‘ಹಿಂತಾ ಅಡ್ನಾಡಿ ಲೇಖನನೆಲ್ಲ ತಗಳಂಗಿಲ್ಲ’ ಎಂದೆ. ‘ಈ ಲೇಖನ ತಗಳದಿದ್ರೆ, ಇದ್ರಾಗೆ ಅಂಕಿಸಂಖ್ಯೆ ತೆಗದು, ಒಂದಿಷ್ಟು ಕಣ್ಣೀರು ಚಿಮುಕಿಸಿ, ವಾಕ್ಯಗಳನ್ನು ಅರ್ಧರ್ಧಕ್ಕೆ ಕತ್ತರಿಸಿ, ಕವನ ಮಾಡಿ, ಕಾವ್ಯಗೋಷ್ಠಿಗೆ ಕಳಿಸ್ತೀನು’ ಎಂದು ಭಲೇ ವಿಶ್ವಾಸದಿಂದ ಹೇಳಿತು. ಆಮೇಲೆ ಕುಳಿತು ಪ್ರೊಫೈಲ್ ಸಿದ್ಧಮಾಡುತ್ತ, ‘ನಿರಾಣಿಮಾಮ ಗಣಿಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸ್ತೀವಿ ಅಂದಾನ. ನಾ ಪ್ರೊಫೆಸರ್ ಪೋಸ್ಟಿಗೆ ಅರ್ಜಿ ಹಾಕತೀನಿ’ ಎಂದಿತು.