<p><strong>ರಾಜ್ಯದ ಆಡಳಿತದಲ್ಲಿ ಪ್ರಾದೇಶಿಕ ಅಸಮತೆ, ಜಾತೀಯತೆ ಆರೋಪ</strong></p>.<p><strong>ಬೆಂಗಳೂರು, ಏ. 8–</strong> ರಾಜ್ಯದ ಆಡಳಿತದಲ್ಲಿ ಪ್ರಾದೇಶಿಕ ಅಸಮತೆ ಮತ್ತು ಜಾತೀಯತೆಯ ಆಪಾದನೆಯನ್ನು ಇಂದು ವಿಧಾನ ಮಂಡಲದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾಡಲಾಯಿತೆಂದು ತಿಳಿದುಬಂದಿದೆ.</p>.<p>ಶಿವಮೊಗ್ಗೆಯ ಶ್ರೀ ಎ.ಆರ್. ಬದರೀನಾರಾಯಣ್ ಅವರು ಮುಖ್ಯಮಂತ್ರಿಯವರಿಗೆ ಬರೆದ ಒಂದು ಪತ್ರ ಚರ್ಚೆಗೆ ಬಂದಾಗ ಈ ಆಪಾದನೆಗಳನ್ನು ಮಾಡಲಾಯಿತೆಂದು ವರದಿಯಾಗಿದೆ.</p>.<p><strong>ರಾಯಚೂರು ಬಳಿ ನಮ್ಮ ಪ್ರದೇಶದೊಳಗೆ ಆಂಧ್ರ ಗಡಿಕಂಬ ನೆಟ್ಟಿಲ್ಲ– ಪಾಟೀಲ್</strong></p>.<p><strong>ಬೆಂಗಳೂರು, ಏ. 8–</strong> ರಾಯಚೂರು ತಾಲ್ಲೂಕಿನ ಸಿಂಗನುಡಿ ಗ್ರಾಮದಲ್ಲಿ ಗಡಿಕಂಬಗಳನ್ನು ನೆಟ್ಟು, ಆಂಧ್ರಪ್ರದೇಶ ಸರ್ಕಾರ, ಮೈಸೂರಿನ ಮೂರು ಮೈಲಿಗಳುದ್ದದ ಪ್ರದೇಶವನ್ನು ಅತಿಕ್ರಮಿಸಿದೆ ಎಂಬ ವರದಿಯನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನ ಸಭೆಯಲ್ಲಿ ನಿರಾಕರಿಸಿದರು.</p>.<p>ಜಿಲ್ಲಾಧಿಕಾರಿಗಳು ಇಂದು ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ ನಡೆಸಿದ ಪರಿಶೀಲನೆಯ ಪ್ರಕಾರ ಅಂಥ ಯಾವುದೇ ಅತಿಕ್ರಮಣ ನಡೆದುದು ಕಂಡುಬಂದಿಲ್ಲ ಎಂದು ಅವರು ಪ್ರಶ್ನೋತ್ತರ ಕಾಲದ ನಂತರ ಹಲವಾರು ಸದಸ್ಯರು ಎತ್ತಿದ ಸೂಚನೆಗಳಿಗೆ ಉತ್ತರವಾಗಿ ಹೇಳಿದರು.</p>.<p><strong>ಹಿಟ್ಲರ್ ಆಸೆ</strong></p>.<p><strong>ನ್ಯೂಯಾರ್ಕ್, ಏ. 8–</strong> ತಮ್ಮ ಜರ್ಮನ್ ಸಾಮ್ರಾಜ್ಯಕ್ಕೆ ಅಟಾಟೋಪದ ರಾಜಧಾನಿಯೊಂದು ಅಗತ್ಯವೆಂದೂ, ಅದಕ್ಕಾಗಿ ಬರ್ಲಿನ್ ನಗರವನ್ನು ಪುನರ್ ನಿರ್ಮಿಸಲು ಯೋಜನೆ ಸಿದ್ಧಪಡಿಸಬೇಕೆಂದೂ ಅಡಾಲ್ಫ್ ಹಿಟ್ಲರ್ 1936ರ ಬೇಸಿಗೆಯಲ್ಲಿ ಆಜ್ಞೆ ಮಾಡಿದ್ದರು.</p>.<p>ಈ ಯೋಜನೆಯನ್ನು ಕಾರ್ಯಗತಗೊಳಿಸಲು ಹಿಟ್ಲರ್ ಆಯ್ಕೆ ಮಾಡಿದ ವ್ಯಕ್ತಿ ಆಲ್ಬರ್ಟ್ ಸ್ಫೀರ್, ನಾಜಿ ಜರ್ಮನಿಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳ ಮಂತ್ರಿಯಾಗಿದ್ದಾಗ ಎಸಗಿದ ಯುದ್ಧಾಪರಾಧಗಳಿಗಾಗಿ 20 ವರ್ಷ ಶಿಕ್ಷೆ ಅನುಭವಿಸಿದ್ದನು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದ ಆಡಳಿತದಲ್ಲಿ ಪ್ರಾದೇಶಿಕ ಅಸಮತೆ, ಜಾತೀಯತೆ ಆರೋಪ</strong></p>.<p><strong>ಬೆಂಗಳೂರು, ಏ. 8–</strong> ರಾಜ್ಯದ ಆಡಳಿತದಲ್ಲಿ ಪ್ರಾದೇಶಿಕ ಅಸಮತೆ ಮತ್ತು ಜಾತೀಯತೆಯ ಆಪಾದನೆಯನ್ನು ಇಂದು ವಿಧಾನ ಮಂಡಲದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾಡಲಾಯಿತೆಂದು ತಿಳಿದುಬಂದಿದೆ.</p>.<p>ಶಿವಮೊಗ್ಗೆಯ ಶ್ರೀ ಎ.ಆರ್. ಬದರೀನಾರಾಯಣ್ ಅವರು ಮುಖ್ಯಮಂತ್ರಿಯವರಿಗೆ ಬರೆದ ಒಂದು ಪತ್ರ ಚರ್ಚೆಗೆ ಬಂದಾಗ ಈ ಆಪಾದನೆಗಳನ್ನು ಮಾಡಲಾಯಿತೆಂದು ವರದಿಯಾಗಿದೆ.</p>.<p><strong>ರಾಯಚೂರು ಬಳಿ ನಮ್ಮ ಪ್ರದೇಶದೊಳಗೆ ಆಂಧ್ರ ಗಡಿಕಂಬ ನೆಟ್ಟಿಲ್ಲ– ಪಾಟೀಲ್</strong></p>.<p><strong>ಬೆಂಗಳೂರು, ಏ. 8–</strong> ರಾಯಚೂರು ತಾಲ್ಲೂಕಿನ ಸಿಂಗನುಡಿ ಗ್ರಾಮದಲ್ಲಿ ಗಡಿಕಂಬಗಳನ್ನು ನೆಟ್ಟು, ಆಂಧ್ರಪ್ರದೇಶ ಸರ್ಕಾರ, ಮೈಸೂರಿನ ಮೂರು ಮೈಲಿಗಳುದ್ದದ ಪ್ರದೇಶವನ್ನು ಅತಿಕ್ರಮಿಸಿದೆ ಎಂಬ ವರದಿಯನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನ ಸಭೆಯಲ್ಲಿ ನಿರಾಕರಿಸಿದರು.</p>.<p>ಜಿಲ್ಲಾಧಿಕಾರಿಗಳು ಇಂದು ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ ನಡೆಸಿದ ಪರಿಶೀಲನೆಯ ಪ್ರಕಾರ ಅಂಥ ಯಾವುದೇ ಅತಿಕ್ರಮಣ ನಡೆದುದು ಕಂಡುಬಂದಿಲ್ಲ ಎಂದು ಅವರು ಪ್ರಶ್ನೋತ್ತರ ಕಾಲದ ನಂತರ ಹಲವಾರು ಸದಸ್ಯರು ಎತ್ತಿದ ಸೂಚನೆಗಳಿಗೆ ಉತ್ತರವಾಗಿ ಹೇಳಿದರು.</p>.<p><strong>ಹಿಟ್ಲರ್ ಆಸೆ</strong></p>.<p><strong>ನ್ಯೂಯಾರ್ಕ್, ಏ. 8–</strong> ತಮ್ಮ ಜರ್ಮನ್ ಸಾಮ್ರಾಜ್ಯಕ್ಕೆ ಅಟಾಟೋಪದ ರಾಜಧಾನಿಯೊಂದು ಅಗತ್ಯವೆಂದೂ, ಅದಕ್ಕಾಗಿ ಬರ್ಲಿನ್ ನಗರವನ್ನು ಪುನರ್ ನಿರ್ಮಿಸಲು ಯೋಜನೆ ಸಿದ್ಧಪಡಿಸಬೇಕೆಂದೂ ಅಡಾಲ್ಫ್ ಹಿಟ್ಲರ್ 1936ರ ಬೇಸಿಗೆಯಲ್ಲಿ ಆಜ್ಞೆ ಮಾಡಿದ್ದರು.</p>.<p>ಈ ಯೋಜನೆಯನ್ನು ಕಾರ್ಯಗತಗೊಳಿಸಲು ಹಿಟ್ಲರ್ ಆಯ್ಕೆ ಮಾಡಿದ ವ್ಯಕ್ತಿ ಆಲ್ಬರ್ಟ್ ಸ್ಫೀರ್, ನಾಜಿ ಜರ್ಮನಿಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳ ಮಂತ್ರಿಯಾಗಿದ್ದಾಗ ಎಸಗಿದ ಯುದ್ಧಾಪರಾಧಗಳಿಗಾಗಿ 20 ವರ್ಷ ಶಿಕ್ಷೆ ಅನುಭವಿಸಿದ್ದನು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>