಂದು ಕೇಂದ್ರದ ಉಪಪ್ರಧಾನಿ ಶ್ರೀ ಮುರಾರ್ಜಿ ದೇಸಾಯಿ ಅವರು ಇಂದು ಇಲ್ಲಿ ಒತ್ತಿ ಹೇಳಿದರು.</p>.<p>ಉಪಪ್ರಧಾನಿಗಳು ಕರ್ನಾಟಕ ಲಿಬರಲ್ ಎಜುಕೇಷನ್ ಸೊಸೈಟಿಯ ಸುವರ್ಣ ಮಹೋತ್ಸವವನ್ನು ಉದ್ಘಾಟಿಸುತ್ತಾ, ನಮ್ಮ ತರುಣ ತರುಣಿಯರು ಸರಿ ತಪ್ಪುಗಳತಾರತಮ್ಯವನ್ನು ಅರಿಯುವಂತೆ ಮಾಡುವುದೇ ಶಿಕ್ಷಣದ ಉದ್ದೇಶ ಎಂದರು.</p>.<p>‘ವಿವೇಕ’ ಎಂದರೇನೆಂಬುದನ್ನು ಅವರು ಅರ್ಥಮಾಡಿಕೊಳ್ಳುವಂತೆ ಮಾಡಬೇಕೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿರ್ದಿಷ್ಟ ಅವಧಿಯೊಳಗೆ ಗಡಿ ವಿವಾದ ಇತ್ಯರ್ಥಕ್ಕೆ ಬಾಲ್ ಠಕ್ರೆ ಮನವಿ</strong></p>.<p><strong>ಮುಂಬೈ, ಫೆ. 8–</strong> ಮಹಾರಾಷ್ಟ್ರ ಮತ್ತು ಮೈಸೂರು ನಡುವಣ ಗಡಿ ವಿವಾದವನ್ನು ‘ನಿರ್ದಿಷ್ಟ ಅವಧಿ’ ಒಳಗೆ ಇತ್ಯರ್ಥಗೊಳಿಸಬೇಕೆಂದು ಶಿವಸೇನ ಮುಖ್ಯಸ್ಥರಾದ ಶ್ರೀ ಬಾಲ್ ಠಕ್ರೆ ಅವರು ಉಪ ಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯ್ ಅವರಿಗೆ ಬರೆದಿರುವ ಪತ್ರವೊಂದರಲ್ಲಿ ಮನವಿ ಮಾಡಿಕೊಂಡಿದ್ದಾರೆ.</p>.<p><strong>ವಿದ್ಯಾರ್ಥಿಗಳಲ್ಲಿ ಸರಿಯಾದ ಮೌಲ್ಯಗಳ ನಿರೂಪಣೆಗೆ ಕರೆ</strong></p>.<p><strong>ಬೆಳಗಾವಿ, ಫೆ. 8– </strong>ವಿದ್ಯಾರ್ಥಿಗಳು ಶಿಸ್ತಿನಿಂದ ಕೂಡಿ, ಸತ್ಯದಲ್ಲಿ ನಿಷ್ಠೆಯುಳ್ಳವರಾಗಿ ಬಾಳುವಂತೆ ಮಾಡಲು ಅವರಲ್ಲಿ ಸರಿಯಾದ ಮೌಲ್ಯಗಳನ್ನು ರೂಪಿಸುವುದು ಅಗತ್ಯವೆಂದು ಕೇಂದ್ರದ ಉಪಪ್ರಧಾನಿ ಶ್ರೀ ಮುರಾರ್ಜಿ ದೇಸಾಯಿ ಅವರು ಇಂದು ಇಲ್ಲಿ ಒತ್ತಿ ಹೇಳಿದರು.</p>.<p>ಉಪಪ್ರಧಾನಿಗಳು ಕರ್ನಾಟಕ ಲಿಬರಲ್ ಎಜುಕೇಷನ್ ಸೊಸೈಟಿಯ ಸುವರ್ಣ ಮಹೋತ್ಸವವನ್ನು ಉದ್ಘಾಟಿಸುತ್ತಾ, ನಮ್ಮ ತರುಣ ತರುಣಿಯರು ಸರಿ ತಪ್ಪುಗಳತಾರತಮ್ಯವನ್ನು ಅರಿಯುವಂತೆ ಮಾಡುವುದೇ ಶಿಕ್ಷಣದ ಉದ್ದೇಶ ಎಂದರು.</p>.<p>‘ವಿವೇಕ’ ಎಂದರೇನೆಂಬುದನ್ನು ಅವರು ಅರ್ಥಮಾಡಿಕೊಳ್ಳುವಂತೆ ಮಾಡಬೇಕೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>