ಅಕ್ಕಿಯ ಕಣಜವಾದ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ರೈತರು ವ್ಯಾಪಾರ ವಹಿವಾಟಿಗೆ ಎಪಿಎಂಸಿಯನ್ನೇ ನೆಚ್ಚಿಕೊಂಡಿದ್ದಾರೆ. ಇಲ್ಲಿನ ಅಕ್ಕಿ ವಿದೇಶಕ್ಕೆ ರಫ್ತಾಗುತ್ತದೆ. ಹೀಗಾಗಿ, ಭದ್ರತೆಯ ದೃಷ್ಟಿಯಿಂದ ಎಪಿಎಂಸಿಯಲ್ಲಿ ರೈತರು ಹೆಚ್ಚು ವಹಿವಾಟು ನಡೆಸುತ್ತಾರೆ. ಆದರೆ, ಕೊಪ್ಪಳ ಜಿಲ್ಲೆಯ ಇತರ ಕೆಲವೆಡೆ ರೈತರ ಉತ್ಪನ್ನಗಳನ್ನು ಖಾಸಗಿಯರೇ ಹೆಚ್ಚಾಗಿ ಖರೀದಿಸುತ್ತಿದ್ದು, ಎಪಿಎಂಸಿಗಳು ನಷ್ಟ ಅನುಭವಿಸುತ್ತಿವೆ.