<p><strong>ಗೋದಾವರಿ ದಂಡೆ ಐವತ್ತು ಗ್ರಾಮಗಳ ಮೇಲೆ ಉಗ್ರಗಾಮಿ ಕಮ್ಯುನಿಸ್ಟ್ ಹತೋಟಿ</strong></p>.<p><strong>ಖಮ್ಮಮ್, ಮಾ. 1– </strong>ಮೂವತ್ತು ಮಂದಿ ಉಗ್ರಗಾಮಿ ಕಮ್ಯುನಿಸ್ಟರ ತಂಡವೊಂದು ಶಸ್ತ್ರ ಸಜ್ಜಿತರಾಗಿ ವಾರಾಂಗಲ್ನಿಂದ ಖಮ್ಮಮ್ಗೆ ಪ್ರವೇಶಿಸಿ ಮೂಗೂರು ಮತ್ತು ವೆಂಕಟಪುರಂ ಫಿರ್ಕಾಗಳ ‘ಕೋಯಾ’ (ಗಿರಿಜನರ ತಾಂಡಾ)ಗಳನ್ನು ಬೆಂಬಲಿಸಿದರೆಂದು ವರದಿಯಾಗಿದೆ.</p>.<p>ಶ್ರೀಕಾಕುಳಂನ ಬಸ್ತಾರ್ ಮತ್ತು ಪಾರ್ವತಿಪುರಂ ನಕ್ಸಲೀಯರ ಜತೆ ಈ ಕಮ್ಯುನಿಸ್ಟರು ಸಂಬಂಧ ಹೊಂದಿದವರೆಂದು ಹೇಳಲಾಗಿದೆ.</p>.<p>ಕರೀಂನಗರ ಜಿಲ್ಲೆಯ ಮಹದೇವಪುರಂ ಅರಣ್ಯ ಪ್ರದೇಶದ ಗೋದಾವರಿ ದಂಡೆಯ ಮೇಲಿನ ಸುಮಾರು 50 ಗ್ರಾಮಗಳ ಮೇಲೆ ಈ ಕಮ್ಯುನಿಸ್ಟರು ಹತೋಟಿ ಸ್ಥಾಪಿಸಿದ್ದಾರೆಂದು ವರದಿಯಾಗಿದೆ.</p>.<p>ಕಮ್ಯುನಿಸ್ಟ್ ಪಿಡುಗನ್ನು ತಡೆಯಲು ಮಡೆಗು ಮತ್ತು ಪೆರೂರು ಗ್ರಾಮಗಳಲ್ಲಿ ಪೊಲೀಸ್ ಶಿಬಿರ ತೆರೆಯಲು ವೆಂಕಟಪುರಂ ವಾಸಿಗಳು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.</p>.<p><strong>ಪ್ರತ್ಯೇಕ ತೆಲಂಗಾಣ ರಚನೆಗೆ 8 ಮಂದಿ ಸಚಿವರ ವಿರೋಧ</strong></p>.<p><strong>ಹೈದರಾಬಾದ್, ಮಾ. 1–</strong> ಪ್ರತ್ಯೇಕ ತೆಲಂಗಾಣ ರಾಜ್ಯ ಬೇಕೆಂಬ ಬೇಡಿಕೆಯನ್ನು ಎಂಟು ಮಂದಿ ತೆಲಂಗಾಣ ಸಚಿವರು ಇಂದು ವಿರೋಧಿಸಿದರು.</p>.<p>ಪ್ರತ್ಯೇಕ ತೆಲಂಗಾಣ ಅಥವಾ ಪ್ರತ್ಯೇಕ ಆಂಧ್ರ ರಾಜ್ಯ ಬದುಕಲಾರದು. ಒಂದು ಪಕ್ಷ ಹಾಗೆ ಪ್ರತ್ಯೇಕ ರಾಜ್ಯವಾಗಿ ಬದುಕಿದರೂ ಅವು ಯಾವುದೂ ಪ್ರಕೃತಿ ದತ್ತವಾಗಿರುವ ಸಂಪನ್ಮೂಲವನ್ನು ಬಳಸಿಕೊಳ್ಳುವುದಕ್ಕೆ ಸಮರ್ಥವಾಗುವುದಿಲ್ಲ ಎಂದೂ ಅವರು ತಿಳಿಸಿದರು.</p>.<p>ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದ ರೆಡ್ಡಿ ಅವರ ಜೊತೆ ಚರ್ಚೆ ನಡೆಸಿದನಂತರ ಅವರು ಸಂಯುಕ್ತ ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋದಾವರಿ ದಂಡೆ ಐವತ್ತು ಗ್ರಾಮಗಳ ಮೇಲೆ ಉಗ್ರಗಾಮಿ ಕಮ್ಯುನಿಸ್ಟ್ ಹತೋಟಿ</strong></p>.<p><strong>ಖಮ್ಮಮ್, ಮಾ. 1– </strong>ಮೂವತ್ತು ಮಂದಿ ಉಗ್ರಗಾಮಿ ಕಮ್ಯುನಿಸ್ಟರ ತಂಡವೊಂದು ಶಸ್ತ್ರ ಸಜ್ಜಿತರಾಗಿ ವಾರಾಂಗಲ್ನಿಂದ ಖಮ್ಮಮ್ಗೆ ಪ್ರವೇಶಿಸಿ ಮೂಗೂರು ಮತ್ತು ವೆಂಕಟಪುರಂ ಫಿರ್ಕಾಗಳ ‘ಕೋಯಾ’ (ಗಿರಿಜನರ ತಾಂಡಾ)ಗಳನ್ನು ಬೆಂಬಲಿಸಿದರೆಂದು ವರದಿಯಾಗಿದೆ.</p>.<p>ಶ್ರೀಕಾಕುಳಂನ ಬಸ್ತಾರ್ ಮತ್ತು ಪಾರ್ವತಿಪುರಂ ನಕ್ಸಲೀಯರ ಜತೆ ಈ ಕಮ್ಯುನಿಸ್ಟರು ಸಂಬಂಧ ಹೊಂದಿದವರೆಂದು ಹೇಳಲಾಗಿದೆ.</p>.<p>ಕರೀಂನಗರ ಜಿಲ್ಲೆಯ ಮಹದೇವಪುರಂ ಅರಣ್ಯ ಪ್ರದೇಶದ ಗೋದಾವರಿ ದಂಡೆಯ ಮೇಲಿನ ಸುಮಾರು 50 ಗ್ರಾಮಗಳ ಮೇಲೆ ಈ ಕಮ್ಯುನಿಸ್ಟರು ಹತೋಟಿ ಸ್ಥಾಪಿಸಿದ್ದಾರೆಂದು ವರದಿಯಾಗಿದೆ.</p>.<p>ಕಮ್ಯುನಿಸ್ಟ್ ಪಿಡುಗನ್ನು ತಡೆಯಲು ಮಡೆಗು ಮತ್ತು ಪೆರೂರು ಗ್ರಾಮಗಳಲ್ಲಿ ಪೊಲೀಸ್ ಶಿಬಿರ ತೆರೆಯಲು ವೆಂಕಟಪುರಂ ವಾಸಿಗಳು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.</p>.<p><strong>ಪ್ರತ್ಯೇಕ ತೆಲಂಗಾಣ ರಚನೆಗೆ 8 ಮಂದಿ ಸಚಿವರ ವಿರೋಧ</strong></p>.<p><strong>ಹೈದರಾಬಾದ್, ಮಾ. 1–</strong> ಪ್ರತ್ಯೇಕ ತೆಲಂಗಾಣ ರಾಜ್ಯ ಬೇಕೆಂಬ ಬೇಡಿಕೆಯನ್ನು ಎಂಟು ಮಂದಿ ತೆಲಂಗಾಣ ಸಚಿವರು ಇಂದು ವಿರೋಧಿಸಿದರು.</p>.<p>ಪ್ರತ್ಯೇಕ ತೆಲಂಗಾಣ ಅಥವಾ ಪ್ರತ್ಯೇಕ ಆಂಧ್ರ ರಾಜ್ಯ ಬದುಕಲಾರದು. ಒಂದು ಪಕ್ಷ ಹಾಗೆ ಪ್ರತ್ಯೇಕ ರಾಜ್ಯವಾಗಿ ಬದುಕಿದರೂ ಅವು ಯಾವುದೂ ಪ್ರಕೃತಿ ದತ್ತವಾಗಿರುವ ಸಂಪನ್ಮೂಲವನ್ನು ಬಳಸಿಕೊಳ್ಳುವುದಕ್ಕೆ ಸಮರ್ಥವಾಗುವುದಿಲ್ಲ ಎಂದೂ ಅವರು ತಿಳಿಸಿದರು.</p>.<p>ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದ ರೆಡ್ಡಿ ಅವರ ಜೊತೆ ಚರ್ಚೆ ನಡೆಸಿದನಂತರ ಅವರು ಸಂಯುಕ್ತ ಹೇಳಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>