ಬೆಂಗಳೂರು, ಡಿ. 12– ಕೆಲವು ವರ್ಷಗಳಿಂದ ವದಂತಿ ರೂಪದಲ್ಲಿ ಹರಡಿ ಈಚಿನ ತಿಂಗಳುಗಳಲ್ಲಿ ವಿಧಾನ ಮಂಡಲದಲ್ಲಿ ಎದ್ದು, ಪತ್ರಿಕೆಗಳಲ್ಲಿ ಬಂದು, ಜನರಲ್ಲಿ ಅಪಾರ ಕುತೂಹಲ ಹುಟ್ಟಿಸಿದ ಭದ್ರಾವತಿಯ ಉಕ್ಕು ಕಾರ್ಖಾನೆಯ ದುಃಸ್ಥಿತಿಗೆ ಅಲ್ಲಿ ಕಂಡುಬಂದಿರುವ ಅವ್ಯವಸ್ಥೆ, ಅದಕ್ಷ ನಿರ್ವಹಣೆ ಕಾರಣವೆಂದು ವಿಧಾನಸಭೆಯ ಅಂದಾಜು ಪರಿಶೀಲಕ ಸಮಿತಿ ಅಭಿಪ್ರಾಯಪಟ್ಟಿದೆ.