ಡೆಹರಾಡೂನ್, ಜುಲೈ 22– ಜೋಷಿಮಠ ಮತ್ತು ಚಮೋಲಿ ನಡುವಣ ಬೇಲಾಕುಚಿ ಬಳಿ ಅಲಕನಂದಾ ನದಿಯ ತುಂಬು ಪ್ರವಾಹದಲ್ಲಿ ಮಂಗಳವಾರ 24 ವಾಹನಗಳು ಕೊಚ್ಚಿ ಹೋಗಿ, ಬದರೀನಾಥ್ನಿಂದ ಹಿಂದಿರುಗುತ್ತಿದ್ದ 400 ಮಂದಿ ಯಾತ್ರಿಕರೂ ಸೇರಿ ಒಟ್ಟು 600 ಮಂದಿ ನೀರಿನಪಾಲಾಗಿರುವರೆಂದು ಶಂಕಿಸಲಾಗಿದೆ.
ಗಢ್ವಾಲ್ನ ಶ್ರೀನಗರದ ಬಳಿ ಗಾಯತ್ರಿ ದೇವಾಲಯದ ಸಮೀಪದಲ್ಲಿ ಹರಿಯುವ ನದಿಯಲ್ಲಿ ಅನೇಕ ದೇಹಗಳು ತೇಲಾಡುತ್ತಿದ್ದುದು ಕಂಡುಬಂದಿತೆಂದು ವರದಿಯಾಗಿದೆ.
ದೇಶದ ಎಲ್ಲ ಭಾಗಗಳಿಂದಲೂ ಯಾತ್ರಿಕರನ್ನು ಆಕರ್ಷಿಸುವ ದೇವಾಲಯಗಳನ್ನು ಸುತ್ತುವರಿದ ಪರ್ವತ ಪ್ರದೇಶದಲ್ಲಿ ಸಂಭವಿಸಿದ ದುರಂತಗಳಲ್ಲಿ ಇದೇ ಅತ್ಯಂತ ದೊಡ್ಡದು.
ಭಾರತ ರಕ್ಷಿಸಿ ಕರೆಗೆ ಡಿಎಂಕೆ ಒಪ್ಪಿಗೆ ಸದ್ಯಕ್ಕಿಲ್ಲ
ಮದ್ರಾಸ್, ಜುಲೈ 22– ‘ಭಾರತವನ್ನು ರಕ್ಷಿಸಿ’ ಎಂಬ ಸಂಸ್ಥಾ ಕಾಂಗ್ರೆಸ್ಸಿನ ಕರೆಯನ್ನು ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂನ ಅಧ್ಯಕ್ಷ ಶ್ರೀ ಎಂ.ಕರುಣಾನಿಧಿ ಅವರು ‘ಸದ್ಯಕ್ಕೆ’ ತಿರಸ್ಕರಿಸಿದ್ದಾರೆ.
ವಾಸ್ತವವಾಗಿ ಸಂಸ್ಥಾ ಕಾಂಗ್ರೆಸ್ಸಿನ ಈ ಕರೆಯು ಕೇಂದ್ರದಲ್ಲಿನ ಶ್ರೀಮತಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರವನ್ನು ಉರುಳಿಸಲು ನಿರ್ದೇಶಿತವಾಗಿದೆ ಎಂದು ಅವರು ಭಾವಿಸಿದ್ದಾರೆ.