ಮದ್ರಾಸ್, ನ. 30– ತಮ್ಮ ನಾಯಕತ್ವದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ಸಿಗರ ಬಹುಮತ ಬೆಂಬಲವಿದ್ದಾಗೂ ಯಾವುದು ದಿಟವಾದ ಕಾಂಗ್ರೆಸ್ ಎಂಬುದು ಅಹಮದಾಬಾದ್ ಮತ್ತು ಮುಂಬಯಿಗಳಲ್ಲಿ ನಡೆಯಲಿರುವ ಪೂರ್ಣಾಧಿವೇಶನದ ನಂತರ ಸ್ಪಷ್ಟಗೊಳ್ಳುವುದೆಂದು ಶ್ರೀಮತಿ ಇಂದಿರಾ ಗಾಂಧಿಯವರ ಬಣದ ಕಾಂಗ್ರೆಸ್ಸಿನ ಹಂಗಾಮಿ ಅಧ್ಯಕ್ಷ ಸಿ. ಸುಬ್ರಹ್ಮಣ್ಯಂ ಅವರು ಇಂದು ಇಲ್ಲಿ ತಿಳಿಸಿದರು.