<blockquote><em>ಗಾಂಧೀಜಿ ಹೆಸರಿನ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸ್ಥಾನದಲ್ಲಿ ಜಾರಿಗೆ ಬಂದಿರುವ ಹೊಸ ಯೋಜನೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು.</em></blockquote>.<p>2005–06ರಲ್ಲಿ ಆರಂಭವಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿಸೂಚನೆ (ಮನರೇಗಾ) ಮೂಲಕ ಗ್ರಾಮೀಣ ಕೂಲಿಕಾರರಿಗೆ ‘ಉದ್ಯೋಗದ ಹಕ್ಕು’ ನೀಡಲಾಗಿತ್ತು. ಆರಂಭದಲ್ಲಿ ಅತ್ಯಂತ ಹಿಂದುಳಿದ 200 ಜಿಲ್ಲೆಗಳಲ್ಲಿ ಜಾರಿಯಾದ ಯೋಜನೆಯನ್ನು 2008–09ರಲ್ಲಿ ದೇಶದಾದ್ಯಂತ ವಿಸ್ತರಿಸಲಾಯಿತು. ಅದು ಬೇಡಿಕೆ ಪ್ರಣೀತ ಹಕ್ಕಿನ ಪರಿಭಾಷೆಯ ಕಾರ್ಯಕ್ರಮವಾಗಿತ್ತು. ಗ್ರಾಮೀಣ ಕೂಲಿಕಾರರು ಉದ್ಯೋಗವನ್ನು ಕೇಳಿದಾಗ ಸ್ಥಳೀಯ ಸರ್ಕಾರಗಳು ಮನರೇಗಾದಡಿ ಉದ್ಯೋಗ ನೀಡಬೇಕಾಗಿತ್ತು. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕಾಗಿತ್ತು. ಇದೀಗ ಮನರೇಗಾಕ್ಕೆ ಬದಲಾಗಿ ಕೇಂದ್ರ ಸರ್ಕಾರ ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಹೆಸರಿನ ಕಾರ್ಯಕ್ರಮವನ್ನು ರೂಪಿಸಿದೆ.</p><p>ಹಕ್ಕುಗಳು ನಮ್ಮ ಭಾರತೀಯ ಪರಂಪರೆಯ ಭಾಗವಲ್ಲ ಎನ್ನುವ ಕೇಂದ್ರ ಸರ್ಕಾರವು, ಹಕ್ಕಿನ ಮನರೇಗಾವನ್ನು ರದ್ದುಪಡಿಸಿ, ಪೂರೈಕೆ ಪ್ರಣೀತ ಸೇವಾ ಪ್ರಧಾನ ‘ವಿಬಿ–ಜಿ ರಾಮ್ ಜಿ’ ಕಾರ್ಯಕ್ರಮ ರೂಪಿಸಿದೆ. ಪ್ರಧಾನಮಂತ್ರಿ ಅವರು 2022ರಲ್ಲಿ ‘ಆಜಾದೀ ಸೇ ಅಮೃತ ಮಹೋತ್ಸವ್’ ಕಾರ್ಯಕ್ರಮ ಉದ್ಘಾಟಿಸುತ್ತಾ, ಹಕ್ಕುಗಳ ಬಗ್ಗೆ ಹೋರಾಡುವುದು ಸಮಯದ ಪೋಲು ಮತ್ತು ಸ್ವಾತಂತ್ರ್ಯಾನಂತರ 75 ವರ್ಷಗಳ ಕಾಲ ಸೇವೆಯನ್ನು ನಿರ್ಲಕ್ಷಿಸಿ ಹಕ್ಕುಗಳ ಬಗ್ಗೆ ಗಮನ ನೀಡುತ್ತಾ ಬಂದಿದ್ದರಿಂದ ನಮ್ಮ ಸಮಾಜವು ದುರ್ಬಲವಾಗುಳಿದಿದೆ ಎಂದಿದ್ದರು. ಅವರ ಟೀಕೆಯು ನೇರವಾಗಿ ಹಕ್ಕುಗಳ ಪ್ರಣಾಳಿಕೆಯಾಗಿರುವ ಅಂಬೇಡ್ಕರ್ ಪ್ರಣೀತ ಸಂವಿಧಾನವನ್ನು ಗುರಿಯಾಗಿಸಿಕೊಂಡಿದೆ.</p><p>ಹಕ್ಕುಗಳಿಗಿಂತ ಇಂದಿನ ಕೇಂದ್ರ ಸರ್ಕಾರಕ್ಕೆ ಸೇವೆ–ಕರ್ತವ್ಯದ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಈ ಸಿದ್ಧಾಂತದ ದೂರಗಾಮಿ ಪರಿಣಾಮವು ಅಪಾಯಕಾರಿ. ಹಕ್ಕುಗಳಿಗಿಂತ ಸೇವೆ–ಕರ್ತವ್ಯ ಮುಖ್ಯ ಎನ್ನುವ ಚಿಂತನೆಯು ನಮ್ಮ ಪ್ರಾಚೀನ ಸಮಾಜದಲ್ಲಿ ಸೇವೆಯನ್ನು ಒಂದು ವರ್ಗಕ್ಕೆ ವಿಧಿಸಲಾಗಿದ್ದ ವ್ಯವಸ್ಥೆಯ ಪುನರುತ್ಥಾನದ ಕ್ರಿಯಾಯೋಜನೆಯಂತೆ ಕಾಣುತ್ತಿದೆ. </p><p>ಮನರೇಗಾ ಸ್ಥಳದಲ್ಲಿ ಜಾರಿಗೊಳಿಸಲು ರೂಪಿಸಿರುವ ವಿಬಿ–ಜಿ ರಾಮ್ ಜಿ ಯೋಜನೆಯು ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡುವ ಕಾರ್ಯ ಯೋಜನೆ. ಈ ಯೋಜನೆಯ ನಿರ್ವಹಣೆಗೆ ರಾಷ್ಟ್ರೀಯ ನಿರ್ವಹಣಾ ಸಮಿತಿಯನ್ನು ಅಧಿಸೂಚನೆಯ ಸೆಕ್ಷನ್ 14ರ ಪ್ರಕಾರ ಕೇಂದ್ರ ಸರ್ಕಾರವು ರಚಿಸುತ್ತದೆ. ಇದು ಮನರೇಗಾಕ್ಕಿಂತ ಭಿನ್ನವಾಗಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುತ್ತದೆ. ಹೀಗೆ ಇದು ಮೇಲಿನಿಂದ ಹೇರಲಾಗುವ ಕಾರ್ಯಕ್ರಮವಾಗುತ್ತದೆಯೇ ವಿನಾ ಕೆಳಗಿನಿಂದ ರೂಪುಗೊಳ್ಳುವ ಕಾರ್ಯಕ್ರಮವಲ್ಲ. ಇಲ್ಲಿ ‘ಸ್ಥಳೀಯತೆ’ಗೆ ಹೆಚ್ಚಿನ ಅವಕಾಶವಿಲ್ಲ. ಗ್ರಾಮೀಣ ಉದ್ಯೋಗ ಕಾರ್ಯಕ್ರಮಕ್ಕೆ ರಾಜ್ಯವಾರು ವಾರ್ಷಿಕ ಅನುದಾನವನ್ನು ಕೇಂದ್ರವೇ ತನ್ನ ಬಜೆಟ್ನಲ್ಲಿ ನಿರ್ಧರಿಸುತ್ತದೆ. ಮನರೇಗಾದಲ್ಲಿ ಪ್ರತಿ ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಈಗ ಇದನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಇದೇನೋ ಸ್ವಾಗತಾರ್ಹ. ಆದರೆ, ಕೃಷಿ ಹಂಗಾಮಿನಲ್ಲಿ 60 ದಿನಗಳು ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಇಲ್ಲಿನ ಪ್ರಶ್ನೆ ಎಂದರೆ, ಗ್ರಾಮೀಣ ಭೂರಹಿತ ಕೂಲಿಕಾರರಿಗೆ ‘ಕೃಷಿ ಹಂಗಾಮು’ ಎನ್ನುವುದು ಎಲ್ಲಿರುತ್ತದೆ? ಅವರು ವರ್ಷದ 365 ದಿನವೂ ಕೂಲಿಗೆ ದುಡಿಯಬೇಕಾಗಿರುತ್ತದೆ.</p><p>ಮನರೇಗಾ ಕಾರ್ಯಕ್ರಮದಲ್ಲಿ ವೆಚ್ಚವನ್ನು ಪೂರ್ಣವಾಗಿ ಕೇಂದ್ರ ಭರಿಸುತ್ತಿತ್ತು. ಈಗ ಕೇಂದ್ರದ ಪಾಲು ಶೇ 60ಕ್ಕಿಳಿದರೆ, ರಾಜ್ಯದ ಹೊರೆ ಶೇ 40ರಷ್ಟು ಹೆಚ್ಚಾಗುತ್ತದೆ. ಹೊಸ ಕಾರ್ಯಕ್ರಮವು ‘ಬಜೆಟ್ ಕ್ಯಾಪ್’ ಕಾರ್ಯಕ್ರಮವಾಗಿರುವುದರಿಂದ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಬಂದರೆ, ಅದರ ವೆಚ್ಚವನ್ನು ರಾಜ್ಯಗಳೇ ಭರಿಸಬೇಕು. ಹೀಗೆ ಬದಲಾದ ಉದ್ಯೋಗ ಖಾತರಿ ಯೋಜನೆಯು ನಿರ್ವಹಣೆಯ ಸೂತ್ರ ಕೇಂದ್ರ ಸರ್ಕಾರಕ್ಕಿದ್ದರೆ ಅದರ ಬಾಬ್ತು, ಹೆಚ್ಚಿನ ವೆಚ್ಚದ ಭಾರವನ್ನು ರಾಜ್ಯಗಳು ಹೊರಬೇಕಾಗುತ್ತದೆ. ರಾಜ್ಯಗಳು ಹಕ್ಕುಗಳಿಲ್ಲದೆ ಬರೀ ಕೇಂದ್ರದ ಸೇವೆಯನ್ನು ಮಾಡುವ ಘಟಕಗಳಾಗಿ ಬಿಡುತ್ತವೆ.</p><p>ವಿಬಿ–ಜಿ ರಾಮ್ ಜಿ ಕಾರ್ಯಯೋಜನೆಯು ಸಂಪೂರ್ಣವಾಗಿ ಕೇಂದ್ರ ನಿಯಂತ್ರಿತ ಕಾರ್ಯಕ್ರಮವಾಗಿದೆ. ಇದನ್ನು ಅತಿಯಾದ ತಂತ್ರಜ್ಞಾನ ಅವಲಂಬಿತ ಯೋಜನೆಯನ್ನಾಗಿ ಮಾಡಲಾಗಿದೆ; ಆಧಾರ್ ಮತ್ತು ಜಾಬ್ಕಾರ್ಡ್ಗಳ ನಡುವಿನ ವ್ಯತ್ಯಯಗಳು ಅನೇಕ ಸಂದರ್ಭದಲ್ಲಿ ದುಡಿಮೆಗಾರರನ್ನು ಹೊರದೂಡುವ ಸ್ಥಿತಿಗೆ ಅವಕಾಶ ಕಲ್ಪಿಸಬಹುದು. ಯಾವುದನ್ನು ಗ್ರಾಮೀಣ ಭಾರತಕ್ಕೆ ಸಂಬಂಧಿಸಿದಂತೆ ‘ಡಿಜಿಟಲ್ ಡಿವೈಡ್’ ಎನ್ನುತ್ತೇವೆಯೋ ಅದನ್ನು ಇದು ಉಲ್ಬಣಗೊಳಿಸುತ್ತದೆ. ಇದು ದುಡಿಮೆಗಾರರನ್ನು ಹಂಗಿನ ನೆಲೆಗೆ ದೂಡುವ ಕಾರ್ಯಕ್ರಮವಾಗಿದೆ. ಏಕೆಂದರೆ, ಗ್ರಾಮೀಣ ದುಡಿಮೆಗಾರರು ಉದ್ಯೋಗದ ಬೇಡಿಕೆಯನ್ನಿಟ್ಟು ಅದನ್ನು ಪಡೆದುಕೊಳ್ಳುವ ಕಾರ್ಯಕ್ರಮ ಇದಲ್ಲ. ಸರ್ಕಾರವು ಕೃಪೆ ಮಾಡಿದ ಉದ್ಯೋಗವನ್ನು ಸ್ವೀಕರಿಸಬೇಕಾದ ಒಂದು ಸ್ಥಿತಿಯನ್ನು ಇದು ಒಳಗೊಂಡಿದೆ.</p><p>ಮನರೇಗಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ವಿರೋಧಿಸುತ್ತಲೇ ಬಂದಿದ್ದಾರೆ. ಅದನ್ನು ಯುಪಿಎ ಸರ್ಕಾರದ ವೈಫಲ್ಯದ ಜೀವಂತ ಸ್ಮಾರಕ ಎಂದು 2015ರಲ್ಲಿ ಸಂಸತ್ತಿನಲ್ಲಿ ಟೀಕಿಸಿದ್ದರು. ಯೋಜನೆಯ ಹೆಸರಿನಲ್ಲಿದ್ದ ಮಹಾತ್ಮ ಗಾಂಧೀಜಿ ಬಗ್ಗೆ ಪ್ರಸ್ತುತ ಸರ್ಕಾರಕ್ಕೆ ಭಿನ್ನಮತವಿದೆ. ಗಾಂಧೀಜಿಯ ರಾಮರಾಜ್ಯಕ್ಕೂ (ಹೇ ರಾಮ್) ಮತ್ತು ಇಂದಿನ ಸರ್ಕಾರದ ರಾಮರಾಜ್ಯಕ್ಕೂ (ಜೈ ಶ್ರೀರಾಮ್) ಬಹಳ ವ್ಯತ್ಯಾಸವಿದೆ. ಗ್ರಾಮೀಣ ಬಡ ಕೂಲಿಕಾರರಿಗೆ ಒಂದು ಮುಕ್ತವಾದ ಬೇಡಿಕೆ ಆಧಾರದ ಹಕ್ಕು ಆಗಿರುವ ಮನರೇಗಾ ಕಾರ್ಯಯೋಜನೆಯನ್ನು ಕೊಲ್ಲಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote><em>ಗಾಂಧೀಜಿ ಹೆಸರಿನ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸ್ಥಾನದಲ್ಲಿ ಜಾರಿಗೆ ಬಂದಿರುವ ಹೊಸ ಯೋಜನೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು.</em></blockquote>.<p>2005–06ರಲ್ಲಿ ಆರಂಭವಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿಸೂಚನೆ (ಮನರೇಗಾ) ಮೂಲಕ ಗ್ರಾಮೀಣ ಕೂಲಿಕಾರರಿಗೆ ‘ಉದ್ಯೋಗದ ಹಕ್ಕು’ ನೀಡಲಾಗಿತ್ತು. ಆರಂಭದಲ್ಲಿ ಅತ್ಯಂತ ಹಿಂದುಳಿದ 200 ಜಿಲ್ಲೆಗಳಲ್ಲಿ ಜಾರಿಯಾದ ಯೋಜನೆಯನ್ನು 2008–09ರಲ್ಲಿ ದೇಶದಾದ್ಯಂತ ವಿಸ್ತರಿಸಲಾಯಿತು. ಅದು ಬೇಡಿಕೆ ಪ್ರಣೀತ ಹಕ್ಕಿನ ಪರಿಭಾಷೆಯ ಕಾರ್ಯಕ್ರಮವಾಗಿತ್ತು. ಗ್ರಾಮೀಣ ಕೂಲಿಕಾರರು ಉದ್ಯೋಗವನ್ನು ಕೇಳಿದಾಗ ಸ್ಥಳೀಯ ಸರ್ಕಾರಗಳು ಮನರೇಗಾದಡಿ ಉದ್ಯೋಗ ನೀಡಬೇಕಾಗಿತ್ತು. ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕಾಗಿತ್ತು. ಇದೀಗ ಮನರೇಗಾಕ್ಕೆ ಬದಲಾಗಿ ಕೇಂದ್ರ ಸರ್ಕಾರ ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಹೆಸರಿನ ಕಾರ್ಯಕ್ರಮವನ್ನು ರೂಪಿಸಿದೆ.</p><p>ಹಕ್ಕುಗಳು ನಮ್ಮ ಭಾರತೀಯ ಪರಂಪರೆಯ ಭಾಗವಲ್ಲ ಎನ್ನುವ ಕೇಂದ್ರ ಸರ್ಕಾರವು, ಹಕ್ಕಿನ ಮನರೇಗಾವನ್ನು ರದ್ದುಪಡಿಸಿ, ಪೂರೈಕೆ ಪ್ರಣೀತ ಸೇವಾ ಪ್ರಧಾನ ‘ವಿಬಿ–ಜಿ ರಾಮ್ ಜಿ’ ಕಾರ್ಯಕ್ರಮ ರೂಪಿಸಿದೆ. ಪ್ರಧಾನಮಂತ್ರಿ ಅವರು 2022ರಲ್ಲಿ ‘ಆಜಾದೀ ಸೇ ಅಮೃತ ಮಹೋತ್ಸವ್’ ಕಾರ್ಯಕ್ರಮ ಉದ್ಘಾಟಿಸುತ್ತಾ, ಹಕ್ಕುಗಳ ಬಗ್ಗೆ ಹೋರಾಡುವುದು ಸಮಯದ ಪೋಲು ಮತ್ತು ಸ್ವಾತಂತ್ರ್ಯಾನಂತರ 75 ವರ್ಷಗಳ ಕಾಲ ಸೇವೆಯನ್ನು ನಿರ್ಲಕ್ಷಿಸಿ ಹಕ್ಕುಗಳ ಬಗ್ಗೆ ಗಮನ ನೀಡುತ್ತಾ ಬಂದಿದ್ದರಿಂದ ನಮ್ಮ ಸಮಾಜವು ದುರ್ಬಲವಾಗುಳಿದಿದೆ ಎಂದಿದ್ದರು. ಅವರ ಟೀಕೆಯು ನೇರವಾಗಿ ಹಕ್ಕುಗಳ ಪ್ರಣಾಳಿಕೆಯಾಗಿರುವ ಅಂಬೇಡ್ಕರ್ ಪ್ರಣೀತ ಸಂವಿಧಾನವನ್ನು ಗುರಿಯಾಗಿಸಿಕೊಂಡಿದೆ.</p><p>ಹಕ್ಕುಗಳಿಗಿಂತ ಇಂದಿನ ಕೇಂದ್ರ ಸರ್ಕಾರಕ್ಕೆ ಸೇವೆ–ಕರ್ತವ್ಯದ ಬಗ್ಗೆ ಹೆಚ್ಚಿನ ವಿಶ್ವಾಸವಿದೆ. ಈ ಸಿದ್ಧಾಂತದ ದೂರಗಾಮಿ ಪರಿಣಾಮವು ಅಪಾಯಕಾರಿ. ಹಕ್ಕುಗಳಿಗಿಂತ ಸೇವೆ–ಕರ್ತವ್ಯ ಮುಖ್ಯ ಎನ್ನುವ ಚಿಂತನೆಯು ನಮ್ಮ ಪ್ರಾಚೀನ ಸಮಾಜದಲ್ಲಿ ಸೇವೆಯನ್ನು ಒಂದು ವರ್ಗಕ್ಕೆ ವಿಧಿಸಲಾಗಿದ್ದ ವ್ಯವಸ್ಥೆಯ ಪುನರುತ್ಥಾನದ ಕ್ರಿಯಾಯೋಜನೆಯಂತೆ ಕಾಣುತ್ತಿದೆ. </p><p>ಮನರೇಗಾ ಸ್ಥಳದಲ್ಲಿ ಜಾರಿಗೊಳಿಸಲು ರೂಪಿಸಿರುವ ವಿಬಿ–ಜಿ ರಾಮ್ ಜಿ ಯೋಜನೆಯು ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡುವ ಕಾರ್ಯ ಯೋಜನೆ. ಈ ಯೋಜನೆಯ ನಿರ್ವಹಣೆಗೆ ರಾಷ್ಟ್ರೀಯ ನಿರ್ವಹಣಾ ಸಮಿತಿಯನ್ನು ಅಧಿಸೂಚನೆಯ ಸೆಕ್ಷನ್ 14ರ ಪ್ರಕಾರ ಕೇಂದ್ರ ಸರ್ಕಾರವು ರಚಿಸುತ್ತದೆ. ಇದು ಮನರೇಗಾಕ್ಕಿಂತ ಭಿನ್ನವಾಗಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುತ್ತದೆ. ಹೀಗೆ ಇದು ಮೇಲಿನಿಂದ ಹೇರಲಾಗುವ ಕಾರ್ಯಕ್ರಮವಾಗುತ್ತದೆಯೇ ವಿನಾ ಕೆಳಗಿನಿಂದ ರೂಪುಗೊಳ್ಳುವ ಕಾರ್ಯಕ್ರಮವಲ್ಲ. ಇಲ್ಲಿ ‘ಸ್ಥಳೀಯತೆ’ಗೆ ಹೆಚ್ಚಿನ ಅವಕಾಶವಿಲ್ಲ. ಗ್ರಾಮೀಣ ಉದ್ಯೋಗ ಕಾರ್ಯಕ್ರಮಕ್ಕೆ ರಾಜ್ಯವಾರು ವಾರ್ಷಿಕ ಅನುದಾನವನ್ನು ಕೇಂದ್ರವೇ ತನ್ನ ಬಜೆಟ್ನಲ್ಲಿ ನಿರ್ಧರಿಸುತ್ತದೆ. ಮನರೇಗಾದಲ್ಲಿ ಪ್ರತಿ ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಈಗ ಇದನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಇದೇನೋ ಸ್ವಾಗತಾರ್ಹ. ಆದರೆ, ಕೃಷಿ ಹಂಗಾಮಿನಲ್ಲಿ 60 ದಿನಗಳು ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಇಲ್ಲಿನ ಪ್ರಶ್ನೆ ಎಂದರೆ, ಗ್ರಾಮೀಣ ಭೂರಹಿತ ಕೂಲಿಕಾರರಿಗೆ ‘ಕೃಷಿ ಹಂಗಾಮು’ ಎನ್ನುವುದು ಎಲ್ಲಿರುತ್ತದೆ? ಅವರು ವರ್ಷದ 365 ದಿನವೂ ಕೂಲಿಗೆ ದುಡಿಯಬೇಕಾಗಿರುತ್ತದೆ.</p><p>ಮನರೇಗಾ ಕಾರ್ಯಕ್ರಮದಲ್ಲಿ ವೆಚ್ಚವನ್ನು ಪೂರ್ಣವಾಗಿ ಕೇಂದ್ರ ಭರಿಸುತ್ತಿತ್ತು. ಈಗ ಕೇಂದ್ರದ ಪಾಲು ಶೇ 60ಕ್ಕಿಳಿದರೆ, ರಾಜ್ಯದ ಹೊರೆ ಶೇ 40ರಷ್ಟು ಹೆಚ್ಚಾಗುತ್ತದೆ. ಹೊಸ ಕಾರ್ಯಕ್ರಮವು ‘ಬಜೆಟ್ ಕ್ಯಾಪ್’ ಕಾರ್ಯಕ್ರಮವಾಗಿರುವುದರಿಂದ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಬಂದರೆ, ಅದರ ವೆಚ್ಚವನ್ನು ರಾಜ್ಯಗಳೇ ಭರಿಸಬೇಕು. ಹೀಗೆ ಬದಲಾದ ಉದ್ಯೋಗ ಖಾತರಿ ಯೋಜನೆಯು ನಿರ್ವಹಣೆಯ ಸೂತ್ರ ಕೇಂದ್ರ ಸರ್ಕಾರಕ್ಕಿದ್ದರೆ ಅದರ ಬಾಬ್ತು, ಹೆಚ್ಚಿನ ವೆಚ್ಚದ ಭಾರವನ್ನು ರಾಜ್ಯಗಳು ಹೊರಬೇಕಾಗುತ್ತದೆ. ರಾಜ್ಯಗಳು ಹಕ್ಕುಗಳಿಲ್ಲದೆ ಬರೀ ಕೇಂದ್ರದ ಸೇವೆಯನ್ನು ಮಾಡುವ ಘಟಕಗಳಾಗಿ ಬಿಡುತ್ತವೆ.</p><p>ವಿಬಿ–ಜಿ ರಾಮ್ ಜಿ ಕಾರ್ಯಯೋಜನೆಯು ಸಂಪೂರ್ಣವಾಗಿ ಕೇಂದ್ರ ನಿಯಂತ್ರಿತ ಕಾರ್ಯಕ್ರಮವಾಗಿದೆ. ಇದನ್ನು ಅತಿಯಾದ ತಂತ್ರಜ್ಞಾನ ಅವಲಂಬಿತ ಯೋಜನೆಯನ್ನಾಗಿ ಮಾಡಲಾಗಿದೆ; ಆಧಾರ್ ಮತ್ತು ಜಾಬ್ಕಾರ್ಡ್ಗಳ ನಡುವಿನ ವ್ಯತ್ಯಯಗಳು ಅನೇಕ ಸಂದರ್ಭದಲ್ಲಿ ದುಡಿಮೆಗಾರರನ್ನು ಹೊರದೂಡುವ ಸ್ಥಿತಿಗೆ ಅವಕಾಶ ಕಲ್ಪಿಸಬಹುದು. ಯಾವುದನ್ನು ಗ್ರಾಮೀಣ ಭಾರತಕ್ಕೆ ಸಂಬಂಧಿಸಿದಂತೆ ‘ಡಿಜಿಟಲ್ ಡಿವೈಡ್’ ಎನ್ನುತ್ತೇವೆಯೋ ಅದನ್ನು ಇದು ಉಲ್ಬಣಗೊಳಿಸುತ್ತದೆ. ಇದು ದುಡಿಮೆಗಾರರನ್ನು ಹಂಗಿನ ನೆಲೆಗೆ ದೂಡುವ ಕಾರ್ಯಕ್ರಮವಾಗಿದೆ. ಏಕೆಂದರೆ, ಗ್ರಾಮೀಣ ದುಡಿಮೆಗಾರರು ಉದ್ಯೋಗದ ಬೇಡಿಕೆಯನ್ನಿಟ್ಟು ಅದನ್ನು ಪಡೆದುಕೊಳ್ಳುವ ಕಾರ್ಯಕ್ರಮ ಇದಲ್ಲ. ಸರ್ಕಾರವು ಕೃಪೆ ಮಾಡಿದ ಉದ್ಯೋಗವನ್ನು ಸ್ವೀಕರಿಸಬೇಕಾದ ಒಂದು ಸ್ಥಿತಿಯನ್ನು ಇದು ಒಳಗೊಂಡಿದೆ.</p><p>ಮನರೇಗಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ವಿರೋಧಿಸುತ್ತಲೇ ಬಂದಿದ್ದಾರೆ. ಅದನ್ನು ಯುಪಿಎ ಸರ್ಕಾರದ ವೈಫಲ್ಯದ ಜೀವಂತ ಸ್ಮಾರಕ ಎಂದು 2015ರಲ್ಲಿ ಸಂಸತ್ತಿನಲ್ಲಿ ಟೀಕಿಸಿದ್ದರು. ಯೋಜನೆಯ ಹೆಸರಿನಲ್ಲಿದ್ದ ಮಹಾತ್ಮ ಗಾಂಧೀಜಿ ಬಗ್ಗೆ ಪ್ರಸ್ತುತ ಸರ್ಕಾರಕ್ಕೆ ಭಿನ್ನಮತವಿದೆ. ಗಾಂಧೀಜಿಯ ರಾಮರಾಜ್ಯಕ್ಕೂ (ಹೇ ರಾಮ್) ಮತ್ತು ಇಂದಿನ ಸರ್ಕಾರದ ರಾಮರಾಜ್ಯಕ್ಕೂ (ಜೈ ಶ್ರೀರಾಮ್) ಬಹಳ ವ್ಯತ್ಯಾಸವಿದೆ. ಗ್ರಾಮೀಣ ಬಡ ಕೂಲಿಕಾರರಿಗೆ ಒಂದು ಮುಕ್ತವಾದ ಬೇಡಿಕೆ ಆಧಾರದ ಹಕ್ಕು ಆಗಿರುವ ಮನರೇಗಾ ಕಾರ್ಯಯೋಜನೆಯನ್ನು ಕೊಲ್ಲಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>