<p><strong>ಕೇಂದ್ರಕ್ಕೆ ಕೆಂಗಲ್, ಕೃಷ್ಣಪ್ಪ? ಮಂಗಳವಾರ 16-6-1970</strong></p>.<p>ನವದೆಹಲಿ, ಜೂನ್ 15– ಕೇಂದ್ರ ಸಂಪುಟದ ಪುನರ್ರಚನೆ ಬಗೆಗೆ ಪ್ರಧಾನಿ ಇಂದಿರಾ ಗಾಂಧಿಯವರು ಇನ್ನು<br />ನಾಲ್ಕೈದು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.</p>.<p>ಈ ಬಾರಿಯ ಪುನರ್ರಚನೆಯಲ್ಲಿ ದಕ್ಷಿಣ ಭಾರತಕ್ಕೆ, ಅದರಲ್ಲೂ ಮೈಸೂರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಅಪೇಕ್ಷೆ<br />ಪ್ರಧಾನಿಗಿದೆಯೆಂದು ತಿಳಿದುಬಂದಿದೆ.</p>.<p>ಮೈಸೂರಿನ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಲೋಕಸಭೆ ಸದಸ್ಯ ಶ್ರೀ ಎಂ.ವಿ. ಕೃಷ್ಣಪ್ಪನವರನ್ನೂ ಸ್ಟೇಟ್ ಸಚಿವರಾಗಿ ನೇಮಕ ಮಾಡುವ ಸೂಚನೆಗಳಿವೆ.</p>.<p>ನೇಮಕವಾಗಲಿದ್ದಾರೆಂದು ಕೇಳಿ ಬರುತ್ತಿರುವ ಅನೇಕ ಉಪಸಚಿವರುಗಳ ಹೆಸರಿನಲ್ಲಿ ‘ಯಂಗ್ ಟರ್ಕ್’ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಜಿತ್ ಯಾದವ್ರವರ ಹೆಸರೂ ಸೇರಿದೆ.</p>.<p><strong>ಚೀನಾದೊಡನೆ ಸದ್ಯಕ್ಕೆ ಬಾಂಧವ್ಯ ಸುಧಾರಣೆ ಲಕ್ಷಣಗಳಿಲ್ಲ: ಸ್ವರಣ್</strong></p>.<p>ನವದೆಹಲಿ, ಜೂನ್ 15– ರಾಷ್ಟ್ರದ ಪರಮಾಧಿಕಾರ ಮತ್ತು ಸಮಗ್ರತೆಯನ್ನು ಕಾಪಾಡುವ ಮೂಲಭೂತ ತತ್ವಗಳ ಚೌಕಟ್ಟಿನಲ್ಲಿ ಚೀನಾದೊಡನೆ ಶಾಂತಿ ಸಂಬಂಧ ಸಾಧ್ಯವಿದ್ದರೆ ಭಾರತ ಅದಕ್ಕೆ ಪ್ರಯತ್ನಿಸದಿರದೆಂದು ರಕ್ಷಣಾ ಸಚಿವ ಶ್ರೀ ಸ್ವರಣ್ ಸಿಂಗ್ ಇಂದು ಘೋಷಿಸಿದರು.</p>.<p>ಎಐಸಿಸಿ (ಆಡಳಿತ) ಅಧಿವೇಶನದಲ್ಲಿ ವಿದೇಶಾಂಗ ನೀತಿ ನಿರ್ಣಯ ಮಂಡಿಸಿ ಮಾತನಾಡಿದ ಶ್ರೀ ಸ್ವರಣ್ ಸಿಂಗ್ ಅವರು, ಆದರೆ ಉಭಯ ದೇಶಗಳ ನಡುವಣ ಬಾಂಧವ್ಯ ಸುಧಾರಿಸತೊಡಗುವ ಲಕ್ಷಣಗಳಿನ್ನೂ ಕಂಡುಬಂದಿಲ್ಲವೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೇಂದ್ರಕ್ಕೆ ಕೆಂಗಲ್, ಕೃಷ್ಣಪ್ಪ? ಮಂಗಳವಾರ 16-6-1970</strong></p>.<p>ನವದೆಹಲಿ, ಜೂನ್ 15– ಕೇಂದ್ರ ಸಂಪುಟದ ಪುನರ್ರಚನೆ ಬಗೆಗೆ ಪ್ರಧಾನಿ ಇಂದಿರಾ ಗಾಂಧಿಯವರು ಇನ್ನು<br />ನಾಲ್ಕೈದು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.</p>.<p>ಈ ಬಾರಿಯ ಪುನರ್ರಚನೆಯಲ್ಲಿ ದಕ್ಷಿಣ ಭಾರತಕ್ಕೆ, ಅದರಲ್ಲೂ ಮೈಸೂರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಅಪೇಕ್ಷೆ<br />ಪ್ರಧಾನಿಗಿದೆಯೆಂದು ತಿಳಿದುಬಂದಿದೆ.</p>.<p>ಮೈಸೂರಿನ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಲೋಕಸಭೆ ಸದಸ್ಯ ಶ್ರೀ ಎಂ.ವಿ. ಕೃಷ್ಣಪ್ಪನವರನ್ನೂ ಸ್ಟೇಟ್ ಸಚಿವರಾಗಿ ನೇಮಕ ಮಾಡುವ ಸೂಚನೆಗಳಿವೆ.</p>.<p>ನೇಮಕವಾಗಲಿದ್ದಾರೆಂದು ಕೇಳಿ ಬರುತ್ತಿರುವ ಅನೇಕ ಉಪಸಚಿವರುಗಳ ಹೆಸರಿನಲ್ಲಿ ‘ಯಂಗ್ ಟರ್ಕ್’ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಜಿತ್ ಯಾದವ್ರವರ ಹೆಸರೂ ಸೇರಿದೆ.</p>.<p><strong>ಚೀನಾದೊಡನೆ ಸದ್ಯಕ್ಕೆ ಬಾಂಧವ್ಯ ಸುಧಾರಣೆ ಲಕ್ಷಣಗಳಿಲ್ಲ: ಸ್ವರಣ್</strong></p>.<p>ನವದೆಹಲಿ, ಜೂನ್ 15– ರಾಷ್ಟ್ರದ ಪರಮಾಧಿಕಾರ ಮತ್ತು ಸಮಗ್ರತೆಯನ್ನು ಕಾಪಾಡುವ ಮೂಲಭೂತ ತತ್ವಗಳ ಚೌಕಟ್ಟಿನಲ್ಲಿ ಚೀನಾದೊಡನೆ ಶಾಂತಿ ಸಂಬಂಧ ಸಾಧ್ಯವಿದ್ದರೆ ಭಾರತ ಅದಕ್ಕೆ ಪ್ರಯತ್ನಿಸದಿರದೆಂದು ರಕ್ಷಣಾ ಸಚಿವ ಶ್ರೀ ಸ್ವರಣ್ ಸಿಂಗ್ ಇಂದು ಘೋಷಿಸಿದರು.</p>.<p>ಎಐಸಿಸಿ (ಆಡಳಿತ) ಅಧಿವೇಶನದಲ್ಲಿ ವಿದೇಶಾಂಗ ನೀತಿ ನಿರ್ಣಯ ಮಂಡಿಸಿ ಮಾತನಾಡಿದ ಶ್ರೀ ಸ್ವರಣ್ ಸಿಂಗ್ ಅವರು, ಆದರೆ ಉಭಯ ದೇಶಗಳ ನಡುವಣ ಬಾಂಧವ್ಯ ಸುಧಾರಿಸತೊಡಗುವ ಲಕ್ಷಣಗಳಿನ್ನೂ ಕಂಡುಬಂದಿಲ್ಲವೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>